ಜೋಸ್ ಬಟ್ಲರ್ 
ಕ್ರಿಕೆಟ್

ಐಪಿಎಲ್: ಬಟ್ಲರ್‌ ಚೊಚ್ಚಲ ಟಿ20 ಶತಕ, ಹೈದರಾಬಾದ್ ವಿರುದ್ಧ ರಾಜಸ್ಥಾನಕ್ಕೆ 55 ರನ್‌ ಗೆಲುವು

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಚೊಚ್ಚಲ ಟಿ 20 ಶತಕಮತ್ತು ಮುಸ್ತಾಫಿಜುರ್ ರಹಮಾನ್ ಮತ್ತು ಕ್ರಿಸ್ ಮೋರಿಸ್ ಅವರ ಮೂರು ವಿಕೆಟ್ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ (ಆರ್ ಆರ್)  ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ 55 ರನ್‌ಗಳ ಗೆಲುವು ಸಾಧಿಸಿತು.

ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಚೊಚ್ಚಲ ಟಿ 20 ಶತಕಮತ್ತು ಮುಸ್ತಾಫಿಜುರ್ ರಹಮಾನ್ ಮತ್ತು ಕ್ರಿಸ್ ಮೋರಿಸ್ ಅವರ ಮೂರು ವಿಕೆಟ್ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ (ಆರ್ ಆರ್) ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ 55 ರನ್‌ಗಳ ಗೆಲುವು ಸಾಧಿಸಿತು.

221 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಎಂಟು ವಿಕೆಟ್‌ಗಳಿಗೆ 165 ರನ್ ಗಳಿಸುವುದಕ್ಕಷ್ತೇ ಸಾಧ್ಯವಾಗಿತ್ತು.

ಡೇವಿಡ್ ವಾರ್ನರ್ ಬದಲಿಗೆ ಕೇನ್ ವಿಲಿಯಮ್ಸನ್ ಅವರನ್ನು ಎಸ್‌ಆರ್‌ಹೆಚ್ ನಾಯಕನನ್ನಾಗಿ ಮಾಡಿದ್ದರೂ ಸಹ ಹೈದರಾಬ್ದ್ ಗೆ ಸೋಲು ತಪ್ಪಲಿಲ್ಲ,ಮನೀಶ್ ಪಾಂಡೆ (31) ಜಾನಿ ಬೈರ್‌ಸ್ಟೋವ್ (30) ಜೋಡಿ ಮೊದಲ ವಿಕೆಟ್ ಗೆ 57 ರನ್ ಗಳಿಸಿತು. ಆ ನಂತರ ವಿಜಯ್ ಶಂಕರ್ (8), ವಿಲಿಯಮ್ಸನ್ (20), ಮೊಹಮ್ಮದ್ ನಬಿ (17) ಹೈದರಾಬಾದ್ ಪರ ತುಸು ಉತ್ತಮ ಪ್ರದರ್ಶನ ನೀಡಿದ್ದರು.

ಇದಕ್ಕೂ ಮೊದಲು ಜೋಸ್ ಬಟ್ಲರ್ ತಮ್ಮ ಚೊಚ್ಚಲ ಟಿ 20 ಶತಕವನ್ನು ಗಳಿಸಿ ರಾಜಸ್ಥಾನ್ ರಾಯಲ್ಸ್ ಮೂರು ವಿಕೆಟ್ ನಷ್ಟಕ್ಕೆ 220 ರನ್ ಗಳಿಸಲು ನೆರವಾದರು.ಬಟ್ಲರ್ 64 ಎಸೆತಗಳಲ್ಲಿ 124 ಮತ್ತು ನಾಯಕ ಸಂಜು ಸ್ಯಾಮ್ಸನ್ ಅವರ ಎರಡನೇ ವಿಕೆಟ್ ಪಾಲುದಾರಿಕೆಯಿಂದಾಗಿ ಆರ್.ಆರ್.  ಬೃಹತ್ ಮೊತ್ತ ಗಳಿಸಿತ್ತು. ಈ ಜೋಡಿ 88 ಎಸೆತಗಳಲ್ಲಿ 150 ರನ್ ಗಳಿಸಿಕೊಟ್ಟಿತ್ತು, ಸ್ಯಾಮ್ಸನ್ 33 ಎಸೆತಕ್ಕೆ 48 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌
ಆರ್‌ಆರ್: 20 ಓವರ್‌ಗಳಲ್ಲಿ 220/3 (ಜೋಸ್ ಬಟ್ಲರ್ 124, ಸಂಜು ಸ್ಯಾಮ್ಸನ್ 48; ರಶೀದ್ ಖಾನ್ 1/24)
ಎಸ್‌ಆರ್‌ಹೆಚ್: 20 ಓವರ್‌ಗಳಲ್ಲಿ 165/8 (ಮನೀಶ್ ಪಾಂಡೆ 31, ಜಾನಿ ಬೈರ್‌ಸ್ಟೋ 30; ಮುಸ್ತಾಫಿಜುರ್ ರಹಮಾನ್ 3/20, ಕ್ರಿಸ್ ಮೋರಿಸ್ 3/29)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT