ರೋಹಿತ್ ಶರ್ಮಾ-ಕೊಹ್ಲಿ 
ಕ್ರಿಕೆಟ್

ಇಂದೋರ್ ಟೆಸ್ಟ್: ಬೇಡವಾಗಿದ್ದ ಶಾಟ್, ವ್ಯರ್ಥವಾದ DRS, ನಾಯಕ ರೋಹಿತ್ ಶರ್ಮಾಗೆ ಇಂದು ಕೆಟ್ಟ ದಿನ

ರೋಹಿತ್ ಶರ್ಮಾ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ಬ್ಯಾಟರ್ ಮತ್ತು ನಾಯಕನಾಗಿ ಗಮನ ಸೆಳೆದಿದ್ದರು. ಆದರೆ ಮೂರನೇ ಟೆಸ್ಟ್ ಪಂದ್ಯ ಅವರಿಗೆ ದೊಡ್ಡ ಹೊಡೆತ ನೀಡಿದೆ.

ರೋಹಿತ್ ಶರ್ಮಾ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ಬ್ಯಾಟರ್ ಮತ್ತು ನಾಯಕನಾಗಿ ಗಮನ ಸೆಳೆದಿದ್ದರು. ಆದರೆ ಮೂರನೇ ಟೆಸ್ಟ್ ಪಂದ್ಯ ಅವರಿಗೆ ದೊಡ್ಡ ಹೊಡೆತ ನೀಡಿದೆ.

ಭಾರತವು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 4-ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಭಾರತ ಸರಣಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿತ್ತು. ಆದರೆ ಇಂದೋರ್ ಟೆಸ್ಟ್‌ನ 1ನೇ ದಿನ ರೋಹಿತ್ ಮುಟ್ಟಿದ್ದೆಲ್ಲವೂ ಅಪೇಕ್ಷಿತ ಫಲಿತಾಂಶವನ್ನು ತರಲು ವಿಫಲವಾಗಿದೆ.

ಸರಣಿಯಲ್ಲಿ ಮೊದಲ ಬಾರಿಗೆ ಟಾಸ್ ಗೆದ್ದ ನಂತರ, ರೋಹಿತ್ ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇಂದೋರ್‌ನಲ್ಲಿ ರೋಹಿತ್‌ನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರ ತಪ್ಪು ಎಂಬುದು ಮೊದಲ ಓವರ್‌ನಲ್ಲಿಯೇ ಅವರಿಗೆ ಎದುರಾಯಿತು. ಮಿಚೆಲ್ ಸ್ಟಾರ್ಕ್‌ನಿಂದ ಭಯಾನಕ ಔಟ್‌ಸ್ವಿಂಗ್ ಗೆ ಎದುರಿಸಿದ್ದರು. ಚೆಂಡು ಬ್ಯಾಟ್ ಗೆ ತಾಗಿತ್ತು. ಆದರೆ ಇದನ್ನು ಮೈದಾನದ ಅಂಪೈರ್ ನಿತಿನ್ ಮೆನನ್ ಔಟ್ ಇದನ್ನು ಗುರುತಿಸಲು ವಿಫಲವಾದರು. ಹೀಗಾಗಿ ರೋಹಿತ್ ಬಚಾವ್ ಆದರು.

ಆದರೆ ರೋಹಿತ್ ಶರ್ಮಾ 12 ರನ್ ಗಳಿಸಿದ್ದಾಗ ಕುಹ್ನೆಮನ್ ಎಸೆತದಲ್ಲಿ ಬೇಡವಾಗಿದ್ದ ಶಾಟ್ ಹೊಡೆಯಲು ಹೋಗಿ ಸ್ಟಂಪ್ ಆದರು. 

ಭಾರತವು ಅವರ DRS ಕಳೆದುಕೊಂಡಿದ್ದೇಗೆ?
ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ DRS ಗಾಗಿ ನಾಯಕ ರೋಹಿತ್ ಶರ್ಮಾ ಅವರ ಮನವೊಲಿಸುತ್ತಲೇ ಇದ್ದ ಕಾರಣ ಎಲ್ಲಾ 3 ವಿಮರ್ಶೆಗಳನ್ನು ಕಳೆದುಕೊಳ್ಳಬೇಕಾಯಿತು. ಅವುಗಳಲ್ಲಿ ಎರಡು ವಿಮರ್ಶೆಗಳು ಬೇಕಿರಲಿಲ್ಲ. ಮೊದಲ ಎರಡು ವಿಮರ್ಶೆಗಳನ್ನು ಎರಡು ಓವರ್‌ಗಳ ಅವಧಿಯಲ್ಲಿ ತೆಗೆದುಕೊಳ್ಳಲಾಯಿತು. ಎರಡೂ ಉಸ್ಮಾನ್ ಖವಾಜಸ್ ವಿರುದ್ಧ ಮತ್ತು ಎರಡನ್ನು ಅಂಪೈರ್ ಜೋಯಲ್ ವಿಲ್ಸನ್ರಿಂದ LBW ಮನವಿಗಳನ್ನು ತಿರಸ್ಕರಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT