ನಿತೀಶ್ ಕುಮಾರ್ ರೆಡ್ಡಿ 
ಕ್ರಿಕೆಟ್

2nd T20: ನಿತೀಶ್ ರೆಡ್ಡಿ ಮತ್ತೊಂದು ದಾಖಲೆ, ಸ್ಪಿನ್ ಬೌಲಿಂಗ್ ನಲ್ಲಿ ಗರಿಷ್ಠ ರನ್ ಸಿಡಿಸಿದ 5ನೇ ಬ್ಯಾಟರ್

ಬಾಂಗ್ಲಾ ಸ್ಪಿನ್ನರ್ ಗಳ ವಿರುದ್ಧ ಲೀಲಾಜಾಲ ಬ್ಯಾಟಿಂಗ್ ಪ್ರದರ್ಶನ ನೀಡಿದ ನಿತೀಶ್ ರೆಡ್ಡಿ ಕೇವಲ 34 ಎಸೆತಗಳನ್ನು ಎದುರಿಸಿ 7 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ ದಾಖಲೆಯ 217.65 ಸ್ಟ್ರೈಕ್ ರೇಟ್ ನಲ್ಲಿ 74 ರನ್ ಸಿಡಿಸಿದರು.

ನವದೆಹಲಿ: ಬಾಂಗ್ಲಾದೇಶ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡದ ಉದಯೋನ್ಮುಖ ಆಟಗಾರ ನಿತೀಶ್ ರೆಡ್ಡಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ನಿತೀಶ್ ರೆಡ್ಡಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಕೇವಲ 34 ಎಸೆತಗಳನ್ನು ಎದುರಿಸಿ 7 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ ದಾಖಲೆಯ 217.65 ಸ್ಟ್ರೈಕ್ ರೇಟ್ ನಲ್ಲಿ 74 ರನ್ ಸಿಡಿಸಿದರು.

ಸ್ಪಿನ್ ಬೌಲಿಂಗ್ ಗರಿಷ್ಠ ರನ್ ಸಿಡಿಸಿದ ನಿತೀಶ್ ರೆಡ್ಡಿ

ಇಂದಿನ ಪಂದ್ಯದಲ್ಲಿ ಬಾಂಗ್ಲಾ ಸ್ಪಿನ್ನರ್ ಗಳ ವಿರುದ್ಧ ಲೀಲಾಜಾಲ ಬ್ಯಾಟಿಂಗ್ ಪ್ರದರ್ಶನ ನೀಡಿದ ನಿತೀಶ್ ರೆಡ್ಡಿ ಕೇವಲ 34 ಎಸೆತಗಳನ್ನು ಎದುರಿಸಿ 7 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ ದಾಖಲೆಯ 217.65 ಸ್ಟ್ರೈಕ್ ರೇಟ್ ನಲ್ಲಿ 74 ರನ್ ಸಿಡಿಸಿದರು.

ಈ ಪೈಕಿ ಸ್ಪಿನ್ನರ್ ಗಳ ವಿರುದ್ಧವೇ ಅವರು 53ರನ್ ಸಿಡಿಸಿದ್ದು, ಆ ಮೂಲಕ ಸ್ಪಿನ್ನರ್ ಗಳ ವಿರುದ್ಧ ಗರಿಷ್ಠ ಮೊತ್ತ ದಾಖಲಿಸಿದ 5ನೇ ಭಾರತೀಯ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾದರು.

ಇದಕ್ಕೂ ಮೊದಲು ಇದೇ ವರ್ಷ ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತದ ಅಭಿಷೇಕ್ ಶರ್ಮಾ ಸ್ಪಿನ್ ಬೌಲಿಂಗ್ ನಲ್ಲಿ 65ರನ್ ಕಲೆ ಹಾಕಿದ್ದರು. ಅಂದಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 47 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 100ರನ್ ಸಿಡಿಸಿದ್ದರು.

ನಂತರದ ಸ್ಥಾನದಲ್ಲಿ ಭಾರತ ಮಾಜಿ ಆಟಗಾರ ಯುವರಾಜ್ ಸಿಂಗ್ ಇದ್ದು, ಯುವಿ 2012ರಲ್ಲಿ ಅಹ್ಮದಾಬಾದ್ ನಲ್ಲಿ ಪಾಕಿಸ್ತಾನ ವಿರುದ್ಧ ಸ್ಪಿನ್ ಬೌಲಿಂಗ್ ನಲ್ಲಿ 57 ರನ್ ಕಲೆಹಾಕಿದ್ದರು.

Most runs in an innings vs spin for an Indian batter (T20I)

  • 65 Abhishek Sharma vs Zim Harare 2024

  • 57 Yuvraj Singh vs Pak Ahmedabad 2012

  • 55 Ruturaj Gaikwad vs Aus Guwahati 2023

  • 54 Virat Kohli vs Afg Dubai 2022

  • 53 Nitish Reddy vs Ban Delhi 2024

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT