ಮಂಕಿಗೇಟ್ ಪ್ರಕರಣ ನನ್ನ ನಾಯಕತ್ವದಲ್ಲಿ ಘಟಿಸಿದ ಅತ್ಯಂತ ಕೆಟ್ಟ ಸನ್ನಿವೇಶ: ಪಾಂಟಿಂಗ್ ಕೊರಗು 
ಕ್ರಿಕೆಟ್

ಮಂಕಿಗೇಟ್ ಪ್ರಕರಣ ನನ್ನ ನಾಯಕತ್ವದಲ್ಲಿ ಘಟಿಸಿದ ಅತ್ಯಂತ ಕೆಟ್ಟ ಸನ್ನಿವೇಶ: ಪಾಂಟಿಂಗ್ ಕೊರಗು

12 ವರ್ಷಗಳ ಹಿಂದೆ ನಡೆದಿದ್ದ ಹಾಗೂ ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿದ್ದ 'ಮಂಕಿಗೇಟ್' ಪ್ರಕರಣ ಕುರಿತು ಆಸ್ಟ್ರೇಲಿಯಾ ತಂಡ ಮಾಜಿ ನಾಯಕ ರಿಕಿ ಪಾಂಟಿಂಗ್ ಸ್ಮರಿಸಿದ್ದು, ತಮ್ಮ ನಾಯಕತ್ವದಲ್ಲಿ ಘಟಿಸಿದ ಅತ್ಯಂತ ಕೆಟ್ಟ ಸನ್ನಿವೇಶ ಇದಾಗಿದೆ ಎಂದಿದ್ದಾರೆ.

ಮೆಲ್ಬೋರ್ನ್: 12 ವರ್ಷಗಳ ಹಿಂದೆ ನಡೆದಿದ್ದ ಹಾಗೂ ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿದ್ದ 'ಮಂಕಿಗೇಟ್' ಪ್ರಕರಣ ಕುರಿತು ಆಸ್ಟ್ರೇಲಿಯ ತಂಡ ಮಾಜಿ ನಾಯಕ ರಿಕಿ ಪಾಂಟಿಂಗ್ ಸ್ಮರಿಸಿದ್ದು, ತಮ್ಮ ನಾಯಕತ್ವದಲ್ಲಿ ಘಟಿಸಿದ ಅತ್ಯಂತ ಕೆಟ್ಟ ಸನ್ನಿವೇಶ ಇದಾಗಿದೆ ಎಂದಿದ್ದಾರೆ.

2007-08ನೇ ಸಾಲಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಜನವರಿ 2ರಿಂದ 6ರ ವರೆಗೆ ಸಿಡ್ನಿಯಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಭಾರತೀಯ ಆಫ್ ಸಿನ್ನರ್ ಹರ್ಭಜನ್ ಸಿಂಗ್ ಹಾಗೂ ಆಸ್ಟ್ರೇಲಿಯಾ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್ ನಡುವೆ ಮಂಕಿಗೇಟ್ ವಿವಾದ ಹುಟ್ಟಿಕೊಂಡಿತ್ತು. ಅಂದು ಭಾರತೀಯ ನಾಯಕ ಅನಿಲ್ ಕುಂಬ್ಳೆ, ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಆಸೀಸ್ ನಾಯಕ ರಿಕಿ ಪಾಂಟಿಂಗ್ ಸೇರಿದಂತೆ ಇತ್ತಂಡಗಳ ಬಹುತೇಕ ಎಲ್ಲ ಆಟಗಾರರು ಆರೋಪ - ಪ್ರತ್ಯಾರೋಪಗಳಲ್ಲಿ ಭಾಗಿಯಾಗಿದ್ದು ಪ್ರಕರಣ ಇನ್ನಷ್ಟು ತೀವ್ರತೆ ಪಡೆಯಿತು.

ಇದೀಗ ಮಂಕಿಗೇಟ್ ವಿವಾದವನ್ನು ನೆನಪಿಸಿರುವ ರಿಕಿ ಪಾಂಟಿಂಗ್, ತಮ್ಮ ನಾಯಕತ್ವದ ಅಡಿಯಲ್ಲಾದ ಅನಿರೀಕ್ಷಿತ ಘಟನೆ ಬಗ್ಗೆ ಕೊರಗಿದ್ದಾರೆ. ಬಹುಶಃ ತಮ್ಮ ನಾಯಕತ್ವದ ಅತ್ಯಂತ ಕೆಟ್ಟ ಕಾಲಘಟ್ಟ ಇದಾಗಿದೆ ಎಂದು ಹೇಳಿದ್ದಾರೆ.
"2005ರ ಆ್ಯಶಸ್ ಸರಣಿ ಕಳೆದುಕೊಳ್ಳುವುದು ಕಠಿಣವೆನಿಸಿತ್ತು. ಆದರೂ ಸಂಪೂರ್ಣ ಪಂದ್ಯವು ನನ್ನ ನಿಯಂತ್ರಣದಲ್ಲಿತ್ತು. ಆದರೆ ಮಂಕಿಗೇಟ್ ವಿವಾದದ ಸಮಯದಲ್ಲಿ ಏನಾಯಿತು ಎಂಬುದು ನನ್ನ ನಿಯಂತ್ರಣ ಪರಿಧಿಯಲ್ಲಿರಲಿಲ್ಲ" ಎಂದು ಹೇಳಿದ್ದಾರೆ. "ತುಂಬಾ ದಿನಗಳು ವಿವಾದ ಆವರಿಸಿದ್ದರಿಂದ ನನ್ನ ಕೆರಿಯರ್‌ನ ಅತ್ಯಂತ ಕೆಟ್ಟ ಸಮಯವು ಇದಾಗಿತ್ತು.

ಆಡಿಲೇಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಸಮಯದಲ್ಲೂ ಮೈದಾನದಿಂದ ಹೊರಬಂದ ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕಾರಿಗಳೊಂದಿಗೆ ಪ್ರಕರಣದ ಬಗ್ಗೆ ಮಾತನಾಡಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಯಾಕೆಂದರೆ ಆಡಿಲೇಡ್ ಟೆಸ್ಟ್ ಪಂದ್ಯದ ವೇಳೆ ವಿಚಾರಣೆ ಕೊನೆಯ ಹಂತದಲ್ಲಿತ್ತು" ಎಂದು ಪಾಂಟಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT