ಅಂಪೈರ್ ಜೊತೆ ಏಂಜೆಲೊ ಮ್ಯಾಥ್ಯೂಸ್ ಚರ್ಚೆ 
ಕ್ರಿಕೆಟ್

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಕ್ರೀಸ್‌ಗೆ ತಡವಾಗಿ ಬಂದ ಏಂಜೆಲೊ ಮ್ಯಾಥ್ಯೂಸ್ ಗೆ ಔಟ್ ಕೊಟ್ಟ ಅಂಪೈರ್, ವಿಡಿಯೋ ವೈರಲ್

ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಯಾಟರ್ ನಿಗದಿತ ಸಮಯದೊಳಗೆ ಮೈದಾನಕ್ಕೆ ಬರಲಿಲ್ಲ ಎಂದು ಅಂಪೈರ್ ಟೈಮ್ ಔಟ್ ಎಂದು ಘೋಷಿಸಿದ್ದಾರೆ.

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಯಾಟರ್ ನಿಗದಿತ ಸಮಯದೊಳಗೆ ಮೈದಾನಕ್ಕೆ ಬರಲಿಲ್ಲ ಎಂದು ಅಂಪೈರ್ ಟೈಮ್ ಔಟ್(timedout) ಎಂದು ಘೋಷಿಸಿದ್ದಾರೆ.

ಶ್ರೀಲಂಕಾ ಮತ್ತು ಬಾಂಗ್ಲಾದೇಶ (BANvSL) ನಡುವಿನ ಪಂದ್ಯದ ವೇಳೆ ಶ್ರೀಲಂಕಾದ ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್ (angelo mathews) ಅವರನ್ನು ಟೈಮ್ ಔಟ್ ಎಂದು ಘೋಷಿಸಲಾಯಿತು. ವಾಸ್ತವವಾಗಿ, ಮ್ಯಾಥ್ಯೂಸ್ ತಪ್ಪಾದ ಹೆಲ್ಮೆಟ್‌ನೊಂದಿಗೆ ಮೈದಾನಕ್ಕೆ ತಲುಪಿದ್ದರು. ಅದರ ನಂತರ ಅವರು ತಮ್ಮ ತಂಡದ ಡಕೌಟ್‌ನಲ್ಲಿ ಸಿಗ್ನಲ್ ಮಾಡಿ ಮತ್ತೊಂದು ಹೆಲ್ಮೆಟ್ ತರಲು ಹೇಳಿದರು. ಇದೆಲ್ಲದರ ನಡುವೆ ಸಾಕಷ್ಟು ಸಮಯ ಕಳೆದಿತ್ತು. ಇದರಿಂದಾಗಿ ಅಂಪೈರ್ ಮ್ಯಾಥ್ಯೂಸ್ ಜೊತೆ ಈ ಬಗ್ಗೆ ಚರ್ಚಿಸಿದರು. 

ಆದರೆ ಬಾಂಗ್ಲಾದೇಶದ ಆಟಗಾರರು ಇದರಿಂದ ಕೆರಳಿದರು. ನಾಯಕ ಶಕೀಬ್ ಅಲ್ ಹಸನ್ 'ಟೈಮ್ ಔಟ್' ಗಾಗಿ ಅಂಪೈರ್‌ಗೆ ಮನವಿ ಮಾಡಿದರು. ಹೀಗಾಗಿ ಮೈದಾನದ ಅಂಪೈರ್ ಗಳು ಮ್ಯಾಥ್ಯೂಸ್ ಅವರನ್ನು ಔಟ್ ಎಂದು ಘೋಷಿಸಿದರು. 'ಟೈಮ್-ಔಟ್' ಎಂದು ಘೋಷಿಸಿದ ನಂತರ, ಮ್ಯಾಥ್ಯೂಸ್ ತುಂಬಾ ಕೋಪಗೊಂಡು ಅಂಪೈರ್ ಜೊತೆ ವಾಗ್ವಾದ ನಡೆಸಿದರು.

ನಿಯಮಗಳ ಪ್ರಕಾರ, ಬ್ಯಾಟ್ಸ್‌ಮನ್ ಔಟಾದ ನಂತರ, ಮತ್ತೊಬ್ಬ ಬ್ಯಾಟ್ಸ್‌ಮನ್ 3 ನಿಮಿಷಗಳಲ್ಲಿ ಕ್ರೀಸ್‌ನೊಳಗೆ ತಲುಪಬೇಕು. ಆದರೆ ಮ್ಯಾಥ್ಯೂಸ್ ಮೈದಾನಕ್ಕೆ ತಲುಪಿದ್ದರು. ಆದರೆ ಸಮಯಕ್ಕೆ ಕ್ರೀಸ್‌ಗೆ ತಲುಪಲಿಲ್ಲ. ಹೀಗಾಗಿ ಅಂಪೈರ್ ಗಳು ಅವರನ್ನು ಔಟ್ ಎಂದು ಘೋಷಿಸಿದರು. ಇನ್ನು ಮ್ಯಾಥ್ಯೂಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೈಮ್ ಔಟ್ ಆದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಅಪಖ್ಯಾತಿಗೆ ಭಾಜನರಾಗಿದ್ದಾರೆ.

ಟೈಮ್ ಔಟ್ ಅಂದರೇನು?
ವಿಕೆಟ್ ಪತನದ ನಂತರ ಅಥವಾ ಬ್ಯಾಟ್ಸ್‌ಮನ್ ಗಾಯಗೊಂಡ ನಂತರ, ಮುಂದಿನ ಬ್ಯಾಟ್ಸ್‌ಮನ್ 3 ನಿಮಿಷಗಳಲ್ಲಿ ಕ್ರೀಸ್‌ಗೆ ಬಂದು ಚೆಂಡನ್ನು ಎದುರಿಸಬೇಕು. ಇದು ಸಾಧ್ಯವಾಗದಿದ್ದರೆ, ಎದುರಾಳಿ ತಂಡವು ಮೇಲ್ಮನವಿ ಸಲ್ಲಿಸಬಹುದು. ಬ್ಯಾಟ್ಸ್‌ಮನ್‌ಗೆ ಸಮಯ ಮೀರಿದಾಗ ಮತ್ತು ಅಂಪೈರ್ ಹೊಸ ಬ್ಯಾಟ್ಸ್‌ಮನ್‌ನನ್ನು ಔಟ್ ಎಂದು ಘೋಷಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನಾಕಾರನ ತಂದೆ ಮೇಲೆ ಹಲ್ಲೆ ಆರೋಪ; ದೆಹಲಿಯಲ್ಲಿ ಭಾರೀ ಹೈಡ್ರಾಮಾ; ಹಿಂದೂತ್ವ ಕಾರ್ಯಕರ್ತನ ಬಂಧನಕ್ಕೆ ಆಗ್ರಹ, ಪೊಲೀಸ್ ಠಾಣೆಗೆ CJP ಮುತ್ತಿಗೆ

ನೇಪಾಳ ಜಲಪ್ರಳಯ ನಡುವೆ ಮಹಾ ಪವಾಡ; ಮೃತ್ಯುಕೂಪದಿಂದ ಹೊರಬಂದ ಕಾರ್ಮಿಕರು, ತ್ರಿಶೂಲಿ-3A ಸುರಂಗದಿಂದ ಇಬ್ಬರು ಜೀವಂತ ರಕ್ಷಣೆ..!

Climate compensation ವಿವಾದ; ಭಾರತದಿಂದ ನೆರವು ಸ್ವೀಕರಿಸಿದ್ದೇವೆ, ಯಾವುದೇ ಪರಿಹಾರಕ್ಕೂ ಬೇಡಿಕೆ ಇಟ್ಟಿಲ್ಲ; ನೇಪಾಳ ಸ್ಪಷ್ಟನೆ..!

ನೇಪಾಳ ಪ್ರವಾಹ ದುರಂತ: ನಾಪತ್ತೆಯಾದವರ ಕುಟುಂಬಕ್ಕೆ ಭಾರತ ನೆರವು, DNA ಪರೀಕ್ಷೆಗೆ ಕೇಂದ್ರದಿಂದ ವ್ಯವಸ್ಥೆ..!

ಇಸ್ರೋದ GSLV-F17 ರಾಕೆಟ್‌ ಉಡಾವಣೆ ಯಶಸ್ವಿ: ಮಳೆಯ ನಡುವೆಯೂ ನಭಕ್ಕೆ ಚಿಮ್ಮಿದ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ