ಎಬಿ ಡಿವಿಲಿಯರ್ಸ್ 
ಕ್ರಿಕೆಟ್

AB de Villiers ಆರ್‌ಸಿಬಿ ಪ್ರಾಂಚೈಸಿಗಾಗಿ ಆಡಿದ್ದು ತಪ್ಪಾಯ್ತು; ಬೇರೆ ತಂಡಕ್ಕಾಗಿ ಆಡಬೇಕಿತ್ತು!

ಇದೀಗ ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಡಿವಿಲಿಯರ್ಸ್ ವೃತ್ತಿಜೀವನದ ಬಗ್ಗೆ ಹೇಳಿಕೆ ನೀಡಿದ್ದಾರೆ.

ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಯಾವುದೇ ಸ್ವರೂಪದ ಕ್ರಿಕೆಟ್‌ನಲ್ಲಾದರೂ ಎದುರಾಳಿ ತಂಡಗಳ ಬೌಲರ್‌ಗಳನ್ನು ಕಾಡುತ್ತಿದ್ದವರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕವೂ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಡಿವಿಲಿಯರ್ಸ್ ಆಡಿದ್ದರು. ಆದರೆ, ಐಪಿಎಲ್ ಟ್ರೋಫಿಯನ್ನು ಗೆಲ್ಲದೆಯೇ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತರಾದರು. ಡಿವಿಲಿಯರ್ಸ್ ಅವರ ಆಟದ ಶೈಲಿಯನ್ನು ಈಗ ಟೀಂ ಇಂಡಿಯಾದ T20I ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಹೋಲಿಸಲಾಗುತ್ತದೆ.

ಇದೀಗ ಭಾರತದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಡಿವಿಲಿಯರ್ಸ್ ವೃತ್ತಿಜೀವನದ ಬಗ್ಗೆ ಹೇಳಿಕೆ ನೀಡಿದ್ದಾರೆ. T20 ಕ್ರಿಕೆಟ್‌ನಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಈಗಾಗಲೇ ಎಬಿ ಡಿವಿಲಿಯರ್ಸ್ ಅವರನ್ನು ಮೀರಿಸಿದ್ದಾರೆ. ಐಪಿಎಲ್‌ನಲ್ಲಿ ಡಿವಿಲಿಯರ್ಸ್ ಅವರ ವೃತ್ತಿಜೀವನಕ್ಕೆ ಸಂಪೂರ್ಣತೆ ಸಿಕ್ಕಲಿಲ್ಲ. ಏಕೆಂದರೆ, ಅವರು ತಪ್ಪಾದ ಫ್ರಾಂಚೈಸಿ ಪರ ಆಡಿದರು. ಬದಲಿಗೆ ಬೇರೊಂದು ಪ್ರಾಂಚೈಸಿಗೆ ಆಡಬೇಕಿತ್ತು ಎಂದು ಮಂಜ್ರೇಕರ್ ಹೇಳಿದ್ದಾರೆ.

'ಯಾವುದೇ ಪಂದ್ಯವನ್ನು ಗೆಲ್ಲಿಸಿಕೊಡುವಲ್ಲಿ ಎಬಿ ಡಿವಿಲಿಯರ್ಸ್ ಅತ್ಯಂತ ಪ್ರಭಾವಶಾಲಿ ಹೌದು ಎಂದು ಹೇಳುತ್ತೇನೆ. ಎಬಿ ಡಿವಿಲಿಯರ್ಸ್ ಅಸಾಧಾರಣ ಪ್ರತಿಭೆ. ಡಿವಿಲಿಯರ್ಸ್ ಅವರು ಟೆಸ್ಟ್‌ನಲ್ಲಿ 50 ಸರಾಸರಿ ಗಳಿಸಿದ್ದರು. ಏಕದಿನ ಮಾದರಿಯಲ್ಲೂ 50 ಸರಾಸರಿಯನ್ನು ಹೊಂದಿದ್ದಾರೆ. ಹೀಗಾಗಿಯೇ ಅವರೊಬ್ಬ ಅದ್ಭುತ ಆಟಗಾರ. ಆದರೆ, ಐಪಿಎಲ್ ನಲ್ಲಿ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಮತ್ತು ಅವರು ತಪ್ಪಾದ ಫ್ರಾಂಚೈಸಿ ಪರವಾಗಿ ಆಡಿದರು. ಅವರು ಬೇರೊಂದು ಪ್ರಾಂಚೈಸಿ ಪರ ಆಡಿದ್ದರೆ ನಾವು ಅವರ ಶ್ರೇಷ್ಠತೆಯನ್ನು ಮತ್ತಷ್ಟು ನೋಡಬಹುದಿತ್ತು' ಎಂದು ಮಂಜ್ರೇಕರ್ ಹೇಳಿದರು.

ಐಪಿಎಲ್ ವೃತ್ತಿಜೀವನದಲ್ಲಿ ಎಬಿ ಡಿವಿಲಿಯರ್ಸ್ ಅವರು ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳಿಗಾಗಿ ಆಡಿದ್ದರು. ಈ ವೇಳೆ ಅವರು ಒಟ್ಟು 5162 ರನ್ ಗಳಿಸಿದರು. ಈ ಪೈಕಿ 4491 ರನ್ ಆರ್‌ಸಿಬಿ ಪರವಾಗಿ ಬಂದಿವೆ. ಆರ್‌ಸಿಬಿ ಪರವಾಗಿ ಅವರು ಎರಡು ಶತಕ ಮತ್ತು 37 ಅರ್ಧಶತಕಗಳನ್ನು ಗಳಿಸಿದ್ದಾರೆ.

ಟಿ20 ಲೀಗ್‌ನಲ್ಲಿ 5,000ಕ್ಕೂ ಹೆಚ್ಚು ರನ್ ಗಳಿಸಿದ ಏಳು ಆಟಗಾರರಲ್ಲಿ ಡಿವಿಲಿಯರ್ಸ್ ಕೂಡ ಒಬ್ಬರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT