ಕೊಹ್ಲಿ-ರೂಟ್ 
ಕ್ರಿಕೆಟ್

ಲಾರ್ಡ್ಸ್ ಟೆಸ್ಟ್: ಮೈದಾನದಲ್ಲೇ ಅಲ್ಲ, ಲಾಂಗ್ ರೂಮಿನಲ್ಲೂ ನಡೆದಿತ್ತು ಕೊಹ್ಲಿ-ರೂಟ್ ನಡುವೆ ಮಾತಿನ ಚಕಮಕಿ!

ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ಆಟಗಾರರು ಎರಡನೇ ಟೆಸ್ಟ್ ನ ಮೂರನೇ ದಿನದಾಟದ ಬಳಿಕ ಲಾರ್ಡ್ಸ್ ಲಾಂಗ್ ರೂಮ್ ನಲ್ಲಿ ತೀವ್ರ ಮುಖಾಮುಖಿಯಾಗಿದ್ದು ಮಾತಿನ ಚಕಮಿಕಿ ನಡೆಸಿದ್ದರು.

ಲಂಡನ್: ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ಆಟಗಾರರು ಎರಡನೇ ಟೆಸ್ಟ್ ನ ಮೂರನೇ ದಿನದಾಟದ ಬಳಿಕ ಲಾರ್ಡ್ಸ್ ಲಾಂಗ್ ರೂಮ್ ನಲ್ಲಿ ತೀವ್ರ ಮುಖಾಮುಖಿಯಾಗಿದ್ದು ಮಾತಿನ ಚಕಮಿಕಿ ನಡೆಸಿದ್ದರು. 

ಟೆಲಿಗ್ರಾಫ್ ಸ್ಪೋರ್ಟ್ಸ್ ಪ್ರಕಾರ, ಜಸ್ ಪ್ರೀತ್ ಬುಮ್ರಾ ಕೊನೆಯ ಓವರ್ ಮುಗಿಸಲು 10 ಎಸೆತ ತೆಗೆದುಕೊಂಡಿದ್ದರು. ಅಲ್ಲದೆ ಜೇಮ್ಸ್ ಆಂಡರ್ಸನ್ ಗೆ ಬೌನ್ಸರ್ ಗಳ ಸುರಿಮಳೆಗೈದಿದ್ದರು. ಇದು ಲಾರ್ಡ್ಸ್ ಪೆವಿಲಿಯನ್‌ನಲ್ಲಿ ಉದ್ವಿಗ್ನತೆಗೆ ಕಾರಣವಾಗಿತ್ತು. 

ಇಂಗ್ಲೆಂಡಿನ ನಾಯಕ ಜೋ ರೂಟ್ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್‌ ಗೆ ಹೋಗುವಾಗ ಪದಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಇದಕ್ಕೂ ಮುನ್ನ ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆಂಡರ್ಸನ್ ಲಾರ್ಡ್ಸ್ ಟೆಸ್ಟ್ ನ ಮೂರನೇ ದಿನದ ಅಂತಿಮ ಸೆಷನ್ ನಲ್ಲಿ ತಮ್ಮ ಮತ್ತು ಭಾರತೀಯ ಆಟಗಾರರ ನಡುವೆ ಏನು ನಡೆಯಿತು ಎಂಬುದರ ಬಗ್ಗೆ ಬಹಿರಂಗಪಡಿಸಿದರು. ಲಾರ್ಡ್ಸ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ, ಭಾರತೀಯ ವೇಗಿ ಬೌನ್ಸರ್‌ಗಳ ಸುರಿಮಳೆಗೈದ ನಂತರ ಆಂಡರ್ಸನ್ ಬುಮ್ರಾ ಜೊತೆ ಅನಿಮೇಟೆಡ್ ಚಾಟ್ ಮಾಡುತ್ತಿರುವುದು ಕಂಡುಬಂದಿತು. ಆ ನಂತರ, ಉದ್ವೇಗ ಭುಗಿಲೆದ್ದಿತು. ಎರಡೂ ತಂಡಗಳು ಆಟದ ಉದ್ದಕ್ಕೂ ಮಾತಿನ ಚಕಮಿಕಿಯಲ್ಲಿ ತೊಡಗಿದವು.

ನಾನು ಕೊನೆಯಲ್ಲಿ ಕೋಪಗೊಂಡಿದ್ದೆ. ನಾನು ಏನನ್ನಾದರೂ ಹೇಳಬೇಕು ಎಂದು ಭಾವಿಸಿದೆ. ಹಾಗೆ ಮಾಡಿದ್ದಕ್ಕಾಗಿ ನನಗೆ ಕೆಟ್ಟ ಭಾವನೆ ಉಂಟಾಯಿತು. ನಾನು ಕ್ಷಮೆಯಾಚಿಸುತ್ತೇನೆ. ಇಂತಹ ಘಟನೆಗಳು ಕೆಲವೊಮ್ಮೆ ಸಂಭವಿಸುತ್ತದೆ ಎಂದು ಆಂಡರ್ಸನ್ ಟೆಲಿಗ್ರಾಫ್ಗಾಗಿ ತನ್ನ ಅಂಕಣದಲ್ಲಿ ಬರೆದಿದ್ದಾರೆ.

ಮೊದಲ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತು. ಆದರೆ ಭಾರತವು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಎರಡನೇ ಪಂದ್ಯವನ್ನು ಗೆದ್ದು ಬೀಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT