ಕಾಂಗ್ರೆಸ್ ಸಂಸದ ಶಶಿ ತರೂರ್ 
ಕ್ರಿಕೆಟ್

ಜಿಂಬಾಬ್ವೆ ವಿರುದ್ಧ ಭಾರತದ ಹೀನಾಯ ಸೋಲಿಗೆ ಬಿಸಿಸಿಐ 'ಅಹಂಕಾರ' ಕಾರಣ: ಸಂಸದ ಶಶಿ ತರೂರ್

ಜಿಂಬಾಬ್ವೆ ತಂಡವನ್ನು ಬಿಸಿಸಿಐ ಲಘುವಾಗಿ ಪರಿಗಣಿಸಿತ್ತು. ಹೀಗಾಗಿ ಹರಾರೆಗೆ ಬಲಿಷ್ಠ ತಂಡವನ್ನು ಕಳುಹಿಸಿಲ್ಲ. ಇದು ಬಿಸಿಸಿಐ 'ಅಹಂಕಾರ' ತೋರಿಸುತ್ತದೆ ಎಂದು ಶಶಿ ತರೂರ್ ಬರೆದಿದ್ದರು.

ನವದೆಹಲಿ: ಶುಭ್ಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯ ಮೊದಲ ಪಂದ್ಯ ಶನಿವಾರ ನಡೆದಿದ್ದು, ಭಾರತ 13 ರನ್‌ಗಳಿಂದ ಸೋಲನುಭವಿಸಿತ್ತು. ಭಾರತ ತಂಡದ ಈ ಸೋಲಿನ ನಂತರ ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಸಿಸಿಐ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ. ಬಿಸಿಸಿಐ ವಿರುದ್ಧ ಕಿಡಿಕಾರಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಎಕ್ಸ್ ಪೋಸ್ಟ್‌ನಲ್ಲಿ ಮಾಡಿರುವ ಶಶಿ ತರೂರ್, 'ಭಾರತದ T20 ವಿಶ್ವಕಪ್ 2024 ಗೆಲುವಿಗಾಗಿ ಮುಂಬೈನಲ್ಲಿ ಸಂಭ್ರಮಾಚರಣೆಯ ಪ್ರತಿಧ್ವನಿ ಇನ್ನೂ ಕಡಿಮೆಯಾಗಿಲ್ಲ. ಆದರೆ ಇಂದು ಹರಾರೆಯಲ್ಲಿ ಸಣ್ಣ ಜಿಂಬಾಬ್ವೆ ತಂಡವು ನಮ್ಮನ್ನು ಸೋಲಿಸಿದೆ. ಜಿಂಬಾಬ್ವೆ ತಂಡವನ್ನು ಬಿಸಿಸಿಐ ಲಘುವಾಗಿ ಪರಿಗಣಿಸಿತ್ತು. ಹೀಗಾಗಿ ಹರಾರೆಗೆ ಬಲಿಷ್ಠ ತಂಡವನ್ನು ಕಳುಹಿಸಿಲ್ಲ. ಇದು ಬಿಸಿಸಿಐ 'ಅಹಂಕಾರ' ತೋರಿಸುತ್ತದೆ ಎಂದು ಬರೆದಿದ್ದರು.

ಪ್ರಸ್ತುತ T20 ಸರಣಿಗೆ ಅಗ್ರ ಆಟಗಾರರಿಲ್ಲದ ತಂಡವನ್ನು ಕಳುಹಿಸಿದ್ದಕ್ಕಾಗಿ ಬಿಜೆಪಿಯ ಹಿರಿಯ ನಾಯಕ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಅಹಂಕಾರಿ ಎಂದು ಕರೆದಿದ್ದರು. ಇನ್ನು ಶಶಿ ತರೂರ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಮುಖ್ಯ ತಂಡ ಇಂದು ಆಡಲಿಲ್ಲ - ನಾವು ಸೋತಿದ್ದೇವೆ... ಆದರೆ ಬಿಜೆಪಿ ಮತ್ತು ಮೋದಿಯ ಮೇಲಿನ ದ್ವೇಷದಲ್ಲಿ ಕಾಂಗ್ರೆಸ್ ಭಾರತದ ಸೋಲನ್ನು ಸಂಭ್ರಮಿಸುತ್ತಿದೆ ನೋಡಿ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಕಾಂಗ್ರೆಸ್ ನಾಯಕನನ್ನು ಟೀಕಿಸಿದ್ದಾರೆ.

ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಕಡಿಮೆ ರನ್ ಗಳಿಸಿ ಸೋಲು ಕಂಡಿದ್ದಾರೆ. 116 ರನ್‌ಗಳ ಗುರಿ ಬೆನ್ನತ್ತಿದ ಭಾರತ ಒಟ್ಟು 102 ರನ್‌ಗಳಿಗೆ ಕುಸಿಯಿತು. ಶುಭ್‌ಮನ್ ಗಿಲ್ 31 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ತೆಂಡೈ ಚತ್ರಾ ಮತ್ತು ಸಿಕಂದರ್ ರಝಾ ತಲಾ ಮೂರು ವಿಕೆಟ್ ಪಡೆದು ಭಾರತ ತಂಡದ ವಿರುದ್ಧ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಜುಲೈ 7ರಂದು ಅಂದರೆ ಇಂದು ಸರಣಿಯ ಎರಡನೇ ಟಿ20 ಪಂದ್ಯವನ್ನು ತಂಡವು ಆಡಿದ್ದು 100 ರನ್ ಗಳ ಗೆಲುವಿನೊಂದಿಗೆ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT