ಶುಭ್ಮನ್ ಗಿಲ್ 
ಕ್ರಿಕೆಟ್

450 ಕೋಟಿ ರೂ ಚಿಟ್ ಫಂಡ್ ಹಗರಣ: ಭಾರತೀಯ ಕ್ರಿಕೆಟಿಗ ಶುಬ್ಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್!

ಗುಜರಾತ್ ಟೈಟಾನ್ಸ್ ಆಟಗಾರರು ಪೊಂಜಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಈ ಕುರಿತು ಸಿಐಡಿ ಈಗ ಅವರನ್ನು ವಿಚಾರಣೆ ನಡೆಸಲಿದೆ.

ಅಹಮದಾಬಾದ್: ಗುಜರಾತ್ ಸಿಐಡಿ ಕ್ರೈಂ ವಿಭಾಗ 450 ಕೋಟಿ ರೂಪಾಯಿಗಳ ಚಿಟ್ ಫಂಡ್ ಹಗರಣವನ್ನು ಬಹಿರಂಗಪಡಿಸಿದೆ. ಶುಬ್ಮನ್ ಗಿಲ್ ಮತ್ತು ಗುಜರಾತ್ ಟೈಟಾನ್ಸ್‌ನ ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಮೋಹಿತ್ ಶರ್ಮಾ ಸೇರಿದಂತೆ ಅನೇಕ ಆಟಗಾರರು ಕೂಡ ಹಗರಣದಲ್ಲಿ ಭಾಗಿಯಾಗಿದ್ದಾರೆ. 450 ಕೋಟಿಯ ಈ ಹಗರಣವು ಗುಜರಾತ್ ಮೂಲದ ಕಂಪನಿ BZ ಗ್ರೂಪ್‌ಗೆ ಸಂಬಂಧಿಸಿದೆ. ಈ ಪ್ರಕರಣದಲ್ಲಿ ಗುಜರಾತ್ ಅಪರಾಧ ತನಿಖಾ ಇಲಾಖೆ ಅಂದರೆ ಸಿಐಡಿಯಿಂದ ಎಲ್ಲಾ ಕ್ರಿಕೆಟಿಗರಿಗೆ ಸಮನ್ಸ್ ಕಳುಹಿಸಿದೆ.

BZ ಗ್ರೂಪ್ ಹೂಡಿಕೆದಾರರಿಗೆ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿದರಗಳನ್ನು ಭರವಸೆ ನೀಡಿತ್ತು. ಆದರೆ, ಇದು ಸಾಧ್ಯವಾಗದಿದ್ದಾಗ ಹೂಡಿಕೆದಾರರು ಪೊಲೀಸರಿಗೆ ದೂರು ನೀಡಿದ್ದಾರೆ. ಗುಜರಾತ್ ಟೈಟಾನ್ಸ್ ಆಟಗಾರರು ಪೊಂಜಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಈ ಕುರಿತು ಸಿಐಡಿ ಈಗ ಅವರನ್ನು ವಿಚಾರಣೆ ನಡೆಸಲಿದೆ. ವರದಿಯ ಪ್ರಕಾರ, ಗಿಲ್ 1.95 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರೆ, ಇತರ ಆಟಗಾರರು ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಗಿಲ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿರುವುದರಿಂದ, ಆತ ಹಿಂದಿರುಗಿದ ನಂತರ ಸಿಐಡಿ ಆತನನ್ನು ಪ್ರಶ್ನಿಸಬಹುದು.

ವರದಿಗಳ ಪ್ರಕಾರ, ಗುಜರಾತ್ ಸಿಐಡಿ ಈ ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಿದೆ. ಕಳೆದ ತಿಂಗಳು, ಅವರು BZ ಗ್ರೂಪ್ ಹಗರಣಕ್ಕೆ ಸಂಬಂಧಿಸಿದ ಭೂಪೇಂದರ್ ಸಿಂಗ್ ಝಾಲಾ ಅವರನ್ನು ಮೆಹ್ಸಾನಾ ಜಿಲ್ಲೆಯಿಂದ ಬಂಧಿಸಿದ್ದರು.

ಈ ಹಗರಣಕ್ಕೆ ಶುಭಮನ್ ಗಿಲ್ ಮತ್ತು ಇತರ ಮೂವರು ಕ್ರಿಕೆಟಿಗರ ಲಿಂಕ್ ಭೂಪೇಂದರ್ ಸಿಂಗ್ ಝಾಲಾನ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸಿಐಡಿ ಈ ಸಂಪೂರ್ಣ ಹಗರಣದ ಮಾಸ್ಟರ್ ಮೈಂಡ್ ಜಾಲ ಎಂದು ಬಣ್ಣಿಸಿದೆ. 450 ಕೋಟಿ ರೂ.ಗಳ ಈ ಹಗರಣದ ಸಂಪೂರ್ಣ ರೂಪುರೇಷೆಗಳನ್ನು ‘ಕಿಂಗ್‌ಪಿನ್’ ಆಗಿ ಜಾಲ ಸಿದ್ಧಪಡಿಸಿದ್ದರು. ಗುಜರಾತ್‌ನ ತಾಲೋದ್, ಹಿಮ್ಮತ್‌ನಗರ ಮತ್ತು ವಡೋದರಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಚೇರಿ ತೆರೆದು ಹೂಡಿಕೆದಾರರಿಂದ ಹಣ ಸಂಗ್ರಹಿಸಲು ಏಜೆಂಟ್‌ಗಳನ್ನು ನಿಯೋಜಿಸಿದ್ದರು. JALA ಐಸಿಐಸಿಐ ಮತ್ತು ಐಎಫ್‌ಸಿ ಬ್ಯಾಂಕ್‌ಗಳ ಮೂಲಕ ಸುಮಾರು 6,000 ಕೋಟಿ ರೂಪಾಯಿ ಮೌಲ್ಯದ ಹಣಕಾಸು ವಹಿವಾಟು ನಡೆಸಿ ಒಟ್ಟು 175 ಕೋಟಿ ರೂಪಾಯಿ ಸಂಗ್ರಹಿಸಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT