ಗೌತಮ್ ಗಂಭೀರ್ 
ಕ್ರಿಕೆಟ್

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ವೈಟ್‌ವಾಶ್; ಕೋಚ್ ಬದಲಿಸಿ ಎಂದ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ವಿರುದ್ಧ ಗೌತಮ್ ಗಂಭೀರ್ ಕಿಡಿ

ಗುವಾಹಟಿಯಲ್ಲಿನ ಸೋಲಿನ ನಂತರ ಪಾರ್ಥ ಜಿಂದಾಲ್ ಭಾರತದ ಟೆಸ್ಟ್ ಪ್ರದರ್ಶನವನ್ನು ಸಾರ್ವಜನಿಕವಾಗಿ ಟೀಕಿಸಿದ್ದರು ಮತ್ತು ಸ್ಪ್ಲಿಟ್-ಕೋಚಿಂಗ್ ಮಾದರಿಗೆ ಕರೆ ನೀಡಿದ್ದರು.

ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅಷ್ಟೇನು ಉತ್ತಮ ಪ್ರದರ್ಶನ ತಂಡದಿಂದ ಮೂಡಿಬಂದಿಲ್ಲ. ಇತ್ತೀಚೆಗಷ್ಟೇ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ವೈಟ್‌ವಾಶ್ ಅನುಭವಿಸಿದ್ದು, ಗೌತಮ್ ಗಂಭೀರ್ ವಿರುದ್ಧ ಹಲವು ಅಭಿಪ್ರಾಯಗಳು ಕೇಳಿಬಂದಿವೆ. ಭಾನುವಾರ ರಾತ್ರಿ ವಿಶಾಖಪಟ್ಟಣದಲ್ಲಿ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 2-1 ಅಂತರದಿಂದ ಗೆದ್ದ ನಂತರ, ಗಂಭೀರ್ ಪತ್ರಿಕಾ ಕೊಠಡಿಗೆ ನಡೆದು ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರನ್ನು ಟೀಕಿಸಿದರು. ಇತ್ತೀಚೆಗೆ ಅವರು ರೆಡ್ ಬಾಲ್ ಕ್ರಿಕೆಟ್‌ಗೆ ಪ್ರತ್ಯೇಕ ತರಬೇತುದಾರರನ್ನು ಕೋರಿದ್ದರು. ಗಂಭೀರ್ ಅವರು ನಿಮ್ಮ ಹಾದಿಯಲ್ಲಿ ನೀವಿರಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ಕ್ಷೇತ್ರದಲ್ಲಿ ನೀವಿರಿ: ಗಂಭೀರ್ ತಿರುಗೇಟು

ಗುವಾಹಟಿಯಲ್ಲಿನ ಸೋಲಿನ ನಂತರ ಪಾರ್ಥ ಜಿಂದಾಲ್ ಭಾರತದ ಟೆಸ್ಟ್ ಪ್ರದರ್ಶನವನ್ನು ಸಾರ್ವಜನಿಕವಾಗಿ ಟೀಕಿಸಿದ್ದರು ಮತ್ತು ಸ್ಪ್ಲಿಟ್-ಕೋಚಿಂಗ್ ಮಾದರಿಗೆ ಕರೆ ನೀಡಿದ್ದರು. ರೆಡ್ ಬಾಲ್ ತಂಡವು ತಾನು ನೋಡಿದ ಅತ್ಯಂತ ದುರ್ಬಲವಾಗಿ ಕಾಣುತ್ತಿದೆ ಎಂದು ಬರೆದಿದ್ದರು.

ವೈಜಾಗ್‌ನಲ್ಲಿ ನಡೆದ ಏಕದಿನ ಸರಣಿ ಗೆಲುವಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗಂಭೀರ್, 'ದಕ್ಷಿಣ ಆಫ್ರಿಕಾ ವಿರುದ್ಧ ನಾವು ಟೆಸ್ಟ್ ಸರಣಿಯನ್ನು ಸೋತಾಗ ಬಹಳಷ್ಟು ವಿಷಯಗಳನ್ನು ಹೇಳಲಾಯಿತು ಮತ್ತು ಅವುಗಳಲ್ಲಿ ಅರ್ಧದಷ್ಟು ಜನರು ಕ್ರಿಕೆಟ್‌ಗೆ ಸಂಬಂಧಿಸಿದವರಲ್ಲ. ಐಪಿಎಲ್ ಮಾಲೀಕರೊಬ್ಬರು ಸ್ಪ್ಲಿಟ್ ಕೋಚಿಂಗ್ ಬಗ್ಗೆಯೂ ಬರೆದಿದ್ದಾರೆ. ನಾವು ಯಾರ ಡೊಮೇನ್‌ನಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ. ಆದ್ದರಿಂದ ಜನರು ಅವರವರ ಕ್ಷೇತ್ರದಲ್ಲಿ ಉಳಿಯುವುದು ಮುಖ್ಯ' ಎಂದಿದ್ದಾರೆ.

ದೆಹಲಿ ಕ್ಯಾಪಿಟಲ್ಸ್ (DC) ತಂಡದ CEO ಮತ್ತು ಸಹ-ಮಾಲೀಕರಾಗಿರುವ ಪಾರ್ಥ ಜಿಂದಾಲ್, ''ಹತ್ತಿರವೂ ಇಲ್ಲ, ತವರಿನಲ್ಲಿ ಎಂತಹ ಸಂಪೂರ್ಣ ಸೋಲು! ನಮ್ಮ ಟೆಸ್ಟ್ ತಂಡ ತವರಿನಲ್ಲಿ ಇಷ್ಟು ದುರ್ಬಲವಾಗಿರುವುದನ್ನು ನೋಡಿಲ್ಲ!!! ರೆಡ್ ಬಾಲ್ ಸ್ಪೆಷಲಿಸ್ಟ್‌ಗಳನ್ನು ಆಯ್ಕೆ ಮಾಡದಿದ್ದಾಗ ಹೀಗಾಗುತ್ತದೆ. ಈ ತಂಡವು ರೆಡ್ ಬಾಲ್ ಸ್ವರೂಪದಲ್ಲಿ ನಾವು ಹೊಂದಿರುವ ಆಳವಾದ ಶಕ್ತಿಯನ್ನು ಪ್ರತಿಬಿಂಬಿಸುವಷ್ಟು ಹತ್ತಿರವೂ ಇಲ್ಲ. ಟೆಸ್ಟ್ ಕ್ರಿಕೆಟ್‌ಗಾಗಿ ಭಾರತವು ಸ್ಪೆಷಲಿಸ್ಟ್ ರೆಡ್ ಬಾಲ್ ಕೋಚ್‌ಗೆ ಸ್ಥಳಾಂತರಗೊಳ್ಳುವ ಸಮಯ' ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದರು.

ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಕುತ್ತಿಗೆ ನೋವಿನಿಂದಾಗಿ ನಾಯಕ ಶುಭಮನ್ ಗಿಲ್ ಲಭ್ಯವಿಲ್ಲ ಎಂಬ ಅಂಶವನ್ನು ಅವರು ನಿರ್ಲಕ್ಷಿಸಿದ್ದನ್ನು ಗಂಭೀರ್ ಟೀಕಿಸಿದರು. 'ನಾವು ಮೊದಲ ಟೆಸ್ಟ್ ಅನ್ನು 30 ರನ್‌ಗಳಿಂದ ಸೋತಾಗ, ಪಿಚ್‌ಗಳು ಮತ್ತು ಪರಿಸ್ಥಿತಿಗಳ ಬಗ್ಗೆ ಬಹಳಷ್ಟು ಹೇಳಲಾಯಿತು. ಆದರೆ, ತಂಡದ ನಾಯಕ ಎರಡು ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡದ ಬಗ್ಗೆ ಒಂದೇ ಒಂದು ಮಾತನ್ನೂ ಯಾರೂ ಮಾತನಾಡಲಿಲ್ಲ. ಅವರು ಈ ವರ್ಷ ಸುಮಾರು 1000 ರನ್‌ಗಳನ್ನು ಗಳಿಸಿದ್ದಾರೆ. ಗುಣಮಟ್ಟದ ಎದುರಾಳಿ ತಂಡದ ವಿರುದ್ಧ ಅವರನ್ನು ಮಧ್ಯದಲ್ಲಿ ಕಳೆದುಕೊಂಡಿರುವುದು ಮುಖ್ಯವಾಗಿದೆ' ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

40 ಕೋಟಿ ಯುವಕರು ದೇಶದ ನಿಜವಾದ ಶಕ್ತಿ, ಆದರೆ ನಿರುದ್ಯೋಗ ತಾಂಡವವಾಡುತ್ತಿದೆ: ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ

UPI ಪಾವತಿಗಳಿಗೆ ಶುಲ್ಕ ವಿಧಿಸಲ್ಲ: ಯಾರಿಗೆ MDR ವಿಧಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ ಕೇಂದ್ರ ಸರ್ಕಾರ!

ಟೆಸ್ಟ್ ಪಂದ್ಯದ ಕೊನೆಯ ಓವರ್​ನಲ್ಲಿ 6, 6, 0, 6, 6 ಸಿಡಿಸಿದ ಗುರ್ನೂರ್ ಬ್ರಾರ್; ಗಂಭೀರ್ ಚಲ್ಲಾಳೆ, Video!

ಅಸಮಾಧಾನಿತ ಕಾಂಗ್ರೆಸ್ ಶಾಸಕರಿಗೆ ಕುಮಾರಸ್ವಾಮಿ ಆಫರ್; ಹೊಸ ದಾಳ ಉರುಳಿಸಿದ 'ದಳಪತಿ'

Toxic: ಕೊನೆಗೂ ಬಿಡುಗಡೆ ಆಯ್ತು ‘ಟಾಕ್ಸಿಕ್’ ಟ್ರೈಲರ್; ಡಾರ್ಕ್‌ ಗ್ಯಾಂಗ್‌ಸ್ಟರ್‌ ಲೋಕಕ್ಕೆ ರಾಕಿಂಗ್‌ ಸ್ಟಾರ್ ಎಂಟ್ರಿ, ಫ್ಯಾನ್ಸ್‌ ಫಿದಾ!