ಧೋನಿ-ಸಾಕ್ಷಿ 
ಕ್ರಿಕೆಟ್

ಬೈಕ್ ಪಾರ್ಕಿಂಗ್ ವಿಚಾರವಾಗಿ ಪತ್ನಿ ಸಾಕ್ಷಿ ಕೈಯಲ್ಲಿ ಬೈಯಿಸಿಕೊಂಡ ಎಂಎಸ್ ಧೋನಿ

ಒಂದು ದಶಕಕ್ಕೂ ಅಧಿಕ ಸಮಯ ಕ್ರಿಕೆಟ್‌ ಅಂಗಳದಲ್ಲಿ ಆಟಗಾರರಿಗೆ ಕ್ರಿಕೆಟ್‌ ಪಾಠ ಹೇಳಿಕೊಡುತ್ತಿದ್ದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಬೈಕ್‌ ಪಾರ್ಕಿಂಗ್‌ ಮಾಡುವ ವಿಚಾರದಲ್ಲಿ ತಮ್ಮ ಪತ್ನಿ ಸಾಕ್ಷಿ ಕೈಯಲ್ಲಿ ಬೈಸಿಕೊಂಡಿದ್ದಾರೆ.

ನವದೆಹಲಿ: ಒಂದು ದಶಕಕ್ಕೂ ಅಧಿಕ ಸಮಯ ಕ್ರಿಕೆಟ್‌ ಅಂಗಳದಲ್ಲಿ ಆಟಗಾರರಿಗೆ ಕ್ರಿಕೆಟ್‌ ಪಾಠ ಹೇಳಿಕೊಡುತ್ತಿದ್ದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಬೈಕ್‌ ಪಾರ್ಕಿಂಗ್‌ ಮಾಡುವ ವಿಚಾರದಲ್ಲಿ ತಮ್ಮ ಪತ್ನಿ ಸಾಕ್ಷಿ ಕೈಯಲ್ಲಿ ಬೈಸಿಕೊಂಡಿದ್ದಾರೆ.

ಮಹೇಂದ್ರ ಸಿಂಗ್‌ ಧೋನಿ ಅವರು 2019ರ ಜುಲೈ ತಿಂಗಳಿನಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಎಂ.ಎಸ್‌ ಧೋನಿ ಬ್ಯಾಟಿಂಗ್‌ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಬಾರಿ ನಡೆಯುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಧೋನಿ ಆಟವನ್ನು ಕಣ್ತುಂಬಿಸಿಕೊಳ್ಳಬಹುದೆಂದು ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕಳೆದ ಹಲವು ದಿನಗಳ ಹಿಂದೆಯೇ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂ.ಎಸ್‌ ಧೋನಿ ಚೆನ್ನೈಗೆ ತೆರಳಿ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದರು. ಆದರೆ, ಕೊರೊನಾ ವೈರಸ್‌ ಭೀತಿಯಿಂದಾಗಿ ಚೆನ್ನೈ ಸೂಪರ್‌ ಕಿಂಗ್ಸ್ ತರಬೇತಿ ಶಿಬಿರವನ್ನು ರದ್ದುಗೊಳಿಸಲಾಗಿತ್ತು. ಅಲ್ಲದೇ, ಮಾರ್ಚ್‌ 29ರಂದು ನಡೆಯಬೇಕಿದ್ದ ಐಪಿಎಲ್‌ ಟೂರ್ನಿಯನ್ನು ಏಪ್ರಿಲ್‌ 15ಕ್ಕೆ ಮುಂದೂಡಲಾಗಿದೆ.

ರಾಂಚಿ ನಿವಾಸದ ಬಾಗಿಲು ಮುಂದೆ ಸೂಕ್ತವಲ್ಲದ ಸ್ಥಳದಲ್ಲಿ ಧೋನಿ ತಮ್ಮ ಬೈಕ್‌ ನಿಲ್ಲಿಸಿದ್ದರು. ಇದನ್ನು ಕಂಡ ಸಾಕ್ಷಿ ಕೂಲ್‌ ಕ್ಯಾಪ್ಟನ್‌ಗೆ ಕ್ಲಾಸ್ ತೆಗೆದುಕೊಂಡರು. ನಂತರ, ಈ ವೀಡಿಯೋವನ್ನುಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಾಕಿಕೊಂಡರು. ಇದಾದ ಬಳಿಕ ಧೋನಿ ತಮ್ಮ ಬೈಕ್‌ ಅನ್ನು ಬೇರೆ ಸ್ಥಳದಲ್ಲಿ ಪಾರ್ಕ್‌ ಮಾಡಿದರು. 

ಮೊದಲನೇ ಸ್ಟೋರಿಯಲ್ಲಿ ಬೈಕ್‌ ಫೋಟೊ ಹಿಡಿದು "ದಯವಿಟ್ಟು ಸರಿಯಾದ ಸ್ಥಳದಲ್ಲಿ ಬೈಕ್‌ ಅನ್ನು ನಿಲ್ಲಿಸಿ @ಮಾಹಿ,'' ಎಂದಿದ್ದರು. ನಂತರ, ಬಿಡುಗಡೆ ಮಾಡಿದ ಸಣ್ಣ ವೀಡಿಯೋ ತುಣುಕಿನಲ್ಲಿ ನಾಯಿಯ ತಲೆ ಮೇಲೆ ಧೋನಿ ಬೆರಳಾಡಿಸುವ ಮುದ್ದು ಮಾಡುತ್ತಿದ್ದ ಕಂಡು ಬಂತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Asia Cup 20225: Operation Sindoor ಬಳಿಕ ಪಾಕಿಸ್ತಾನಕ್ಕೆ ಮತ್ತೆ ಸೋಲಿನ ರುಚಿ ತೋರಿಸಿದ ಭಾರತ!

ಭಾರತಕ್ಕೆ ಕಷ್ಟದ ದಿನಗಳು ಶುರು: 1.4 ಬಿಲಿಯನ್ ಜನರಿದ್ದರೂ ನಮ್ಮಿಂದ ಜೋಳ ಖರೀದಿಸಲ್ಲ; ಮತ್ತೆ ಕೆಂಡಕಾರಿದ ಅಮೆರಿಕ ಸಚಿವ ಲುಟ್ನಿಕ್!

2025 ಮಹಿಳಾ ಹಾಕಿ ಏಷ್ಯಾ ಕಪ್‌: ಚೀನಾ ವಿರುದ್ಧ ಸೋತ ಭಾರತ ಬೆಳ್ಳಿಗೆ ತೃಪ್ತಿ; ಪ್ರಧಾನಿ ಮೋದಿ ಅಭಿನಂದನೆ!

ಹಣಕ್ಕಾಗಿ ರಾಷ್ಟ್ರೀಯತೆ ಬಲಿ: ಭಾರತ-ಪಾಕಿಸ್ತಾನ ಏಷ್ಯಾ ಕಪ್ ಪಂದ್ಯಕ್ಕೆ BJP ವಿರುದ್ಧ ವಿರೋಧ ಪಕ್ಷಗಳ ಆಕ್ರೋಶ!

ಉತ್ತರ ಪ್ರದೇಶ: ಲಾಠಿ ಚಾರ್ಜ್ ನಲ್ಲಿ ಬಿಜೆಪಿ ಕಾರ್ಯಕರ್ತನ ಸಾವು; ತನಿಖೆಗೆ ಎಸ್‌ಐಟಿ

SCROLL FOR NEXT