ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ 
ಕ್ರಿಕೆಟ್

ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಿವೃತ್ತಿ ಪ್ರಶ್ನೆ; 'BCCI ಯಾರನ್ನೂ ಕೇಳಲ್ಲ...'; ಖಾರವಾಗಿ ಪ್ರತಿಕ್ರಿಯಿಸಿದ ರಾಜೀವ್ ಶುಕ್ಲಾ

ರೋ-ಕೊಗೆ ವಿದಾಯ ಪಂದ್ಯವನ್ನು ಏರ್ಪಡಿಸುವಂತೆ ಕೇಳುತ್ತಿರುವವರನ್ನು ಬಿಸಿಸಿಐ ಉಪಾಧ್ಯಕ್ಷರು ಮತ್ತಷ್ಟು ಟೀಕಿಸಿದರು.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭವಿಷ್ಯದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಮೌನ ಮುರಿದಿದ್ದಾರೆ. ಕಳೆದ ಕೆಲವು ವಾರಗಳಿಂದ, ಈ ಜೋಡಿಯ ಮುಂದಿನ ಹಾದಿಯ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಡಿವೆ. ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಅವರಿಬ್ಬರ ಪಾಲಿಗೆ ಕೊನೆಯ ಸರಣಿಯಾಗಿರಬಹುದು ಎಂದು ವರದಿಯಾಗಿದೆ. ರೋಹಿತ್ ಮತ್ತು ವಿರಾಟ್ ಇಬ್ಬರೂ 2024 ರಲ್ಲಿ ವಿಶ್ವಕಪ್ ಗೆದ್ದ ನಂತರ ಟಿ20ಐಗಳಿಂದ ನಿವೃತ್ತರಾದರೆ, 2025ರ ಮೇನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದರು.

UPT20 ನ X ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬಿಸಿಸಿಐ ಉಪಾಧ್ಯಕ್ಷ, 'ರೋಹಿತ್ ಅಥವಾ ವಿರಾಟ್ ಅವರನ್ನು ನಿವೃತ್ತಿ ಹೊಂದುವಂತೆ ಮಂಡಳಿಯು ಕೇಳುವುದಿಲ್ಲ ಮತ್ತು ಇದು ಬಿಸಿಸಿಐನ ಸ್ಪಷ್ಟ ನೀತಿಯಾಗಿದೆ. ಅವರಿನ್ನೂ ODIಗಳಲ್ಲಿ ಸಕ್ರಿಯರಾಗಿರುವುದರಿಂದ ಮತ್ತು ಇನ್ನೂ ನಿವೃತ್ತಿ ಘೋಷಿಸದ ಕಾರಣ ಅವರ ಭವಿಷ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ' ಎಂದು ಅವರು ಹೇಳಿದರು.

'ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಏಕದಿನ ಪಂದ್ಯಗಳನ್ನು ಆಡುತ್ತಿದ್ದಾರೆ. ಅವರು ನಿವೃತ್ತಿ ಹೊಂದಿಲ್ಲ, ಅಲ್ಲವೇ? ಹಾಗಾದರೆ ನೀವು ಅವರ ವಿದಾಯದ ಬಗ್ಗೆ ಏಕೆ ಮಾತನಾಡುತ್ತಿದ್ದೀರಿ ಮತ್ತು ಚಿಂತಿಸುತ್ತಿದ್ದೀರಿ? ಎರಡು ಸ್ವರೂಪಗಳಿಂದ ನಿವೃತ್ತಿಯಾಗಿದ್ದಾರೆ. ಅದು ಕೂಡ ಹಂತಗಳು. ಆದರೆ, ಅವರು ಇನ್ನೂ ಏಕದಿನ ಪಂದ್ಯಗಳನ್ನು ಆಡುತ್ತಿದ್ದಾರೆ. ಅಷ್ಟೊಂದು ಚಿಂತಿಸಬೇಡಿ. ಬಿಸಿಸಿಐ ನೀತಿ ಸಾಕಷ್ಟು ಸ್ಪಷ್ಟವಾಗಿದೆ; ನಾವು ಯಾರನ್ನೂ ನಿವೃತ್ತಿ ಹೊಂದಲು ಕೇಳುವುದಿಲ್ಲ, ಅವರೇ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ನಾವು ಅದನ್ನು ಗೌರವಿಸುತ್ತೇವೆ' ಎಂದು ರಾಜೀವ್ ಶುಕ್ಲಾ ಹೇಳಿದರು.

ರೋ-ಕೊಗೆ ವಿದಾಯ ಪಂದ್ಯವನ್ನು ಏರ್ಪಡಿಸುವಂತೆ ಕೇಳುತ್ತಿರುವವರನ್ನು ಬಿಸಿಸಿಐ ಉಪಾಧ್ಯಕ್ಷರು ಮತ್ತಷ್ಟು ಟೀಕಿಸಿದರು. ಕೊಹ್ಲಿ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ, ರೋಹಿತ್ ಚೆನ್ನಾಗಿ ಆಡುತ್ತಿದ್ದಾರೆ ಮತ್ತು ಈಗ ಅವರ ವಿದಾಯದ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದರು.

'ನಾವು ಅಲ್ಲಿಗೆ ಬಂದಾಗ ಸೇತುವೆ ದಾಟುತ್ತೇವೆ. ಆದರೆ, ನೀವು ಈಗಾಗಲೇ ಅವರ ವಿದಾಯವನ್ನು ಏರ್ಪಡಿಸುತ್ತಿದ್ದೀರಿ! ವಿರಾಟ್ ಕೊಹ್ಲಿ ತುಂಬಾ ಫಿಟ್ ಆಗಿದ್ದಾರೆ ಮತ್ತು ರೋಹಿತ್ ಶರ್ಮಾ ತುಂಬಾ ಚೆನ್ನಾಗಿ ಆಡುತ್ತಾರೆ. ಅವರ ವಿದಾಯ ಬಗ್ಗೆ ನೀವು ಯಾಕೆ ಚಿಂತೆ ಮಾಡುತ್ತಿದ್ದೀರಿ?' ಎಂದು ಶುಕ್ಲಾ ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT