ಕ್ರಿಕೆಟ್

ಕೇವಲ ವದಂತಿ! ಎಂಎಸ್ ಧೋನಿ ನಿವೃತ್ತಿಯ ಕುರಿತು ಸಾಕ್ಷಿ ಮಾತು

Raghavendra Adiga

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ಬಗ್ಗೆ ಟ್ವಿಟ್ತರ್ ನಲ್ಲಿ #DhoniRetires ಟ್ರೆಂಡ್ ಸೃಷ್ಟಿಯಾಗುತ್ತಿದ್ದಂತೆ ಧೋನಿ ಪತ್ನಿ ಸಾಕ್ಷಿ ಧೋನಿ ಎಲ್ಲಾ ಊಹಾಪೋಹಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.

ಸಾಕ್ಷಿ ಸಿಂಗ್ ರಾವತ್  ತಾವು ಟ್ವಿಟ್ತರ್ ಮೂಲಕ ಇದಕ್ಕೆ ಸ್ಪಷ್ತನೆ ಕೊಟ್ತಿದ್ದಾರೆ. 'ಇದು ಕೇವಲ ವದಂತಿ" ಎಂದು ಆಕೆ ಹೇಳಿದ್ದಾರೆ.

ಜತೆಗೆ 'ಲಾಕ್‌ಡೌನ್ ಜನರನ್ನು ಮಾನಸಿಕವಾಗಿ ಅಸ್ಥಿರಗೊಳಿಸಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ! ಎಂದೂ ಹೇಳಿರುವ ಸಾಕ್ಷಿ ತಾವು , ಟ್ವೀಟ್ ಅನ್ನು ಪೋಸ್ಟ್ ಮಾಡಿದ ಕೆಲವು ನಿಮಿಷಗಳ ನಂತರ ಟ್ವೀಟ್ ಡಿಳೀಟ್ ಮಾಡಿದ್ದಾರೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಇಷ್ಟಕ್ಕೂ ಧೋನಿ ಹಲವಾರು ವರ್ಷಗಳಿಂದ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಮೆಚ್ಚಿನ ಕ್ರಿಕೆಟಿಗರಾಗಿದ್ದಾರೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾಗವಹಿಸಿದಾಗಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ವಿರಾಮ ತೆಗೆದುಕೊಂಡಿರುವುದು  ಧೋನಿ ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಆತಂಕಕಾರಿ ಅಂಶವಾಗಿದೆ. ಧೋನಿ ಈ ಋತುವಿನಲ್ಲಿ  ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸುವ ನಿರೀಕ್ಷೆ ಇದ್ದಿತಾದರೂ ಐಪಿಎಲ್ ಮುಂದೂಡಲ್ಪಟ್ಟಿದ್ದು ಮತ್ತು ಕೊರೋನಾ ಕಾರಣಕ್ಕೆ  ಟಿ 20 ವಿಶ್ವಕಪ್ ಭವಿಷ್ಯ ಸಹ ಡೋಲಾಯಮಾನವಾಗಿದೆ. ಇದರಿಂದಾಗಿ ಮಹಿ ಮತ್ತೆ ಟೀಂ ಇಂಡಿಯಾ ಜರ್ಸಿಯಲ್ಲಿ ಮಿಂಚಲಿದ್ದಾರೆಯೆ ಎನ್ನುವುದು ಅವರ ಅಭಿಮಾನಿಗಳಿಗೆ ಆತಂಕದ ಪ್ರಶ್ನೆಯಾಗಿಯೇ ಉಳಿದಿದೆ.

ಇದೀಗ ಸಾಕ್ಷಿ ಧೋನಿ ತಮ್ಮ ಪತಿಯ ನಿವೃತ್ತಿಯನ್ನು ಮತ್ತೊಮ್ಮೆ ಅಲ್ಲಗೆಳೆದಿದ್ದಾರೆ. ಆದರೆ ಟ್ವೀಟ್ ಡಿಲೀಟ್ ಮಾಡಿರುವ ಹಿಂದಿನ ಉದ್ದೇಶ ಮಾತ್ರ ನಿಗೂಢವಾಗಿದೆ. 

SCROLL FOR NEXT