ವಿರಾಟ್ ಕೊಹ್ಲಿ online desk
ಕ್ರಿಕೆಟ್

IPL 2025: ಸಹ ಆಟಗಾರರಿಗೆ ಸಂಕಷ್ಟ; RCB ತಂಡದಲ್ಲಿ 32 ರನ್ ಔಟ್ ಗೆ ಕೊಹ್ಲಿಯೇ ಕಾರಣ!

ಕೆಎಲ್ ರಾಹುಲ್ ನ ಪೆವಿಲಿಯನ್ ಗೆ ಕಳುಹಿಸುವ ಅವಕಾಶ ಸಿಕ್ಕಿತ್ತಾದರೂ ಅದನ್ನು ತಪ್ಪಿಸಿಕೊಂಡಿದ್ದು ಆರ್ ಸಿಬಿಗೆ ದುಬಾರಿಯಾಗಿ ಪರಿಣಮಿಸಿತು.

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏ.10 ರಂದು ನಡೆದ DV vs RCB ನಡುವಿನ ಪಂದ್ಯದಲ್ಲಿ ಆರ್ ಸಿಬಿ ತಂಡ ಸೋಲು ಕಂಡಿತು.

ಈ ಸೋಲಿಗೆ ಆರ್ ಸಿಬಿಯ ಬ್ಯಾಟಿಂಗ್ ಹಾಗೂ ಬೌಲಿಂಗ್ ವೈಫಲ್ಯ ಕಾರಣವಾಯಿತು. ಕೆಎಲ್ ರಾಹುಲ್ ನ ಪೆವಿಲಿಯನ್ ಗೆ ಕಳುಹಿಸುವ ಅವಕಾಶ ಸಿಕ್ಕಿತ್ತಾದರೂ ಅದನ್ನು ತಪ್ಪಿಸಿಕೊಂಡಿದ್ದು ಆರ್ ಸಿಬಿಗೆ ದುಬಾರಿಯಾಗಿ ಪರಿಣಮಿಸಿತು.

ಇತ್ತ ವಿರಾಟ್ ಕೊಹ್ಲಿ ಸೋಲಿನ ನಡುವೆಯೂ ಬ್ಯಾಟಿಂಗ್ ವಿಭಾಗದಲ್ಲಿ ತಂಡಕ್ಕೆ ಹೊರೆಯಾಗುವಂತಹ ನಕಾರಾತ್ಮಕ ದಾಖಲೆ ನಿರ್ಮಿಸಿದ್ದಾರೆ. ಉತ್ತಮ ಆರಂಭದ ಹೊರತಾಗಿಯೂ ಕೊಹ್ಲಿ (Virat Kohli) ಮಾಡಿದ ತಪ್ಪು ತಂಡದ ಸೋಲಿಗೆ ಮುಖ ಕಾರಣವಾಗಿದೆ.

ದುಬಾರಿಯಾಯ್ತು ಸಾಲ್ಟ್ ರನೌಟ್

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಉತ್ತಮ ಆರಂಭ ನೀಡಿದ್ದರು. ಈ ಇಬ್ಬರು ಮೊದಲು 3 ಓವರ್​ಗಳಲ್ಲಿ ಬರೋಬ್ಬರಿ 53 ರನ್ ಕಲೆಹಾಕಿದರು. ಇದರ ಆಧಾರದಲ್ಲಿ ಆರ್​ಸಿಬಿ 200 ಕ್ಕಿಂತ ಹೆಚ್ಚು ರನ್ ತಲುಪಬಹುದು ಎಂಬ ನಿರೀಕ್ಷೆ ಇತ್ತು ಆದರೆ 4ನೇ ಓವರ್ ನಲ್ಲಿ

ಕೊಹ್ಲಿ ಆತುರಕ್ಕೆ ಇನ್ನೆಷ್ಟು ಬಲಿ ಸ್ಟ್ರೈಕ್ ನಲ್ಲಿದ್ದ ಸಾಲ್ಟ್ ಕವರ್​ನತ್ತ ಆಡಿದರು ಅಲ್ಲಿ ಫಿಲ್ಡರ್ ಇದ್ದರೂ ಸಹ ನಾನ್ ಸ್ಟ್ರೈಕ್​ನಲ್ಲಿದ್ದ ವಿರಾಟ್ ಕೊಹ್ಲಿ ರನ್​ಗಾಗಿ ಓಡಲು ಆರಂಭಿಸಿದರು. ಹೀಗಾಗಿ ಸಾಲ್ಟ್ ಕೂಡ ನಾನ್ ಸ್ಟ್ರೈಕ್​ ತುದಿಯತ್ತ ಓಡಲಾರಂಭಿಸಿದರು. ಈ ವೇಳೆ ಫಿಲ್ಡರ್ ಅಲ್ಲೇ ಇರುವುದನ್ನು ಗಮನಿಸಿದ ಕೊಹ್ಲಿ ಅರ್ಧಕ್ಕೆ ಓಡಿದ ಬಳಿಕ ರನ್​ಗೆ ನಿರಾಕರಿಸಿದರು. ಹೀಗಾಗಿ ಕೂಡಲೇ ರಾಹುಲ್ ಸ್ಟಂಪ್ ಔಟ್ ಮಾಡಿದರು. ಇದು ತಂಡಕ್ಕೆ ದುಬಾರಿಯಾಯಿತು.

34 ರನೌಟ್​ಗಳಿಗೆ ಕೊಹ್ಲಿ ಕಾರಣ!

ಹೆಚ್ಚಿನ ರನ್ ಗಳಿಸಲು ಹೋಗಿ ಕೊಹ್ಲಿ ತನ್ನ ಸಹ ಆಟಗಾರನನ್ನು ರನೌಟ್ ಮಾಡಿಸಿದ್ದು ಇದೇ ಮೊದಲಲ್ಲ. ಅಥವಾ ಕೊಹ್ಲಿಯೇ ರನೌಟ್ ಆಗಿರುವುದು ಕೂಡ ಇದೇ ಮೊದಲಲ್ಲ. ಇದಕ್ಕೂ ಮೊದಲು ಐಪಿಎಲ್‌ನಲ್ಲಿ ಬರೋಬ್ಬರಿ 32 ಬಾರಿ ಈ ತಪ್ಪನ್ನು ಕೊಹ್ಲಿ ಎಸಗಿದ್ದಾರೆ.

ಐಪಿಎಲ್‌ ಆರಂಭದಿಂದಲೂ ಆರ್‌ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ 32 ರನ್ ಔಟ್‌ಗಳಿಗೆ ಕಾರಣರಾಗಿದ್ದಾರೆ. ಈ ಪೈಕಿ ಅವರು ಸ್ವತಃ 8 ಬಾರಿ ಔಟ್ ಆಗಿದ್ದರೆ, ತಮ್ಮ ಸಹ ಆಟಗಾರನನ್ನು 24 ಬಾರಿ ಔಟ್ ಮಾಡಿಸಿದ್ದಾರೆ. ತಾವಷ್ಟೇ ಅಲ್ಲದೇ ತಮ್ಮ ಸಹ ಆಟಗಾರನನ್ನು ತಮ್ಮ ಆತುರದ ನಿರ್ಧಾರದಿಂದ ಕೊಹ್ಲಿ ಬಲಿಪಶು ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT