ಎಂಎಸ್ ಧೋನಿ 
ಕ್ರಿಕೆಟ್

ಮೈದಾನದಲ್ಲಿ ಎಂಎಸ್ ಧೋನಿ ಯಾಕೆ ಕೂಲ್ ಆಗಿರ್ತಾರೆ? ಖುದ್ದು ಸೀಕ್ರೆಟ್ ಬಿಚ್ಚಿಟ್ಟ ಧೋನಿ!

ಭಾರತದ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ಅವರು ಕೂಲ್ ಕ್ಯಾಪ್ಟನ್ ಅಂತ ಹೆಸರುವಾಸಿ. ಮೈದಾನದಲ್ಲಿ ಬಹಳ ತಾಳ್ಮೆ, ಸಮಾಧಾನದಿಂದ ಇರುವ ಧೋನಿ ಕೋಪಗೊಂಡಿದ್ದು, ಉದ್ರೇಕಗೊಂಡಿದ್ದು ಬಹಳ ಕಡಿಮೆ.

ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ಅವರು ಕೂಲ್ ಕ್ಯಾಪ್ಟನ್ ಅಂತ ಹೆಸರುವಾಸಿ. ಮೈದಾನದಲ್ಲಿ ಬಹಳ ತಾಳ್ಮೆ, ಸಮಾಧಾನದಿಂದ ಇರುವ ಧೋನಿ ಕೋಪಗೊಂಡಿದ್ದು, ಉದ್ರೇಕಗೊಂಡಿದ್ದು ಬಹಳ ಕಡಿಮೆ. ಆದರೆ ಇಂದು ಖುದ್ದಾಗಿ ಅವರೇ ಮೈದಾನದಲ್ಲಿ ಯಾಕೆ ಕೂಲ್ ಆಗಿ ಇರುತ್ತೇನೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

'ನಾನೂ ಮೈದಾನದಲ್ಲಿದ್ದಾಗ, ಮಿಸ್‌ಫೀಲ್ಡಿಂಗ್, ಕೈಬಿಟ್ಟ ಕ್ಯಾಚ್‌ಗಳು ಅಥವಾ ಇನ್ನಾವುದೇ ತಪ್ಪುಗಳಾಗಿದ್ದರೂ ನಾವು ಯಾವುದೇ ರೀತಿಯಾಗಿ ಅನುಚಿತವಾಗಿ ವರ್ತಿಸಲು ಬಯಸುವುದಿಲ್ಲ. ಆಟಗಾರನು ಏಕೆ ಕ್ಯಾಚ್ ಅನ್ನು ಕೈಬಿಟ್ಟಿದ್ದಾನೆ ಅಥವಾ ಏಕೆ ತಪ್ಪಾಗಿ ಫೀಲ್ಡಿಂಗ್ ಮಾಡಿದರು ಎಂಬುದನ್ನು ಕಂಡುಹಿಡಿಯಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ನಾನು ಈ ರೀತಿಯಾಗಿ ಯೋಚಿಸಿದಾಗ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಕೋಪಗೊಂಡರೆ ಇಂತಹ ಪ್ರಯತ್ನಕ್ಕೆ ಸಹಾಯವಾಗುವುದಿಲ್ಲ. ಕೋಟಿಗಟ್ಟಲೆ ಮಂದಿ ಪಂದ್ಯವನ್ನು ವೀಕ್ಷಿಸುತ್ತಿರುತ್ತಾರೆ ಎಂದರು.

ಒಬ್ಬ ಆಟಗಾರ ಮೈದಾನದಲ್ಲಿ ಶೇಕಡಾ 100 ರಷ್ಟು ಗಮನಹರಿಸಿದರೆ ಮತ್ತು ಅವನು ಕ್ಯಾಚ್ ಅನ್ನು ಕಳೆದುಕೊಂಡರೆ, ನನಗೆ ತೊಂದರೆ ಇಲ್ಲ, ಅದಕ್ಕೂ ಮೊದಲು ಅಭ್ಯಾಸದ ಸಮಯದಲ್ಲಿ ಅವನು ಎಷ್ಟು ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದಾನೆ ಎಂಬುದನ್ನು ನಾನು ನೋಡಬೇಕು. ನಾನು ಕ್ಯಾಚ್ ಕೈಬಿಡಲಾಗಿದೆಯೇ ಎಂದು ಕೇಂದ್ರೀಕರಿಸುವ ಬದಲು ಈ ಎಲ್ಲಾ ಅಂಶಗಳ ಮೇಲೆ ಕೇಂದ್ರೀಕರಿಸುತ್ತಿದ್ದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT