ರಶೀದ್ ಲತೀಫ್ 
ಕ್ರಿಕೆಟ್

IPL ಬ್ಯಾನ್ ಮುಂದುವರಿಕೆ; ಪಾಕಿಸ್ತಾನ ಕ್ರಿಕೆಟ್ ಮೇಲೆ ಪರಿಣಾಮ: ರಶೀದ್ ಲತೀಫ್

2008 ರ ಐಪಿಎಲ್‌ ಉದ್ಘಾಟನಾ ಆವೃತ್ತಿಯಲ್ಲಿ 12 ಪಾಕ್ ಆಟಗಾರರು ಲೀಗ್‌ನಲ್ಲಿ ಆಡಿದ್ದರು. ತದನಂತರ ನಡೆದ ಮುಂಬೈ ದಾಳಿಯ ನಂತರ ಪಾಕಿಸ್ತಾನಿ ಆಟಗಾರರು ಐಪಿಎಲ್ ನಲ್ಲಿ ಆಡದಂತೆ ಬಿಸಿಸಿಐ ನಿಷೇಧಿಸಿತು.

ನವದೆಹಲಿ: ಪಾಕಿಸ್ತಾನ ಆಟಗಾರರು ಐಪಿಎಲ್ ನಲ್ಲಿ ಆಡುತ್ತಿಲ್ಲ. ಇದೇ ಕಾರಣದಿಂದ ಪಾಕ್ ತಂಡ ಇತ್ತೀಚಿಗೆ ತಮ್ಮ ಗುಣಮಟ್ಟಕ್ಕೆ ತಕ್ಕಂತೆ ಆಡುತ್ತಿಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಹೇಳಿದ್ದಾರೆ.

2008 ರ ಐಪಿಎಲ್‌ ಉದ್ಘಾಟನಾ ಆವೃತ್ತಿಯಲ್ಲಿ 12 ಪಾಕ್ ಆಟಗಾರರು ಲೀಗ್‌ನಲ್ಲಿ ಆಡಿದ್ದರು. ತದನಂತರ ನಡೆದ ಮುಂಬೈ ದಾಳಿಯ ನಂತರ ಪಾಕಿಸ್ತಾನಿ ಆಟಗಾರರು ಐಪಿಎಲ್ ನಲ್ಲಿ ಆಡದಂತೆ ಬಿಸಿಸಿಐ ನಿಷೇಧಿಸಿತು.

ಈ ಕುರಿತು ಸುದ್ದಿಸಂಸ್ಥೆ IANS ಜೊತೆಗೆ ಮಾತನಾಡಿದ ಲತೀಫ್, “ನಿಸ್ಸಂಶಯವಾಗಿ, ನಾವು ಐಪಿಎಲ್ ಕಳೆದುಕೊಳ್ಳುತ್ತಿದ್ದೇವೆ. ನಾವು ಆಡುತ್ತಿದ್ದರೆ ಅದು ಆಸಕ್ತಿ ಮತ್ತು ವ್ಯವಹಾರವನ್ನು ಹೆಚ್ಚಿಸುತಿತ್ತು. ನಮ್ಮ ಆಟಗಾರರು ಆಡುತ್ತಿದ್ದರೆ ಕೆಲವು ಪ್ರಸಾರಕರು ಖಂಡಿತವಾಗಿಯೂ ಅದನ್ನು ಇಲ್ಲಿ ತೋರಿಸುತ್ತಾರೆ ಎಂದರು

2008ರಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಟ್ರೋಫಿ ಗೆದ್ದಾಗ ಪಾಕಿಸ್ತಾನದ ಸೋಹೈಲ್ ತನ್ವೀರ್, ಕಮ್ರಾನ್ ಅಕ್ಮಲ್ ಮತ್ತು ಯೂನಿಸ್ ಖಾನ್ ಇದ್ದರು.

ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನದಂತಹ ದೇಶಗಳ ಸ್ಥಿರ ಪ್ರದರ್ಶನ ಏರಿಕೆಯೊಂದಿಗೆ ವಿವರಿಸಿದ ಲತೀಫ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದ ಇತರ ದೇಶಗಳನ್ನು ನೋಡಿ, ಈ ದೇಶಗಳ ಆಟಗಾರರು ಐಪಿಎಲ್‌ಗೆ ಬಂದು ವಿಶ್ವದ ಅತ್ಯುತ್ತಮ ಆಟಗಾರರ ವಿರುದ್ಧ ಆಡಿದ್ದಾರೆ. ಪ್ಯಾಟ್ ಕಮ್ಮಿನ್ಸ್, ಜೋಫ್ರಾ ಆರ್ಚರ್ ಮತ್ತು ಕಗಿಸೊ ರಬಾಡ ಅವರಂತಹ ವಿಶ್ವದ ಅತ್ಯುತ್ತಮ ಬೌಲರ್ ಗಳಿದ್ದು, ಸ್ಪರ್ಧೆಯು ಹೆಚ್ಚಾಗಿರುತ್ತದೆ. ಆದ್ದರಿಂದ ಅತ್ಯುತ್ತಮ ಸೌಕರ್ಯಗಳೊಂದಿಗೆ ಬಹಳಷ್ಟು ಕಲಿಯಬಹುದು ಎಂದರು.

ಐಪಿಎಲ್ ಮೂಲಕವೇ ಅಪ್ಘಾನಸ್ತಾನ ಉದಯೋನ್ಮುಖ ತಂಡವಾಗಿ ಹೊರಹೊಮ್ಮಿದೆ. ರಶೀದ್ ಖಾನ್ ನಂತರ ನೂರ್ ಅಹ್ಮದ್, ಅಜ್ಮತುಲ್ಲಾ ಒಮರ್ಜಾಯ್ ಮತ್ತು ಫಜಲಕ್ ಫಾರೂಕಿ ಇದ್ದಾರೆ. ಅವರು ರಾಷ್ಟ್ರ ಮಟ್ಟದಲ್ಲಿ ತ್ವರಿತ ಪರಿಣಾಮ ಬೀರಿದ್ದಾರೆ" ಎಂದು ಲತೀಫ್ ಹೇಳಿದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗೋವಾ ನೈಟ್ ಕ್ಲಬ್​ನಲ್ಲಿ ಭೀಕರ ಅಗ್ನಿ ದುರಂತ: ಪ್ರವಾಸಿಗರು ಸೇರಿ 23 ಮಂದಿ ಸಜೀವ ದಹನ, ತನಿಖೆಗೆ ಆದೇಶ

ಗೋವಾ ನೈಟ್ ಕ್ಲಬ್​ ಅಗ್ನಿ ದುರಂತ: ಪ್ರಧಾನಿ ಮೋದಿ, ರಾಷ್ಟ್ರಪತಿ ತೀವ್ರ ಸಂತಾಪ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

'ಹಿಂದೂ ಬೆಳವಣಿಗೆ ದರ' ಧರ್ಮ ಕೆಣಕುವ ಒಂದು ಮಾರ್ಗವಾಗಿತ್ತು: ಪ್ರಧಾನಿ ಮೋದಿ

ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ, ನನಗೆ ಇಷ್ಟವಾದ ಶೂ, ವಾಚ್ ಧರಿಸುವೆ: ಡಿ.ಕೆ. ಶಿವಕುಮಾರ್

ದೆಹಲಿಯಲ್ಲಿ 2ನೇ ಮದುವೆಗೆ ಪತಿಯ ಸಿದ್ಧತೆ: ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬೇಡಿದ ಪಾಕ್ ಮಹಿಳೆ!

SCROLL FOR NEXT