ನವದೆಹಲಿ: ಭಾರತ ತಂಡವನ್ನು ಅವರದೇ ನೆಲದಲ್ಲಿ ಸೋಲಿಸುವುದು ಅಸಾಧ್ಯ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಮತ್ತು ನಾಯಕ ರಮೀಜ್ ರಾಜಾ ಹೇಳಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ನ ಮೂರನೇ ದಿನ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಇಲ್ಲದಿದ್ದರೆ, ಆಸ್ಟ್ರೇಲಿಯಾ ಸರಣಿಯನ್ನು ಸಮಬಲಗೊಳಿಸುವ ಮತ್ತು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಮರಳಿ ಪಡೆಯುವ ಭರವಸೆ ಇರುತ್ತಿತ್ತು.
ಆದಾಗ್ಯೂ, ಇಬ್ಬರು ಸ್ಪಿನ್ ಮಾಂತ್ರಿಕರು ಆಸ್ಟ್ರೇಲಿಯನ್ ಬ್ಯಾಟ್ಸ್ಮನ್ಗಳ ಸುತ್ತ ಬಲೆ ಬೀಸಿದ್ದರಿಂದ ಆತಿಥೇಯರ ಪರವಾಗಿ ಅಲೆಯನ್ನು ತಿರುಗಿಸುವಲ್ಲಿ ಯಶಸ್ವಿಯಾದರು, ಇದು ಕುಸಿತಕ್ಕೆ ಕಾರಣವಾಯಿತು. ಆಸೀಸ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಗಳನ್ನು ಕಳೆದುಕೊಂಡಿತು. ಹೀಗಾಗಿ ಭಾರತಕ್ಕೆ ಗೆಲ್ಲಲು 115 ರನ್ ಗಳ ಸಾಧಾರಣ ಮೊತ್ತ ನೀಡಿತ್ತು. 4 ವಿಕೆಟ್ ನಷ್ಟಕ್ಕೆ ಭಾರತ 118 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
ಇದನ್ನೂ ಓದಿ: ಬಾರ್ಡರ್-ಗವಾಸ್ಕರ್ ಟ್ರೋಫಿ: ಕಾಂಗರೂಗಳಿಗೆ ಮತ್ತೊಂದು ಆಘಾತ: ಗಾಯಾಳು ಡೇವಿಡ್ ವಾರ್ನರ್ ಟೆಸ್ಟ್ ಸರಣಿಯಿಂದ ಔಟ್!
2-0 ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಮರಳಿ ಪಡೆಯುವ ಹೊಸ್ತಿಲಲ್ಲಿ ಭಾರತ ಇದೆ. ಇನ್ನು ರಮೀಜ್ ರಾಜಾ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಅವರ ಇಡೀ ತಂಡವನ್ನು ಶ್ಲಾಘಿಸಿದ್ದಾರೆ.
ಎರಡೂ ಇನ್ನಿಂಗ್ಸ್ಗಳಲ್ಲಿ ಚೆಂಡಿನೊಂದಿಗೆ ಅವರ ಅದ್ಭುತ ಪ್ರಯತ್ನಕ್ಕಾಗಿ ಜಡೇಜಾರನ್ನು ಪ್ರತ್ಯೇಕವಾಗಿ ವಿಶೇಷ ಪ್ರಶಂಸೆ ಮಾಡಿದ್ದಾರೆ. ಆಲ್ ರೌಂಡರ್ ಅಕ್ಷರ್ ಪಟೇಲ್ ಅವರ ಅಮೂಲ್ಯವಾದ 74 ರನ್ ಭಾರತವನ್ನು ಕಳಪೆ ಮೊದಲ ಇನ್ನಿಂಗ್ಸ್ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿತ್ತು ಎಂದರು.