ಸಂಗ್ರಹ ಚಿತ್ರ 
ಕ್ರಿಕೆಟ್

ಕ್ರಿಕೆಟ್ ಅಖಾಡದಲ್ಲಿ ಅಮುಲ್‌ಗೆ ಟಕ್ಕರ್ ಕೊಡಲು ಮುಂದಾದ ನಂದಿನಿ: T20 ವಿಶ್ವಕಪ್ ಟೂರ್ನಿಯ ಪ್ರಾಯೋಜಕತ್ವಕ್ಕಾಗಿ ಪ್ರಯತ್ನ?

ಅಮುಲ್ ಮತ್ತು ನಂದಿನಿ ನಡುವಿನ ಹಾಲಿನ ಸಮರ ತೀವ್ರಗೊಳ್ಳುತ್ತಿದ್ದು, ಅದರ ಬಿಸಿ ಕ್ರಿಕೆಟ್ ಕ್ಷೇತ್ರಕ್ಕೂ ತಲುಪುವ ಸಾಧ್ಯತೆ ಇದೆ. ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್), ನಂದಿನಿ ಬ್ರಾಂಡ್‌ನ ಹಾಲು ಮತ್ತು ಮೊಸರು ಮುಂತಾದ ಡೈರಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಅಮುಲ್ ಮತ್ತು ನಂದಿನಿ ನಡುವಿನ ಹಾಲಿನ ಸಮರ ತೀವ್ರಗೊಳ್ಳುತ್ತಿದ್ದು, ಅದರ ಬಿಸಿ ಕ್ರಿಕೆಟ್ ಕ್ಷೇತ್ರಕ್ಕೂ ತಲುಪುವ ಸಾಧ್ಯತೆ ಇದೆ. ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್), ನಂದಿನಿ ಬ್ರಾಂಡ್‌ನ ಹಾಲು ಮತ್ತು ಮೊಸರು ಮುಂತಾದ ಡೈರಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಮಧ್ಯೆ ಜೂನ್‌ನಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಒಂದು ಅಥವಾ ಹೆಚ್ಚಿನ ತಂಡಗಳ ಪ್ರಾಯೋಜಕತ್ವ ಪಡೆಯಲು ಮುಂದಾಗಿದೆ.

ICC T20 ವಿಶ್ವಕಪ್‌ನಲ್ಲಿ ಭಾಗವಹಿಸುವ ಒಂದು ಅಥವಾ ಹೆಚ್ಚಿನ ತಂಡಗಳ ಜರ್ಸಿಯಲ್ಲಿ ನಂದಿನಿ ಲೋಗೋವನ್ನು ಪ್ರಚಾರ ಮಾಡಲು KMF ಕಂಪನಿಗಳನ್ನು ಆಹ್ವಾನಿಸಿದ್ದು ಟೆಂಡರ್ ನೀಡಲಾಗಿದೆ. ಜೂನ್ 1ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ವ ಟಿ20 ವಿಶ್ವಕಪ್ ನಲ್ಲಿ ಈ ವರ್ಷದ ಆವೃತ್ತಿಯು ದಾಖಲೆಯ 20 ತಂಡಗಳು ಆಡುತ್ತಿವೆ.

ನಂದಿನಿ ತನ್ನ ಪ್ರತಿಸ್ಪರ್ಧಿ ಅಮುಲ್ ಅನ್ನು ಒಂದು ರೀತಿಯಲ್ಲಿ ಅನುಸರಿಸುತ್ತಿದೆ. ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್, ಅದರ ಡೈರಿ ಉತ್ಪನ್ನಗಳನ್ನು ಅಮುಲ್ ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತದೆ. ಇನ್ನು 2011ರಲ್ಲಿ ವಿಶ್ವಕಪ್‌ನಲ್ಲಿ ಡಚ್ ತಂಡವನ್ನು ಪ್ರಾಯೋಜಿಸುವ ನಿರ್ಧಾರದೊಂದಿಗೆ ಸಂಚಲನವನ್ನು ಸೃಷ್ಟಿಸಿತು. ಅಂದಿನಿಂದ ಅವರು ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದ ಕ್ರಿಕೆಟ್ ತಂಡಗಳೊಂದಿಗೆ ಸಂಬಂಧ ಹೊಂದಿದೆ. 2019ರಲ್ಲಿ ಅಮುಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನ ಪೂರ್ಣ ಸದಸ್ಯತ್ವ ಸಾಧಿಸಿದ ನಂತರ ಮತ್ತು 2023ರ ವಿಶ್ವಕಪ್‌ಗೆ ಮುಂಚಿತವಾಗಿ ಅಫ್ಘಾನಿಸ್ತಾನ ತಂಡದ ಶೀರ್ಷಿಕೆ ಪ್ರಾಯೋಜಿಸುತ್ತಿದೆ.

ಈ ಮಧ್ಯೆ ಕೆಎಂಫ್ ಭಾರತ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಶ್ರೀಲಂಕಾ, ನೇಪಾಳ, ಓಮನ್, ನೆದರ್ಲ್ಯಾಂಡ್ಸ್, ಉಗಾಂಡಾ ಮತ್ತು ನಮೀಬಿಯಾ ಸೇರಿದಂತೆ ಒಂದು ಅಥವಾ ಎರಡು ತಂಡಗಳನ್ನು ಹುಡುಕುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಎಂಎಫ್ ಮಹಾನಿರ್ದೇಶಕ ಎಂ.ಕೆ.ಜಗದೀಶ್ ಮಾತನಾಡಿ, ನಾವು ಟೆಂಡರ್ ನೀಡಿದ್ದು, ಅಂತಿಮಗೊಳಿಸುವ ಹಂತದಲ್ಲಿದೆ. ಚುನಾವಣಾ ಆಯೋಗದಿಂದ ಅನುಮತಿ ಪಡೆದ ನಂತರ ವರ್ಕ್ ಆರ್ಡರ್ ನೀಡುತ್ತೇವೆ. ಏಕೆಂದರೆ, ಸಾರ್ವಜನಿಕ ವಲಯದ ಉದ್ಯಮವಾಗಿರುವುದರಿಂದ, 2024ರ ಲೋಕಸಭೆ ಚುನಾವಣೆಯ ದಿನಾಂಕಗಳ ಘೋಷಣೆಯೊಂದಿಗೆ ಮಾರ್ಚ್ 16 ರಂದು ಜಾರಿಗೆ ಬಂದ ಮಾದರಿ ನೀತಿ ಸಂಹಿತೆಯ ಮೂಲಕ ಕೆಎಂಎಫ್ ಅನ್ನು ನಿಯಂತ್ರಿಸಲಾಗುತ್ತದೆ ಮತ್ತು ಎಲ್ಲಾ ಪ್ರಮುಖ ನಿರ್ಧಾರಗಳನ್ನು ಚುನಾವಣಾ ಅಂಗೀಕರಿಸಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT