ಸುನೀಲ್ ಗವಾಸ್ಕರ್ online desk
ಕ್ರಿಕೆಟ್

ಭಾರತದ ಟಿ20 ವಿಶ್ವಕಪ್ ತಂಡದ ಘೋಷಣೆ: ಅಕ್ಷರ್ ಪಟೇಲ್ ಆಯ್ಕೆ ಬಗ್ಗೆ ಗವಾಸ್ಕರ್ ಹೇಳಿದ್ದೇನು?

ಆಲ್ ರೌಂಡರ್ ಗಳಿಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ "ಅಕ್ಷರ್ ಪಟೇಲ್ ಅವರನ್ನ್ನು ಉಪನಾಯಕನನ್ನಾಗಿ ಮಾಡಲಾಗಿದೆ.

ಮುಂಬೈ: ಟಿ20 ವಿಶ್ವಕಪ್ ತಂಡದ ಘೋಷಣೆಯಾಗಿದ್ದು, ಈ ಬೆಳವಣಿಗೆ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಮುಖವಾಗಿ ಅಕ್ಷರ್ ಪಟೇಲ್ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದು, ಆಲ್ ರೌಂಡರ್ ಗಳಿಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ "ಅಕ್ಷರ್ ಪಟೇಲ್ ಅವರನ್ನ್ನು ಉಪನಾಯಕನನ್ನಾಗಿ ಮಾಡಲಾಗಿದೆ. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಎಕ್ಸ್-ಫ್ಯಾಕ್ಟರ್ ಆಗಿದ್ದಾರೆ. ಅವರ ಬ್ಯಾಟಿಂಗ್ ನಿಜವಾಗಿಯೂ ಆ ಮಟ್ಟದಲ್ಲಿದೆ. ಅವರು ಎಲ್ಲೆಡೆ ಚೆಂಡನ್ನು ಅಪ್ಪಳಿಸಬಹುದು. ಅವರು ಬೌಲಿಂಗ್ ಮಾಡುತ್ತಾರೆ, ತಮ್ಮ ವೇಗವನ್ನು ಬದಲಾಯಿಸುತ್ತಾರೆ, ಕ್ರೀಸ್‌ನಾದ್ಯಂತ ಬೌಲಿಂಗ್ ಮಾಡುತ್ತಾರೆ.

ವೇಗದ ವ್ಯತ್ಯಾಸವನ್ನು ತರುತ್ತಾರೆ, ಹಿಡಿತ ಮತ್ತು ತಿರುವು ಪಡೆಯುತ್ತಾರೆ. ಅವರು ಅತ್ಯುತ್ತಮ ಫೀಲ್ಡರ್ ಕೂಡ. ಅವರು ಎಕ್ಸ್-ಫ್ಯಾಕ್ಟರ್ ಆಗಿರುತ್ತಾರೆ ಎಂದು ಹೇಳಿದ್ದಾರೆ. ಅವರನ್ನು 5 ಅಥವಾ 6 ರಲ್ಲಿ ಬಳಸಬಹುದು ಮತ್ತು ಮೊದಲ 6 ಓವರ್‌ಗಳಲ್ಲಿ ಬೌಲಿಂಗ್ ಮಾಡಬಹುದು, ಅವರು ಅದನ್ನು ಮಾಡಲು ಸಮರ್ಥರಾಗಿದ್ದಾರೆ. ಅವರು ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ಸಮರ್ಥರಾಗಿದ್ದಾರೆ" ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಳನುಸುಳುವವರನ್ನು ಹೊರಗಿಡಲು SIR; ಆದ್ರೆ ದಶಕಗಳಿಂದ ಕಾಂಗ್ರೆಸ್ ಅವರನ್ನು ರಕ್ಷಿಸಿತ್ತು: ಪ್ರಧಾನಿ ಮೋದಿ

ಬುರುಡೆ ಗ್ಯಾಂಗ್ ವಿರುದ್ಧ ತಿರುಗಿಬಿದ್ದ ಚಿನ್ನಯ್ಯ: ಜೀವ ಬೆದರಿಕೆ ಆರೋಪ ಮಾಡಿ ಐವರ ವಿರುದ್ಧ ಪೊಲೀಸರಿಗೆ ದೂರು!

'ಜಗತ್ತಿನಲ್ಲಿ ಅಧಿಕಾರದ ಅರ್ಥ ಈಗ ಬದಲಾಗಿದೆ...' ಅಮೆರಿಕ-ಚೀನಾ ಜೊತೆ ಸಂಬಂಧ ವೃದ್ಧಿ ಮತ್ತಷ್ಟು ಜಟಿಲವಾಗುತ್ತಿದೆ: ಜೈಶಂಕರ್

'ಅಪ್ಪುಗೆಯಿಂದ ಆಕ್ರೋಶ'ಗೊಂಡ ಮೆಸ್ಸಿ ಕೋಲ್ಕತ್ತಾ ಕ್ರೀಡಾಂಗಣ ತೊರೆದರು: SITಗೆ ಮುಖ್ಯ ಸಂಘಟಕರು

'ಅಸಮರ್ಥರನ್ನು ಅಸಮರ್ಥ ಎನ್ನದೇ ಜಗದೇಕ ವೀರ ಎನ್ನಬೇಕೆ? ಮತ್ತೆ ಅಮಿತ್ ಶಾ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ!

SCROLL FOR NEXT