ರಶೀದ್ ಲತೀಫ್ 
ಕ್ರಿಕೆಟ್

CT2025: ಅನುಭವವಿಲ್ಲದ 'ಪ್ಯಾದೆ' ಅಧ್ಯಕ್ಷರಾದರೆ ತಂಡದ ಗತಿ ಇಷ್ಟೇ; PCB ವಿರುದ್ಧ ಲತೀಫ್ ಕಿಡಿ

ಪಾಕಿಸ್ತಾನ ಕ್ರಿಕೆಟ್ ಪತನ ರಾತ್ರೋರಾತ್ರಿ ಸಂಭವಿಸಿಲ್ಲ ಎಂದು ಅವರು ಹೇಳಿದರು. ಬದಲಾಗಿ, ರಾಜಕೀಯ ಜನರಿಂದಾಗಿ ಬಹಳ ಹಿಂದೆಯೇ ಪಾಕ್ ಕ್ರಿಕೆಟ್ ಅವನತಿಯತ್ತ ಸಾಗಿತ್ತು ಎಂದು ಹೇಳಿದರು.

ಚಾಂಪಿಯನ್ಸ್ ಟ್ರೋಫಿ 2025ರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಭಾರತಕ್ಕೆ ಪಾಕಿಸ್ತಾನ 242 ರನ್‌ಗಳ ಗುರಿ ನೀಡಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದುಕೊಂಡಿತು.

ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಉತ್ತಮ ಪ್ರದರ್ಶನ ನೀಡಿದರು. 111 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದರು. ಈ ಸಮಯದಲ್ಲಿ ಅವರು 7 ಬೌಂಡರಿಗಳನ್ನು ಬಾರಿಸಿದರು. ಏಕದಿನ ಕ್ರಿಕೆಟ್‌ನಲ್ಲಿ 15 ತಿಂಗಳ ನಂತರ ಕೊಹ್ಲಿ ಈ ಶತಕ ಗಳಿಸಿದ್ದಾರೆ. ಪಂದ್ಯದ ಹೀನಾಯ ಸೋಲಿನ ನಂತರ, ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ತಮ್ಮ ತಂಡ ಮತ್ತು ಕ್ರಿಕೆಟ್ ಮಂಡಳಿಯನ್ನು ತೀವ್ರವಾಗಿ ಟೀಕಿಸಿದರು. ಮಾಜಿ ಅನುಭವಿ ರಶೀದ್ ಲತೀಫ್ ಕೂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು (ಪಿಸಿಬಿ) ತೀವ್ರವಾಗಿ ಟೀಕಿಸಿದರು. ಪಾಕಿಸ್ತಾನ ಕ್ರಿಕೆಟ್ ಪತನ ರಾತ್ರೋರಾತ್ರಿ ಸಂಭವಿಸಿಲ್ಲ ಎಂದು ಅವರು ಹೇಳಿದರು. ಬದಲಾಗಿ, ರಾಜಕೀಯ ಜನರಿಂದಾಗಿ ಬಹಳ ಹಿಂದೆಯೇ ಪಾಕ್ ಕ್ರಿಕೆಟ್ ಅವನತಿಯತ್ತ ಸಾಗಿತ್ತು ಎಂದು ಹೇಳಿದರು.

ಪಾಕಿಸ್ತಾನ ಕ್ರಿಕೆಟ್ ರಾತ್ರೋರಾತ್ರಿ ಕುಸಿತದ ಅಂಚಿಗೆ ತಲುಪಲಿಲ್ಲ ಎಂದು ರಶೀದ್ ಲತೀಫ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಇದರಲ್ಲಿ ಸರ್ಕಾರ ಮತ್ತು ಮಾಜಿ ನಿವೃತ್ತ ಸೈನಿಕರು ಪ್ರಮುಖ ಪಾತ್ರ ವಹಿಸಿದ್ದಾರೆ. ನಜಮ್ ಸೇಥಿ ಆಗಿರಲಿ ಅಥವಾ ಎಹ್ಸಾನ್ ಮಣಿ ಆಗಿರಲಿ, ಝಕಾ ಅಶ್ರಫ್ ಆಗಿರಲಿ ಅಥವಾ ಮೊಹ್ಸಿನ್ ನಖ್ವಿ ಆಗಿರಲಿ, ಎಲ್ಲರೂ ತಮ್ಮ ರಾಜಕೀಯ ಪ್ರಭಾವವನ್ನು ಬಳಸುತ್ತಿದ್ದಾರೆ. ಎಲ್ಲಾ ಅಧ್ಯಕ್ಷರು ಬಂದ ತಕ್ಷಣ, ಅವರು ತಮ್ಮ ಆಲೋಚನೆಯಂತೆ ಅನುಭವಿಗಳನ್ನು ತಮ್ಮೊಂದಿಗೆ ಇಟ್ಟುಕೊಂಡು ಕ್ರಿಕೆಟ್ ಅನ್ನು ಅವರಿಗೆ ಹಸ್ತಾಂತರಿಸಿದರು ಎಂದು ಅವರು ಹೇಳಿದರು. ಇಲ್ಲಿಂದ ನಮ್ಮ ಕ್ರಿಕೆಟ್‌ನ ಅವನತಿ ಆರಂಭವಾಯಿತು. ಫ್ರಾಂಚೈಸಿ ಕ್ರಿಕೆಟ್ ಎಲ್ಲವನ್ನೂ ಮಾಡಿದೆ. ಈ ಪಿಎಸ್ಎಲ್ (ಪಾಕಿಸ್ತಾನ ಸೂಪರ್ ಲೀಗ್) ನಡೆಸುತ್ತಿರುವವರು ವೃತ್ತಿಪರರಲ್ಲ ಮತ್ತು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು 10 ವರ್ಷಗಳಿಂದ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

ತನ್ನ ಖ್ಯಾತಿಯನ್ನು ಉಳಿಸಿಕೊಳ್ಳಲು, ಪಾಕಿಸ್ತಾನ ಮಂಡಳಿಯು ತನ್ನದೇ ಆದ ಆಟಗಾರರನ್ನು ಇತರ ಚಾನೆಲ್‌ಗಳಲ್ಲಿ ಇರಿಸಿದೆ ಮತ್ತು ಟಿವಿಯಲ್ಲಿ ಕುಳಿತು ಮಾತನಾಡುವ ಜನರನ್ನು ನಾವು ಮಂಡಳಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಅಧ್ಯಕ್ಷರು ಹೇಳಿದ್ದ ಸಮಯವಿತ್ತು. ಆದರೆ ಅವರು ಟಿವಿಯಲ್ಲಿ ತಮ್ಮದೇ ಆದ ದಂತಕಥೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ನಜಮ್ ಸೇಥಿ ಬಂದು ಶಾದಾಬ್ ಅವರನ್ನು ನಾಯಕನನ್ನಾಗಿ ಮಾಡಿದರು. ನಂತರ ಜಕಾ ಅಶ್ರಫ್ ಬಂದು ಕೆಲವು ಮಾಜಿ ನಾಯಕರು ಮತ್ತು ಆಟಗಾರರ ಸಲಹೆಯ ಮೇರೆಗೆ ಶಾಹೀನ್ ಅಫ್ರಿದಿ ಅವರನ್ನು ನಾಯಕನನ್ನಾಗಿ ಮಾಡಿದರು. ಇಲ್ಲಿಗೆ ಇನ್ನು ಕಥೆ ಮುಗಿಯುವುದಿಲ್ಲ.

ನಂತರ ಮೊಹ್ಸಿನ್ ನಖ್ವಿ ಬಂದರು. ಕೆಲವು ಮಾಜಿ ನಾಯಕರು ಮತ್ತು ಆಟಗಾರರ ಸಲಹೆಯ ಮೇರೆಗೆ, ಬಾಬರ್ ಅಜಮ್ ಅವರನ್ನು ಮತ್ತೆ ನಾಯಕರನ್ನಾಗಿ ಮಾಡಲಾಯಿತು. ಬಾಬರ್ ರಾಜೀನಾಮೆ ನೀಡಿದಾಗ, ರಿಜ್ವಾನ್ ಅವರನ್ನು ನಾಯಕರನ್ನಾಗಿ ಮಾಡಲಾಯಿತು. ಯಾವುದೇ ಅಧ್ಯಕ್ಷರು ಬಂದರೂ, ಅವರು ಅರ್ಹತೆಯ ಆಧಾರದ ಮೇಲೆ ಅಲ್ಲ, ರಾಜಕೀಯ ಆಧಾರದ ಮೇಲೆ ಬಂದರು. ಅನುಭವವಿಲ್ಲದ ಪ್ಯಾದೆ ಅಧ್ಯಕ್ಷನಾದರೇ ಅನುಭವವಿಲ್ಲದವನಿಗೂ ಉತ್ತಮ ಸ್ಥಾನಗಳನ್ನು ನೀಡುತ್ತಾನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT