ಸಂಜು ಸ್ಯಾಮ್ಸನ್  
ಕ್ರಿಕೆಟ್

IPL 2025: ಸಂಜು ಸ್ಯಾಮ್ಸನ್ ಹೇಳುವಂತೆ RCB ಗೆಲುವಿಗೆ ಇದೇ ಕಾರಣ!

ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ಉತ್ತಮ ಸ್ಕೋರ್ ಮಾಡಿದ್ದರೂ ಪವರ್ ಪ್ಲೇನಲ್ಲಿಯೇ ಪಂದ್ಯ ಕಳೆದುಕೊಂಡೆವು. ಕ್ಯಾಚ್ ಗಳನ್ನು ಕೈ ಚೆಲ್ಲಿದ್ದು, ಎದುರಾಳಿ ತಂಡಕ್ಕೆ ವರದಾನವಾಯಿತು ಎಂದರು.

ಜೈಪುರ: ಭಾನುವಾರ ನಡೆದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ತವರಿನಲ್ಲಿಯೇ ಸೋಲಲು ಕಾರಣ ಏನೆಂಬುದನ್ನು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ಉತ್ತಮ ಸ್ಕೋರ್ ಮಾಡಿದ್ದರೂ ಪವರ್ ಪ್ಲೇನಲ್ಲಿಯೇ ಪಂದ್ಯ ಕಳೆದುಕೊಂಡೆವು. ಕ್ಯಾಚ್ ಗಳನ್ನು ಕೈ ಚೆಲ್ಲಿದ್ದು, ಎದುರಾಳಿ ತಂಡಕ್ಕೆ ವರದಾನವಾಯಿತು ಎಂದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಗೆ ಪವರ್ ಪ್ಲೇನಲ್ಲಿಯೇ ಹೋರಾಟದ ಸೂಚನೆಗಳು ಕಂಡುಬಂದವು. ನಿಧಾನಗತಿಯ ಆರಂಭದ ಹೊರತಾಗಿಯೂ, ಜೈಸ್ವಾಲ್ 75 ಮತ್ತು ರಿಯಾನ್ ಪರಾಗ್ (30) ಮತ್ತು ಧ್ರುವ್ ಜುರೆಲ್ ಅವರ 35 ರನ್ ಗಳ ನೆರವಿನಿಂದ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.

ಅಲ್ಲದೇ ಪರಾಗ್ ನಾಲ್ಕನೇ ಓವರ್ ನಲ್ಲಿ ವಿರಾಟ್ ಕೊಹ್ಲಿ ನೀಡಿದ ಕ್ಯಾಚ್ ನ್ನು ಕೈ ಚೆಲ್ಲಿದ್ದರೆ, ಜೈಸ್ವಾಲ್ ಸಾಲ್ಟ್ ನೀಡಿದ ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು. ಇದು ರಾಜಸ್ಥಾನ ರಾಯಲ್ಸ್ ತಂಡಕ್ಕೆ ದುಬಾರಿಯಾಯಿತು.

'ನಿಜವಾಗಿಯೂ 170 ರನ್ ಉತ್ತಮ ಸ್ಕೋರ್ ಎಂದು ನಾನು ಭಾವಿಸುತ್ತೇನೆ. ಹಗಲಿನ ಪಂದ್ಯಗಳಲ್ಲಿ ಟಾಸ್ ಸೋತ ನಂತರ ಮೊದಲ 10 ಓವರ್ ಗಳಲ್ಲಿ ಸುಡು ಬಿಸಿಲಿನಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡುವುದು ಕಷ್ಟವಾಗುತ್ತದೆ. ಪವರ್ ಪ್ಲೇನಲ್ಲಿಯೇ ಅವರು ಪಂದ್ಯ ಗೆದ್ದಿದ್ದಾರೆ ಅನಿಸುತ್ತದೆ. ಕ್ಯಾಚ್ ಕೈ ಚೆಲ್ಲಿದ್ದು ಕೂಡಾ ಅವರಿಗೆ ನೆರವಾಯಿತು.ಅವರು ಕೂಡಾ ನಮ್ಮವರ ಕ್ಯಾಚ್ ಕೈ ಚೆಲ್ಲಿದರು. ನಾವು ಕೂಡಾ ಅವರ ಕ್ಯಾಚ್ ಕೈ ಬಿಟ್ಟೇವು. ನಾನು ಸುಧಾರಿಸಬೇಕು ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸ್ಯಾಮ್ಸನ್ ಹೇಳಿದರು.

ಎರಡನೇ ಇನ್ಸಿಂಗ್ಸ್ ನಲ್ಲಿ ಬಾಲ್ ಉತ್ತಮವಾಗಿ ಬರುತಿತ್ತು. ಅವರು ಕೂಡಾ ಉತ್ತಮವಾಗಿ ಆಡುತ್ತಿದ್ದರು. ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಉತ್ತಮವಾಗಿ ಬೌಲಿಂಗ್ ಮಾಡಲು ಮಾತನಾಡಿದ್ದೇವೆ. ಮುಂದಿನ ಪಂದ್ಯದಲ್ಲಿ ಸಕಾರಾತ್ಮಕವಾಗಿ ಬರುತ್ತೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!