ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಐಯ್ಯರ್ 
ಕ್ರಿಕೆಟ್

ಸಹ ಆಟಗಾರ ಶ್ರೇಯಸ್ ಐಯ್ಯರ್ ಮನೆಯಲ್ಲಿ ನೀರ್ ದೋಸೆ ಸವಿದ ವಿರಾಟ ಕೊಹ್ಲಿ

ನೀರ್ ದೋಸೆ ಕರಾವಳಿಯ ಸಾಂಪ್ರದಾಯಿಕ ಜನಪ್ರಿಯ ತಿಂಡಿ. ಇದರ ರುಚಿಯನ್ನು ಇತ್ತೀಚೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸವಿದಿದ್ದರಂತೆ. ಅದು ಸಹ ಆಟಗಾರ ಶ್ರೇಯಸ್ ಐಯ್ಯರ್ ಅವರ ಮನೆಯಲ್ಲಿ.

ನವದೆಹಲಿ: ನೀರ್ ದೋಸೆ ಕರಾವಳಿಯ ಸಾಂಪ್ರದಾಯಿಕ ಜನಪ್ರಿಯ ತಿಂಡಿ. ಇದರ ರುಚಿಯನ್ನು ಇತ್ತೀಚೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸವಿದಿದ್ದರಂತೆ. ಅದು ಸಹ ಆಟಗಾರ ಶ್ರೇಯಸ್ ಐಯ್ಯರ್ ಅವರ ಮನೆಯಲ್ಲಿ.

ಮುಂಬೈಯಲ್ಲಿ ವಿರಾಟ್ ಕೊಹ್ಲಿ ಅವರ ಮನೆಯ ಹತ್ತಿರದಲ್ಲಿಯೇ ಶ್ರೇಯಸ್ ಐಯ್ಯರ್ ಮನೆಯಿರುವುದು. ಇತ್ತೀಚೆಗೆ ಕೊರೋನಾ ಲಾಕ್ ಡೌನ್ ಮಧ್ಯೆ ಶ್ರೇಯಸ್ ಮನೆಗೆ ಕೊಹ್ಲಿ ಹೋಗಿದ್ದರಂತೆ. ಆಗ ಶ್ರೇಯಸ್ ಅಮ್ಮ ವಿರಾಟ್ ಗೆ ವಿಶೇಷವಾಗಿ ನೀರ್ ದೋಸೆ ಮಾಡಿ ಕೊಟ್ಟರಂತೆ.

ಮಂಗಳೂರು ಕಡೆಯ ನೀರ್ ದೋಸೆ ತಿಂದು ವಿರಾಟ್ ಕೊಹ್ಲಿ ತುಂಬಾ ಇಷ್ಟಪಟ್ಟು ಅದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿರುವ ಗೆಳೆಯ ನಮಗೆ ಮನೆರುಚಿಯ ಸೊಗಸಾದ ನೀರ್ ದೋಸೆ ಮಾಡಿ ಬಡಿಸಿದ್ದಾನೆ. ಇಷ್ಟೊಂದು ರುಚಿಯ ದೋಸೆ ತಿಂದು ಬಹಳ ಸಮಯಗಳಾಗಿತ್ತು. ನಿಮ್ಮ ತಾಯಿಗೆ ದೊಡ್ಡ ಥ್ಯಾಂಕ್ಸ್, ಅದಕ್ಕೆ ಪ್ರತಿಯಾಗಿ ನಾವು ಕಳುಹಿಸಿಕೊಟ್ಟ ಮಶ್ರೂಮ್ ಬಿರಿಯಾನಿ ನಿಮಗೆ ಇಷ್ಟವಾಗಿರಬಹುದು ಎಂದು ಭಾವಿಸುತ್ತೇನೆ. ಶ್ರೇಯಸ್ ಐಯ್ಯರ್ ಒಳ್ಳೆ  ಮನುಷ್ಯ, ನಾವಿಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಭೇಟಿಯಾಗಿದ್ದೇವೆ ಎಂದು ಹೇಳಲು ಬಯಸುತ್ತೇನೆ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ ಸ್ಪಿನ್ನರ್ ಯುಜುವೇಂದ್ರ ಚಹಲ್ ಪ್ರತಿಕ್ರಿಯೆ ನೀಡಿ ಭಯ್ಯಾ, 1,400 ಕಿಲೋ ಮೀಟರ್ ದೂರದಲ್ಲಿರುವ ನಮಗೂ ಸ್ವಲ್ಪ ಬಿರಿಯಾನಿ ಕಳುಹಿಸಿಕೊಡಿ ಎಂದು ಕೊಹ್ಲಿಯನ್ನು ಕಿಚಾಯಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT