ಧೋನಿ-ಸುನಿಲ್ ಗವಾಸ್ಕರ್ 
ಕ್ರಿಕೆಟ್

ವೈಡ್‌ ಬಾಲ್‌ ವಿವಾದ: ಎಂಎಸ್ ಧೋನಿ ಗೆ ಸುನೀಲ್‌ ಗವಾಸ್ಕರ್‌ ಬೆಂಬಲ

'ವೈಡ್‌ ಬಾಲ್‌' ವಿವಾದಕ್ಕೆ ಸಂಬಂಧಿಸಿದಂತೆ ಟೀಕೆಗೆ ಗುರಿಯಾಗಿರುವ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್‌ ಅವರಿಗೆ ಭಾರತೀಯ ಕ್ರಿಕೆಟ್‌ ದಂತಕತೆ ಹಾಗೂ 2020ರ ಐಪಿಎಲ್‌ನ ಕಾಮೆಂಟರಿ ಪ್ಯಾನೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುನೀಲ್ ಗವಾಸ್ಕರ್‌ ಬೆಂಬಲ ಸೂಚಿಸಿದ್ದಾರೆ.

ದುಬೈ: 'ವೈಡ್‌ ಬಾಲ್‌' ವಿವಾದಕ್ಕೆ ಸಂಬಂಧಿಸಿದಂತೆ ಟೀಕೆಗೆ ಗುರಿಯಾಗಿರುವ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್‌ ಅವರಿಗೆ ಭಾರತೀಯ ಕ್ರಿಕೆಟ್‌ ದಂತಕತೆ ಹಾಗೂ 2020ರ ಐಪಿಎಲ್‌ನ ಕಾಮೆಂಟರಿ ಪ್ಯಾನೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುನೀಲ್ ಗವಾಸ್ಕರ್‌ ಬೆಂಬಲ ಸೂಚಿಸಿದ್ದಾರೆ.

ಮಂಗಳವಾರ ರಾತ್ರಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಪಂದ್ಯದಲ್ಲಿ ಈ ವಿವಾದ ಸೃಷ್ಠಿಯಾಗಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್, ನಿಗದಿತ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 167 ರನ್‌ಗಳನ್ನು ದಾಖಲಿಸಿತು. ಬಳಿಕ ಗುರಿ ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್‌ ನಿಗದಿತ 20 ಓವರ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡು 147 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ 20 ರನ್‌ಗಳಿಂದ ಸಿಎಸ್‌ಕೆ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು.

ಸನ್‌ರೈಸರ್ಸ್ ಹೈದರಾಬಾದ್‌ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಎಂಎಸ್‌ ಧೋನಿ ಹಾಗೂ ಅಂಪೈರ್‌ ನಡುವೆ ಈ ಘಟನೆ ನಡೆದಿತ್ತು. 18ನೇ ಓವರ್‌ನಲ್ಲಿ 19 ರನ್‌ಗಳನ್ನು ಗಳಿಸಿದ್ದ ಎಸ್ಆರ್‌ಎಚ್‌, ಕೊನೆಯ ಎರಡು ಓವರ್‌ಗಳಲ್ಲಿ 27 ರನ್‌ಗಳ ಅಗತ್ಯವಿತ್ತು, 19ನೇ ಓವರ್‌ನ ಮೊದಲನೇ ಎಸೆತದಲ್ಲಿ ಶಾರ್ದೂಲ್‌ ಠಾಕೂರ್‌ ಎರಡು ರನ್‌ಗಳನ್ನು ನೀಡಿದರು. 

ಬಳಿಕ ಎರಡನೇ ಎಸೆತ ವೈಡ್‌ ಆಯಿತು. ನಂತರದ ಎಸೆತ ಕೂಡ ಲೈನ್‌ನಿಂದ ಹೊರಗಡೆ ಹೋಗುತ್ತಿತ್ತು, ಅದರಂತೆ ಅಂಪೈರ್‌ ರೀಫೆಲ್‌, ವೈಡ್‌ ನೀಡಲು ತನ್ನ ಎರಡೂ ಕೈಗಳನ್ನು ಅರ್ಧಕ್ಕೆ ಎತ್ತುವ ವೇಳೆ ಎಂಎಸ್‌ ಧೋನಿಯ ಕೋಪಗೊಂಡಿದ್ದ ಮುಖವನ್ನು ನೋಡಿ, ತಮ್ಮ ನಿರ್ಧಾರವನ್ನು ಬದಲಿಸಿದರು. ಅಂಪೈರ್‌ಗೆ ಬೆದರಿಸುವ ಎಂಎಸ್‌ ಧೋನಿಯ ನಡತೆಯನ್ನು ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ತೀವ್ರವಾಗಿ ಖಂಡಿಸಿದರು. 

ಇದೀಗ ಸುನೀಲ್‌ ಗವಾಸ್ಕರ್‌, ಕೊನೆಯ ಓವರ್‌ನಲ್ಲಿ ಕರ್ಣ್‌ ಶರ್ಮಾ ಬೌಂಡರಿ ಬಿಟ್ಟುಕೊಟ್ಟ ನಂತರ ಧೋನಿ ಗಲಾಟೆ ಮಾಡಿಲ್ಲ ಆದರೆ ಸ್ವಲ್ಪ ಕಳವಳ ಹೊಂದಿದ್ದರು ಎಂದು ಗವಾಸ್ಕರ್ ಹೇಳಿದ್ದಾರೆ. ಬ್ಯಾಟ್ಸ್‌ಮನ್ ಚೆಂಡಿನ ಕಡೆಗೆ ಚಲಿಸಿದ ಸ್ಥಳದ ಬಗ್ಗೆ ಶಾರ್ದೂಲ್ ಠಾಕೂರ್ ಅವರೊಂದಿಗೆ ಅದು ಅನುಸರಿಸಿತು ಎಂದು ಅವರು ತಿಳಿಸಿದರು. ಆದಾಗ್ಯೂ, ಗವಾಸ್ಕರ್ ಕೊನೆಯ ಎರಡು ಓವರ್‌ಗಳನ್ನು ನೋಡುವುದಕ್ಕೆ ರೋಮಾಂಚನಕಾರಿ ಎಂದು ಹೇಳುವ ಮೂಲಕ ಆ ವಿಷಯವನ್ನು ನಿಲ್ಲಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT