ರೋಹಿತ್ ಶರ್ಮಾ- ಜಸ್ಪ್ರೀತ್ ಬುಮ್ರಾ  online desk
ಕ್ರಿಕೆಟ್

ಟೆಸ್ಟ್ ಟೀಂ ಗೆ ಉಪನಾಯಕನಾಗಿ ಜಸ್ಪ್ರೀತ್ ಬೂಮ್ರಾ ಆಯ್ಕೆ: ಕಾರಣ ಬಹಿರಂಗಪಡಿಸಿದ ರೋಹಿತ್ ಶರ್ಮಾ

ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿ ಮುಂದುವರಿದಿದ್ದರೆ, ಉಪನಾಯಕನನ್ನಾಗಿ ಜಸ್ಪ್ರೀತ್ ಬೂಮ್ರಾ ಅವರನ್ನು ಆಯ್ಕೆ ಮಾಡಲಾಗಿದೆ. ಬೂಮ್ರಾ ಭಾರತದ ಅತ್ಯಂತ ಮುಖ್ಯ ಆಟಗಾರರಾಗಿದ್ದಾರೆ.

ಬೆಂಗಳೂರು: ನ್ಯೂ ಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡ ಘೋಷಣೆಯಾಗಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಿರುವ ತನ್ನ ಆದ್ಯತೆಯನ್ನು ಬಿಸಿಸಿಐ ಸ್ಪಷ್ಟಪಡಿಸಿದೆ.

ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿ ಮುಂದುವರಿದಿದ್ದರೆ, ಉಪನಾಯಕನನ್ನಾಗಿ ಜಸ್ಪ್ರೀತ್ ಬೂಮ್ರಾ ಅವರನ್ನು ಆಯ್ಕೆ ಮಾಡಲಾಗಿದೆ. ಬೂಮ್ರಾ ಭಾರತದ ಅತ್ಯಂತ ಮುಖ್ಯ ಆಟಗಾರರಾಗಿದ್ದಾರೆ.

ಬೂಮ್ರಾ ಅವರಿಗೆ ನಾಯಕತ್ವದ ವಿಭಾಗದಲ್ಲಿ ಈ ವರೆಗೆ ಯಾವುದೇ ಅನುಭವವಿಲ್ಲವಾದರೂ ನಾಯಕತ್ವದ ಗುಂಪಿನ ಭಾಗವಾಗಿದ್ದರು.

ನ್ಯೂ ಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ರೋಹಿತ್ ಶರ್ಮಾಗೆ ಬೂಮ್ರಾ ಅವರನ್ನು ಉಪನಾಯಕನನ್ನಾಗಿ ನೇಮಕ ಮಾಡಿರುವುದರ ಬಗ್ಗೆ ಪ್ರಶ್ನೆ ಕೇಳಲಾಯಿತು. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿರುವ ರೋಹಿತ್ ಶರ್ಮಾ, ಬುಮ್ರಾ ಅವರು ಯಾವುದೇ ಮಟ್ಟದಲ್ಲಿ ನಾಯಕತ್ವದ ಅನುಭವವನ್ನು ಹೊಂದಿಲ್ಲದಿದ್ದರೂ ಸಹ ಪಂದ್ಯಗಳ ಸಮಯದಲ್ಲಿ ಅವರ ಸಲಹೆಗಳನ್ನು ಅವರು ಎಷ್ಟು ಸ್ವಾಗತಿಸಿದ್ದಾರೆ ಎಂಬುದನ್ನು ರೋಹಿತ್ ಶರ್ಮಾ ವಿವರಿಸಿದ್ದಾರೆ.

“ನೋಡಿ, ಬುಮ್ರಾ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಅವರ ಜತೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಅವರು ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಅವರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನೀವು ಅವರೊಂದಿಗೆ ಮಾತನಾವಾಗ, ಅವರು ಆಟವನ್ನು ಅರ್ಥಮಾಡಿಕೊಳ್ಳುತ್ತಾರೆ ”ಎಂದು ರೋಹಿತ್ ಹೇಳಿದ್ದಾರೆ. “ತಾಂತ್ರಿಕವಾಗಿ, ಅವರು ಹೆಚ್ಚು ನಾಯಕತ್ವ ವಹಿಸದ ಕಾರಣ ನಾನು ಹೆಚ್ಚು ಹೇಳಲಾರೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

"ನೀವು ಹೆಜ್ಜೆ ಹಾಕಲು ನಾಯಕನ ಅಗತ್ಯವಿರುವ ಪರಿಸ್ಥಿತಿಯಲ್ಲಿರುವಾಗ, ನಾಯಕನಾದವರು ಏನು ಬೇಕು ಎಂದು ಅರ್ಥಮಾಡಿಕೊಳ್ಳುತ್ತಾರೆ. ಬುಮ್ರಾ ಅಂತಹವರಲ್ಲಿ ಒಬ್ಬರು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ಹಿಂದಿನಿಂದಲೂ, ಅವರು ಯಾವಾಗಲೂ ನಮ್ಮ ನಾಯಕತ್ವದ ಗುಂಪಿನಲ್ಲಿದ್ದರು,” ಎಂದು ರೋಹಿತ್ ಹೇಳಿದರು.

ತಂಡದಲ್ಲಿ ಅತ್ಯಂತ ಅನುಭವಿ ವೇಗಿಯಾಗಿರುವ ಬುಮ್ರಾ ತಂಡದಲ್ಲಿರುವ ಯುವ ವೇಗಿಗಳಿಗೆ ನೆರವಾಗುವ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT