ಕೆಎಲ್ ರಾಹುಲ್ (ಸಂಗ್ರಹ ಚಿತ್ರ) 
ಕ್ರಿಕೆಟ್

IPL 2025: 'ನಾಯಕತ್ವ ಅಲ್ಲ.. ಗೌರವ, ಕಾಳಜಿ ಮತ್ತು ಪ್ರೀತಿ ಬೇಕು'; ಐಪಿಎಲ್ ಹರಾಜಿನಲ್ಲಿ ಖರೀದಿಸುವ ತಂಡಗಳಿಗೆ KL Rahul ಷರತ್ತು!

ಕೆಎಲ್ ರಾಹುಲ್ ಈ ಬಾರಿಯ ಹರಾಜು ಪ್ರಕ್ರಿಯೆಯ ದೊಡ್ಡ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಹಲವು ತಂಡಗಳು ಕೆಎಲ್ ರಾಹುಲ್ ರನ್ನು ಖರೀದಿಸಲು ಮುಗಿ ಬೀಳುವ ಸಾಧ್ಯತೆ ಇದೆ.

ನವದೆಹಲಿ: ಐಪಿಎಲ್ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಲಖನೌ ತಂಡದಿಂದ ಹೊರಬಿದ್ದಿರುವ ಕನ್ನಡಿಗ ಕೆಎಲ್ ರಾಹುಲ್ ತಮ್ಮನ್ನು ಹರಾಜಿನಲ್ಲಿ ಖರೀದಿಸುವ ತಂಡಕ್ಕೆ 3 ಪ್ರಮುಖ ಷರತ್ತುಗಳನ್ನು ವಿಧಿಸಿದ್ದಾರೆ.

ಐಪಿಎಲ್ ಫ್ರಾಂಚೈಸಿಗಳು ಐಪಿಎಲ್ 2025 ರ ಹರಾಜಿನ ಮೊದಲು ಬಿಡುಗಡೆ ಮಾಡಲಿರುವ ಆಟಗಾರರನ್ನು ಬಹಿರಂಗಪಡಿಸಿದ್ದು ಈ ಪೈಕಿ ಲಖನೌ ಸೂಪರ್ ಜೈಂಟ್ಸ್ ತಂಡ ಕೆಎಲ್ ರಾಹುಲ್ ರನ್ನು ತಂಡದಿಂದ ಕೈಬಿಟ್ಟಿದೆ.

ಇದರ ನಡುವೆಯೇ ಕೆಎಲ್ ರಾಹುಲ್ ಈ ಬಾರಿಯ ಹರಾಜು ಪ್ರಕ್ರಿಯೆಯ ದೊಡ್ಡ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಹಲವು ತಂಡಗಳು ಕೆಎಲ್ ರಾಹುಲ್ ರನ್ನು ಖರೀದಿಸಲು ಮುಗಿ ಬೀಳುವ ಸಾಧ್ಯತೆ ಇದೆ.

ಕೆಎಲ್ ರಾಹುಲ್ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದು, ಆರಂಭಿಕರಾಗಿ, ಮಧ್ಯಮ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ನಾಯಕರಾಗಿಯೂ ಕೆಎಲ್ ರಾಹುಲ್ ಸೇವೆ ಸಲ್ಲಿಸಿದ್ದು, ಅವರ ಸುದೀರ್ಘ ಅನುಭವ ಅವರ ಆಯ್ಕೆಗೆ ಪ್ರಮುಖ ಮಾನದಂಡಗಳಾಗಿರಲಿವೆ.

ಷರತ್ತು ವಿಧಿಸಿದ KL Rahul

ಇನ್ನು ತಮ್ಮನ್ನು ಖರೀದಿಸುವ ಫ್ರಾಂಚೈಸಿಗಳಿಗೆ ಕೆಎಲ್ ರಾಹುಲ್ 3 ಪ್ರಮುಖ ಷರತ್ತುಗಳನ್ನು ವಿಧಿಸಿದ್ದು, ಈ ಷರತ್ತುಗಳ ಪಟ್ಟಿಯಲ್ಲಿ ನಾಯಕತ್ವ ಇಲ್ಲವೇ ಇಲ್ಲ. ಅದಾಗ್ಯೂ ಕೆಎಲ್ ರಾಹುಲ್ ತಮ್ಮ ಹಿಂದಿನ ಕಹಿ ಅನುಭವಗಳನ್ನು ಪರಿಗಣನೆಗೆ ತೆಗೆದುಕೊಂಡು 3 ಷರತ್ತುಗಳನ್ನು ವಿಧಿಸಿದ್ದು, ನಾಯಕತ್ವವು ತನ್ನ ಆದ್ಯತೆಯಲ್ಲ, ಬದಲಿಗೆ "ಪ್ರೀತಿ, ಕಾಳಜಿ ವಹಿಸುವ ಮತ್ತು ಗೌರವಾನ್ವಿತ" ತಂಡದಲ್ಲಿ ಹೋಗಲು ಬಯಸುತ್ತಾನೆ ಎಂದು ರಾಹುಲ್ ಸ್ಪಷ್ಟವಾಗಿ ಹೇಳಿದ್ದಾರೆ.

ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿರುವ ಕೆಎಲ್ ರಾಹುಲ್, "ನಾನು ಯಾವಾಗಲೂ ನನ್ನ ಮೈಂಡ್ ಸೆಟ್ ಗೆ ಹೊಂದಿಕೊಳ್ಳುತ್ತೇನೆ. ಓಪನಿಂಗ್, ಮಧ್ಯಮ ಕ್ರಮಾಂಕ, ಕೀಪಿಂಗ್, ಫೀಲ್ಡಿಂಗ್. ನನಗೆ ಯಾವುದೇ ಪಾತ್ರ ಅಥವಾ ಯಾವುದೇ ಜವಾಬ್ದಾರಿ ನೀಡಿದರೂ ನಾನು ನನ್ನ ಸಾಮರ್ಥ್ಯ ಮೀರಿ ಆಡುವ ಪ್ರಯತ್ನ ಮಾಡುತ್ತೇನೆ.

"ನಾನು ಯಾರನ್ನೂ ನಾಯಕತ್ವ ನೀಡಿ ಎಂದು ಕೇಳಲು ಹೋಗುವುದಿಲ್ಲ, ನನ್ನ ನಾಯಕತ್ವದ ಕೌಶಲ್ಯವು ಸಾಕಷ್ಟು ಉತ್ತಮವಾಗಿದೆ ಎಂದು ನೀವು ಭಾವಿಸಿದರೆ ಮತ್ತು ನನ್ನ ಕ್ರಿಕೆಟ್ ಆಡುವ ರೀತಿಯಲ್ಲಿ ನೀವು ಏನಾದರೂ ಒಳ್ಳೆಯದನ್ನು ಕಂಡುಕೊಂಡರೆ ಆಗ ನೀವು ನಿರ್ಣಯ ಕೈಗೊಳ್ಳಬಹುದು ಎಂದು ಹೇಳಿದರು.

ಅಂತೆಯೇ, 'ನಾನು ನನ್ನನ್ನು ನಿಭಾಯಿಸುವ ರೀತಿಯಲ್ಲಿ ಮತ್ತು ತಂಡಗಳನ್ನು ನಿಭಾಯಿಸಿದ ರೀತಿಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ವಿಶೇಷ ಅನುಭವ ಹೊಂದಿದ್ದೇನೆ. ನೀವು ನನ್ನನ್ನು ಯೋಗ್ಯರೆಂದು ಕಂಡುಕೊಂಡರೆ, ನಾನು ಅದನ್ನು ಮಾಡಲು ಸಂತೋಷ ಪಡುತ್ತೇನೆ, ನಾನು ಒಳ್ಳೆಯ ವಾತಾವರಣವನ್ನು ಹೊಂದಿರುವ ತಂಡದ ಭಾಗವಾಗಲು ಬಯಸುತ್ತೇನೆ ಎಂದರು.

ಎರಡು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದ ಎಲ್‌ಎಸ್‌ಜಿಯಿಂದ ಹಿಂದೆ ಸರಿಯುವ ಬಗ್ಗೆ ಮಾತನಾಡಿದ ರಾಹುಲ್, 'ಐಪಿಎಲ್ ಗೆಲ್ಲಲು ಆ ಫ್ರಾಂಚೈಸಿಯಲ್ಲಿ ಎಲ್ಲರೂ ಕಾಳಜಿ ವಹಿಸಿದರು ಮತ್ತು ಗೌರವಿಸಿದರು. ನಾನು ಮತ್ತೆ ಹೊಸದಾಗಿ ಪ್ರಾರಂಭಿಸಲು ಬಯಸುತ್ತೇನೆ.

ನನ್ನ ಆಯ್ಕೆಗಳನ್ನು ಅನ್ವೇಷಿಸಲು ನಾನು ಬಯಸುತ್ತೇನೆ ಮತ್ತು ನಾನು ಸ್ವಲ್ಪ ಸ್ವಾತಂತ್ರ್ಯವನ್ನು ಕಂಡುಕೊಳ್ಳಲು ಮತ್ತು ತಂಡದ ವಾತಾವರಣವು ಸಾಧ್ಯವಾದ ಸ್ಥಳಕ್ಕೆ ಹೋಗಿ ಆಡಲು ಬಯಸುತ್ತೇನೆ. ಕೆಲವೊಮ್ಮೆ ನೀವು ಸ್ವಲ್ಪ ದೂರ ಹೋಗಬೇಕು ಮತ್ತು ನಿಮಗಾಗಿ ಒಳ್ಳೆಯದನ್ನು ಕಂಡುಕೊಳ್ಳಬೇಕು ಎಂದು ರಾಹುಲ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT