ರಾಹುಲ್ ದ್ರಾವಿಡ್, ಧೋನಿ 
ಕ್ರಿಕೆಟ್

ಧೋನಿ ಮೇಲೆ ಕೋಪಗೊಂಡಿದ್ದರಂತೆ ರಾಹುಲ್ ದ್ರಾವಿಡ್: ಸೆಹ್ವಾಗ್ ನೆನಪು

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್,ಕೋಪಗೊಂಡ ನಿದರ್ಶನಗಳಿಲ್ಲ. ಆದರೆ, ಒಂದು ಬಾರಿ ಮಹೇಂದ್ರ ಸಿಂಗ್ ಧೋನಿ ಮೇಲೆ ಕೋಪಗೊಂಡಿದ್ದರಂತೆ. ಇದನ್ನು ವಿರೇಂದ್ರ ಸೆಹ್ವಾಗ್ ನೆನಪು ಮಾಡಿಕೊಂಡಿದ್ದಾರೆ.

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್,ಕೋಪಗೊಂಡ ನಿದರ್ಶನಗಳಿಲ್ಲ. ಆದರೆ, ಒಂದು ಬಾರಿ ಮಹೇಂದ್ರ ಸಿಂಗ್ ಧೋನಿ ಮೇಲೆ ಕೋಪಗೊಂಡಿದ್ದರಂತೆ. ಇದನ್ನು ವಿರೇಂದ್ರ ಸೆಹ್ವಾಗ್ ನೆನಪು ಮಾಡಿಕೊಂಡಿದ್ದಾರೆ.

ಇತ್ತೀಚಿಗೆ  ಕ್ರೆಡ್ ಆ್ಯಪ್ ಜಾಹಿರಾತಿನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿರುವ ರಾಹುಲ್ ದ್ರಾವಿಡ್ ಕೋಪ ಕುರಿತು ಸೆಹ್ವಾಗ್ ಕೇಳಿದಾಗ, 2006ರಲ್ಲಿ ಪಾಕಿಸ್ತಾನದಲ್ಲಿ ಏಕದಿನ ಪಂದ್ಯವೊಂದರ ವೇಳೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಮೇಲೆ ದ್ರಾವಿಡ್ ಕೋಪಗೊಂಡಿದ್ದರು ಎಂದು ತಿಳಿಸಿದರು.

ದ್ರಾವಿಡ್ ಕೋಪಗೊಂಡಿದ್ದನ್ನು ನಾನು ನೋಡಿದ್ದೇನೆ. ಪಾಕಿಸ್ತಾನದಲ್ಲಿ ಏಕದಿನ ಕ್ರಿಕೆಟ್ ಪಂದ್ಯ ಆಡುವಾಗ ಮಹೇಂದ್ರ ಸಿಂಗ್ ಧೋನಿ ಹೊಸಬರಾಗಿದ್ದರು. ಶಾಟ್ ಹೊಡೆದ ಧೋನಿ, ಕ್ಯಾಚ್ ನೀಡಿದ್ದರು. ಆಗ ದ್ರಾವಿಡ್ ಧೋನಿ ಮೇಲೆ ಕೋಪಗೊಂಡರು. 'ನೀವು ಆಡುವ ರೀತಿ ಇದೆಯೇ? ನೀವು ಆಟವನ್ನು ಫಿನಿಶ್ ಮಾಡಬೇಕಿತ್ತು ಎಂದು ಇಂಗ್ಲೀಷ್ ನಲ್ಲಿ ಹೇಳುತ್ತಾ ದ್ರಾವಿಡ್ ಕೋಪಗೊಂಡಿದ್ದನ್ನು ಸೆಹ್ವಾಗ್ ಹೇಳಿದರು.

ರಾಹುಲ್ ದ್ರಾವಿಡ್ ಅವರ ಕೋಪ ಧೋನಿ ಮೇಲೆ ಪರಿಣಾಮ ಬೀರಿತು. ತದನಂತರದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾಡುವಾಗ ಹೆಚ್ಚಿನ ಶಾಟ್ ಗಳನ್ನು ಹೊಡೆಯುತ್ತಿರಿಲ್ಲ. ಏನಾಯಿತು ಎಂದು ಧೋನಿಯನ್ನು ಕೇಳಿದಾಗ, ದ್ರಾವಿಡ್ ಅವರಿಂದ ಮತ್ತೊಮ್ಮೆ ಬೈಯಿಸಿಕೊಳ್ಳಬಾರದು ಎಂದು ಹೇಳಿದರು. ನಂತರ ಪಂದ್ಯವನ್ನು ಮುಗಿಸಿದರು ಎಂದು ಸೆಹ್ವಾಗ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT