ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ 
ಕ್ರಿಕೆಟ್

ICC Champions Trophy 2025: ಆಫ್ಘಾನಿಸ್ತಾನಕ್ಕೆ 'ವರುಣಾಘಾತ'; ಸೆಮೀಸ್ ಗೆ ಆಸ್ಟ್ರೇಲಿಯಾ ಲಗ್ಗೆ!

ಮಳೆ ಬಂದು ನಿಂತು ಸಾಕಷ್ಟು ಸಮಯ ಕಾದರೂ ಮೈದಾನದಲ್ಲಿದ್ದ ತೇವಾಂಶವನ್ನು ಒಣಗಿಸುವಲ್ಲಿ ಗಡಾಫಿ ಕ್ರೀಡಾಂಗಣದ ಸಿಬ್ಬಂದಿ ವಿಫಲವಾದರು.

ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮೀಸ್ ಹಂತಕ್ಕೇರುವ ಆಫ್ಘಾನಿಸ್ತಾನ ಕನಸಿಗೆ ಮಳೆ ಆಘಾತ ನೀಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಇಂದಿನ Do or Die ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ಹೌದು.. ಶುಕ್ರವಾರ ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಟೇಬಲ್ ಟಾಪರ್ ಆಗಿರುವ ಆಸ್ಟ್ರೇಲಿಯಾ ಅರ್ಹವಾಗಿಯೇ ಸೆಮೀಸ್ ಗೆ ಅರ್ಹತೆ ಪಡೆದಿದೆ. ಇಂದು ನಡೆದ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ತಂಡ ನಿಗಧಿತ 50 ಓವರ್ ನಲ್ಲಿ 273 ರನ್ ಪೇರಿಸಿ ಆಲೌಟ್ ಆಯಿತು.

273 ರನ್ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ಸಂಭಾವ್ಯ ಮಳೆಯ ಅಪಾಯವನ್ನು ಅರಿತೇ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕೇವಲ 12.5 ಓವರ್ ಗೆ ಆಸ್ಟ್ರೇಲಿಯಾ 1 ವಿಕೆಟ್ ನಷ್ಟಕ್ಕೆ 109 ಪೇರಿಸಿತು. ಆಸಿಸ್ ಪರ ಮ್ಯಾಥ್ಯೂ ಶಾರ್ಟ್ 20 ರನ್ ಗಳಿಸಿ ಔಟಾದರೆ, ಟ್ರಾವಿಸ್ ಹೆಡ್ ಅಜೇಯ 59ರನ್ ಮತ್ತು ನಾಯಕ ಸ್ಮಿತ್ ಅಜೇಯ 19 ರನ್ ಗಳಿಸಿದ್ದರು. ಈ ಹಂತದಲ್ಲಿ ಮಳೆ ಬಂದು ಆಟಕ್ಕೆ ಅಡ್ಡಿಯಾಯಿತು.

ಮೈದಾನ ಒಣಗಿಸುವಲ್ಲಿ ಸಿಬ್ಬಂದಿ ವಿಫಲ

ಮಳೆ ಬಂದು ನಿಂತು ಸಾಕಷ್ಟು ಸಮಯ ಕಾದರೂ ಮೈದಾನದಲ್ಲಿದ್ದ ತೇವಾಂಶವನ್ನು ಒಣಗಿಸುವಲ್ಲಿ ಗಡಾಫಿ ಕ್ರೀಡಾಂಗಣದ ಸಿಬ್ಬಂದಿ ವಿಫಲವಾದರು. ಸತತ ಪ್ರಯತ್ನಗಳ ಹೊರತಾಗಿಯೂ ಭಾರಿ ಮಳೆ ಸುರಿದಿದ್ದರಿಂದ ಮೈದಾನದಲ್ಲಿ ಯಥೇಚ್ಛ ನೀರು ನಿಂತಿತ್ತು. ಹೀಗಾಗಿ ನಿಗಧಿತ ಸಮಯದೊಳಗೆ ಮೈದಾನದಿಂದ ನೀರು ಹೊರ ಚೆಲ್ಲುವಲ್ಲಿ ಸಿಬ್ಬಂದಿ ವಿಫಲರಾದರು. ಅಂತಿಮವಾಗಿ ಅಂಪೈರ್ ಗಳು ಪಂದ್ಯವನ್ನು ರದ್ದು ಮಾಡಿದರು.

ಅಂಕ ಹಂಚಿಕೆ

ಪಂದ್ಯ ರದ್ದಾಗಿದ್ದರಿಂದ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಲಾಗಿದ್ದು, ಆ ಮೂಲಕ 3 ಪಂದ್ಯಗಳನ್ನಾಡಿ ಒಂದರಲ್ಲಿ ಜಯ ಗಳಿಸಿ 4 ಅಂಕಗಳಿಸಿರುವ ಆಸ್ಚ್ರೇಲಿಯಾ ಟೇಬಲ್ ಟಾಪರ್ ಆಗಿ ಸೆಮೀಸ್ ಗೆ ಅರ್ಹತೆ ಗಿಟ್ಟಿಸಿದೆ. ಬಿ ಗುಂಪಿನಿಂದ ಸೆಮೀಸ್ ಅರ್ಹತೆ ಗಿಟ್ಟಿಸಲು ಇದೀಗ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ತೀವ್ರ ಪೈಪೋಟಿ ಇದ್ದು, ಅಫ್ಘಾನಿಸ್ತಾನಕ್ಕಿಂತ ದಕ್ಷಿಣ ಆಫ್ರಿಕಾಗೆ ಸೆಮೀಸ್ ಗೇರುವ ಅವಕಾಶ ಅಧಿಕವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?