ಶುಭಮನ್ ಗಿಲ್-ಗೌತಮ್ ಗಂಭೀರ್ 
ಕ್ರಿಕೆಟ್

ಗೌತಮ್ ಗಂಭೀರ್‌ಗೆ ಶ್ರೇಯಸ್ ಅಯ್ಯರ್‌ಗಿಂತ ಶುಭಮನ್ ಗಿಲ್ ಕಂಡರೆ ಇಷ್ಟ; ಮನೋಜ್ ತಿವಾರಿ

2024ರಲ್ಲಿ, ಕೆಕೆಆರ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಆಗ ಶ್ರೇಯಸ್ ಅಯ್ಯರ್ ನಾಯಕರಾಗಿದ್ದರು. ಆದರೆ, ಅವರಿಗೆ ಸಿಗಬೇಕಾದ ಕೀರ್ತಿ ಅವರಿಗೆ ಸಿಗಲಿಲ್ಲ.

ಭವಿಷ್ಯದಲ್ಲಿ ಟೀಂ ಇಂಡಿಯಾಗೆ ಎಲ್ಲ ಸ್ವರೂಪದ ನಾಯಕನಾಗಿ ಶುಭಮನ್ ಗಿಲ್ ಏಕೈಕ ಆಯ್ಕೆಯಂತೆ ಕಂಡುಬಂದರೂ, ಮಾಜಿ ಕ್ರಿಕೆಟಿಗರು ಇನ್ನೂ ಕೆಲವರ ಪರ ಬ್ಯಾಟ್ ಬೀಸುತ್ತಿದ್ದಾರೆ. ಅವರಲ್ಲಿ ಒಬ್ಬರು ಭಾರತದ ಮಾಜಿ ನಾಯಕ ಮನೋಜ್ ತಿವಾರಿ, ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ತಂಡವನ್ನು ಶ್ರೇಯಸ್ ಅಯ್ಯರ್ ನಿಜವಾಗಿಯೂ ಉತ್ತಮವಾಗಿ ಮುನ್ನಡೆಸಬಹುದು ಎಂದು ಅವರು ಭಾವಿಸುತ್ತಾರೆ.

ಕ್ರಿಕ್‌ಟ್ರಾಕರ್‌ಗೆ ನೀಡಿದ ಸಂದರ್ಶನದಲ್ಲಿ, 'ರೋಹಿತ್ ಶರ್ಮಾ ನಂತರ, ನಾನು ಶ್ರೇಯಸ್ ಅಯ್ಯರ್ ಎಂದು ಹೇಳುತ್ತೇನೆ. ಏಕೆಂದರೆ, ಅವರು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಸೇರಿ ಎಲ್ಲೆಲ್ಲಿ ತಂಡವನ್ನು ಮುನ್ನಡೆಸಿದ್ದಾರೆಯೋ ಅಲ್ಲಿ ಉತ್ತಮವಾಗಿದ್ದಾರೆ. ನಾನು ಅವರನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನೋಡಿಲ್ಲ. ಆದರೆ, ಅವರು ದೇಶೀಯ ಪಂದ್ಯಗಳಲ್ಲಿಯೂ ಮುಂಬೈಗೆ ಟ್ರೋಫಿಯನ್ನು ಗೆದ್ದುಕೊಟ್ಟಿದ್ದಾರೆ' ಎಂದರು.

'ಆದರೆ ನಾನು ಕಾಮೆಂಟರಿ ಮಾಡುವಾಗ, ನಾಯಕನಾಗಿ ಶ್ರೇಯಸ್ ಅಯ್ಯರ್ ಅವರ ವಿಕಸನವನ್ನು ಗಮನಿಸಿದ್ದೇನೆ ಮತ್ತು ನೀವು ಅವರನ್ನು ಮುಂಭಾಗದಿಂದ ಮುನ್ನಡೆಸುವ ನಾಯಕರಲ್ಲಿ ಒಬ್ಬರೆಂದು ನೋಡಿದಾಗ, ಅವರು ಬಹಳಷ್ಟು ರನ್ ಗಳಿಸುತ್ತಾರೆ ಮತ್ತು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದು ನಾಯಕನಿಗೆ ಅತ್ಯಗತ್ಯ ಮತ್ತು ಅವರು ಅದನ್ನು ಉತ್ತಮ ಯಶಸ್ಸಿನೊಂದಿಗೆ ಮಾಡುತ್ತಾರೆ. ಇದನ್ನು ನಾವು ಕೆಕೆಆರ್ ಅಧಿಕಾರಾವಧಿಯಲ್ಲಿ ನೋಡಿದ್ದೇವೆ' ಎಂದರು.

'2024ರಲ್ಲಿ, ಕೆಕೆಆರ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಆಗ ಶ್ರೇಯಸ್ ಅಯ್ಯರ್ ನಾಯಕರಾಗಿದ್ದರು. ಆದರೆ, ಅವರಿಗೆ ಸಿಗಬೇಕಾದ ಕೀರ್ತಿ ಅವರಿಗೆ ಸಿಗಲಿಲ್ಲ. ಈಗ, ಪಿಆರ್ ಆ ತಂಡದಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಕ್ರೆಡಿಟ್ ಸಿಗುವ ರೀತಿಯಲ್ಲಿ ನೋಡಿಕೊಳ್ಳುತ್ತಿದೆ. ಚಂದ್ರಕಾಂತ್ ಪಂಡಿತ್ ಮತ್ತು ಭರತ್ ಅರುಣ್ ಜೊತೆಗೆ ಶ್ರೇಯಸ್ ಅಯ್ಯರ್ ಅವರಿಗೂ ಕ್ರೆಡಿಟ್ ಸಿಗಬೇಕಿತ್ತು ಎಂದು ನಾನು ಭಾವಿಸಿದೆ. ಅವರು ಸಹಾಯಕ ಸಿಬ್ಬಂದಿಯೂ ಆಗಿದ್ದರು, ಮೈದಾನದಲ್ಲಿ ನಿರ್ಧಾರ ತೆಗೆದುಕೊಳ್ಳುವ ನಾಯಕರಾಗಿದ್ದರು' ಎಂದು ಅವರು ಹೇಳಿದರು.

'ಶ್ರೇಯಸ್ ಅಯ್ಯರ್ ಅಂತಿಮವಾಗಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಅವರು ದೀರ್ಘಕಾಲದವರೆಗೆ ಮುನ್ನಡೆಸುತ್ತಾರೆ. ಆದರೆ ಅದೇ ಸಮಯದಲ್ಲಿ, ಅವರು ಶುಭಮನ್ ಗಿಲ್ ಅವರೊಂದಿಗೆ ರೇಸ್‌ನಲ್ಲಿ ಹೋರಾಟ ಎದುರಿಸಲಿದ್ದಾರೆ. ಏಕೆಂದರೆ, ಸದ್ಯದ ಕೋಚ್ ಗೌತಮ್ ಗಂಭೀರ್ ಅವು ಶ್ರೇಯಸ್ ಅಯ್ಯರ್ ಅವರಿಗಿಂತ ಶುಭಮನ್ ಗಿಲ್ ಅವರನ್ನು ಹೆಚ್ಚು ಇಷ್ಟಪಡುತ್ತಾರೆ. ಆದ್ದರಿಂದ ಹೋರಾಟ ಇರುತ್ತದೆ. ಆದರೆ ಏನಾಗುತ್ತದೆ, ನಮ್ಮೆಲ್ಲರಿಗೂ ಭವಿಷ್ಯ ಏನಾಗುತ್ತದೆ ಎಂದು ನೋಡೋಣ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT