ಕೆವಿನ್ ಪೀಟರ್ಸನ್ 
ಕ್ರಿಕೆಟ್

ಐಪಿಎಲ್ ಪ್ರೀತಿಸುತ್ತೇನೆ, ಭಾರತ ನನಗೆ ಸಾಕಷ್ಟನ್ನು ಕೊಟ್ಟಿದೆ: ಕೆವಿನ್ ಪೀಟರ್ಸನ್

ಐಪಿಎಲ್ ಟೂರ್ನಿ ಪ್ರಾರಂಭವಾಗುತ್ತಿದ್ದು, ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಈ ಬಾರಿಯ ಐಪಿಎಲ್ ಹೇಗೆ ಕೋವಿಡ್-19 ಕಾರಣದಿಂದಾಗಿ ಎಂದಿಗಿಂತ ಭಿನ್ನವಾಗಿರಲಿದೆ ಎಂಬ ಬಗ್ಗೆ ಮಾತನಾಡಿದ್ದಾರೆ. 

ನವದೆಹಲಿ: ಐಪಿಎಲ್ ಟೂರ್ನಿ ಪ್ರಾರಂಭವಾಗುತ್ತಿದ್ದು, ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಈ ಬಾರಿಯ ಐಪಿಎಲ್ ಹೇಗೆ ಕೋವಿಡ್-19 ಕಾರಣದಿಂದಾಗಿ ಎಂದಿಗಿಂತ ಭಿನ್ನವಾಗಿರಲಿದೆ ಎಂಬ ಬಗ್ಗೆ ಮಾತನಾಡಿದ್ದಾರೆ. 

"ಅಭಿಮಾನಿಗಳಿರುವುದಿಲ್ಲ, ಏನೂ ಇರುವುದಿಲ್ಲ. ಬಾಹ್ಯ ಪ್ರಪಂಚದ ಸಂಪರ್ಕವನ್ನೇ ಕಡಿದುಕೊಂಡು ಆಟವಾಡುತ್ತಿರುತ್ತಾರೆ. ಇದು ಎಲ್ಲರಿಗೂ ಹೊಸ ಅನುಭವಾಗಿದೆ ಎಂದು ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ. 

ಕ್ರಿಕೆಟ್ ಜಗತ್ತಿನಲ್ಲಿ ಕೆಪಿ ಎಂದೇ ಪ್ರಸಿದ್ಧಿ ಗಳಿಸಿರುವ ಕೆವಿನ್ ಪೀಟರ್ಸನ್ ಐಪಿಎಲ್ 2020 ಯ ಕಾಮೆಂಟರಿ ವಿಭಾಗದಲ್ಲಿದ್ದು ಸೆ.19 ರಿಂದ ಯುಎಇಯಲ್ಲಿ ಐಪಿಎಲ್ ಪ್ರಾರಂಭವಾಗುತ್ತಿದೆ. 

ಐಪಿಎಲ್ ನಲ್ಲಿ ಕೆವಿನ್ ಆಡುತ್ತಿದ್ದಾಗ ಡೆಲ್ಲಿ ಡೇರ್ ಡೆವಿಲ್ಸ್ (ಇಂದಿನ ಡೆಲ್ಲಿ ಕ್ಯಾಪಿಟಲ್ಸ್) ರಾಯಲ್ ಚಾಲೆಂಜರ್ಸ್ ಬೆಂಗಳೂರು, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡನ್ನು ಪ್ರತಿನಿಧಿಸಿದ್ದರು. ಟ್ರೋಫಿ ಗೆಲ್ಲುವ ವಿಷಯದಲ್ಲಿ ಈಗಲೂ ಕೆವಿನ್ ದಿಲ್ಲಿ ತಂಡಕ್ಕೇ ತಮ್ಮ ಬೆಂಬಲ ಎನ್ನುತ್ತಿದ್ದಾರೆ. 

"ಯಾವ ತಂಡ ಟ್ರೋಫಿ ಗೆಲ್ಲಲಿದೆ ಎಂಬುದನ್ನು ಈಗಲೇ ಹೇಳುವುದು ಕಷ್ಟ, ಆದರೆ ನನ್ನ ಬೆಂಬಲ ಡೆಲ್ಲಿ ಕ್ಯಾಪಿಟಲ್ಸ್ ಗೆ ಏಕೆಂದರೆ ಆ ತಂಡವೆಂದರೆ ನನಗೆ ಇಷ್ಟ. ಒಟ್ಟಾರೆಯಾಗಿ ಇದು ಅತ್ಯಂತ ವಿಭಿನ್ನ ಸೀಸನ್ ಆಗಿರುವುದರಿಂದ ಒಂದೆರಡು ವಾರಗಳ ಕಾಲ ಪಂದ್ಯಗಳನ್ನು ಗಮನಿಸಿ ವಿಶ್ಲೇಷಿಸಿದ ನಂತರವಷ್ಟೇ ಯಾವ ತಂಡ ಗೆಲ್ಲಲಿದೆ ಎಂದು ಹೇಳುವುದಕ್ಕೆ ಸಾಧ್ಯವಾಗಲಿದೆ" ಎಂದು ಕೆವಿನ್ ಹೇಳಿದ್ದಾರೆ. ನನಗೆ ಯುವ ಆಟಗಾರರೆಂದರೆ ಇಷ್ಟ, ರಿಸ್ಕ್ ತೆಗೆದುಕೊಂಡು ಆಡುವ ಆಟಗಾರರೆಂದರೆ ಇಷ್ಟ ಎಂದು ಕೆವಿನ್ ಪೀಟರ್ಸನ್ ಹೇಳಿದ್ದಾರೆ. 

ತಮ್ಮ ಐಪಿಎಲ್ ಜರ್ನಿಯನ್ನು ನೆನಪಿಸಿಕೊಂಡಿರುವ ಕೆವಿನ್ ಭಾರತಕ್ಕೆ ಋಣಿಯಾಗಿದ್ದೇನೆ, ಭಾರತ, ಐಪಿಎಲ್ ನಿಂದ ಭಾವನಾತ್ಮಕವಾಗಿ ಸಾಕಷ್ಟು ಪಡೆದಿದ್ದೇನೆ. ಭಾರತದ ಸಂಸ್ಕೃತಿ, ಸ್ನೇಹದ ಅನುಭವ ಪಡೆಯುವುದಕ್ಕೆ ನಾನು ಅದೃಷ್ಟ ಮಾಡಿದ್ದೆ. ಭಾರತಕ್ಕೆ ನಾನು ಸಾಕಷ್ಟು ಋಣಿಯಾಗಿದ್ದೇನೆ ಎಂದು ಹೇಳಿರುವ ಕೆವಿನ್, ನ್ಯಾಷನಲ್ ಜಿಯಾಗ್ರಫಿಕ್ ನ ಸೇವ್ ದಿಸ್ ರೈನೋ ಎಂಬ ಡಾಕ್ಯುಮೆಂಟರಿಯನ್ನು ಪ್ರೊಮೋಟ್ ಮಾಡಿದ್ದು, ಇದನ್ನು ಭಾರತಕ್ಕೆ ತಮ್ಮ ಗಿಫ್ಟ್ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

SCROLL FOR NEXT