ಸಾಯಿ ಸುದರ್ಶನ್ 
ಕ್ರಿಕೆಟ್

England-India Test Series: ಎರಡನೇ ಟೆಸ್ಟ್‌ ಪಂದ್ಯದಿಂದ ಐಪಿಎಲ್ ಸ್ಟಾರ್ ಆಟಗಾರ ಸಾಯಿ ಸುದರ್ಶನ್ ಔಟ್!

ಸುದರ್ಶನ್ ಅವರನ್ನು ನಿಜವಾಗಿಯೂ ಕೈಬಿಟ್ಟರೆ, ಕರುಣ್ ನಾಯರ್ ಅವರನ್ನು ನಂ. 3 ಸ್ಥಾನಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ಕ್ರಿಕೆಟ್ ತಂಡವು ಆಡುವ ಹನ್ನೊಂದರ ಬಳಗದಲ್ಲಿ ಹಲವು ಬದಲಾವಣೆಗಳು ಆಗಲಿವೆ. ಮೊದಲ ಟೆಸ್ಟ್‌ ಪಂದ್ಯದ ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸಾಯಿ ಸುದರ್ಶನ್ ಎರಡನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ವರದಿ ಪ್ರಕಾರ, ತಂಡದ ಆಡಳಿತ ಮಂಡಳಿಯು ಆಲ್‌ರೌಂಡರ್ ಆಯ್ಕೆಗಳನ್ನು ತಂಡಕ್ಕೆ ಕರೆತರುವ ಮತ್ತು ಸರಣಿಯ ಆರಂಭಿಕ ಪಂದ್ಯದಲ್ಲಿ ತನಗೆ ದೊರೆತ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾದ ಸುದರ್ಶನ್ ಅವರನ್ನು ಕೈಬಿಡುವ ಬಗ್ಗೆ ಹೆಚ್ಚು ಉತ್ಸುಕವಾಗಿದೆ ಎನ್ನಲಾಗಿದೆ.

ಆದಾಗ್ಯೂ, ಈ ಸರಣಿಯಲ್ಲಿ ಸಾಯಿ ಸುದರ್ಶನ್ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ಅದು ಅವರ ಚೊಚ್ಚಲ ಪಂದ್ಯವಾಗಿರುವುದರಿಂದ ಅಂತಹ ಬದಲಾವಣೆಯು ಟೀಕೆಗೆ ಗುರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಪ್ರಕಾರ, ಸಾಯಿ ಸುದರ್ಶನ್ ಅವರ ಸ್ಥಾನವನ್ನು ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ವಹಿಸಿಕೊಳ್ಳುವ ಸಾಧ್ಯತೆಯಿದೆ. ಅವರನ್ನು ಪ್ಲೇಯಿಂಗ್ ಇಲೆವೆನ್ ಭಾರವಾಗಿಸಲು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೆಚ್ಚು ಉತ್ಸುಕರಾಗಿದ್ದಾರೆ. ಆದರೆ, ಸುದರ್ಶನ್ ಅವರ ಬಗ್ಗೆ ನಿರ್ಧಾರವನ್ನು ಪ್ರದರ್ಶನದ ದೃಷ್ಟಿಕೋನದ ಬದಲಿಗೆ ತಂಡದಲ್ಲಿ ಸಮತೋಲನ ಸಾಧಿಸಲು ಪರಿಗಣಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.

ಸುದರ್ಶನ್ ಅವರನ್ನು ನಿಜವಾಗಿಯೂ ಕೈಬಿಟ್ಟರೆ, ಕರುಣ್ ನಾಯರ್ ಅವರನ್ನು ನಂ. 3 ಸ್ಥಾನಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ. ನಾಯಕ ಶುಭಮನ್ ಗಿಲ್ ತಂಡದಲ್ಲಿ 4ನೇ ಸ್ಥಾನದಲ್ಲಿ ಮುಂದುವರಿಯುತ್ತಾರೆ.

ಸಾಯಿ ಸುದರ್ಶನ್ ಕೂಡ ಭುಜದ ಗಾಯದಿಂದ ಬಳಲುತ್ತಿದ್ದಾರೆ ಎಂದು ವರದಿಗಳಿದ್ದವು. ಆದರೆ, ಗುಜರಾತ್ ಟೈಟಾನ್ಸ್ ಬ್ಯಾಟ್ಸ್‌ಮನ್ ಎರಡನೇ ಟೆಸ್ಟ್‌ಗೆ ಮುಂಚಿತವಾಗಿ ನೆಟ್ಸ್‌ನಲ್ಲಿ ಅಭ್ಯಾಸದಲ್ಲಿ ಕಾಣಿಸಿಕೊಂಡು ಎಲ್ಲ ವದಂತಿಗಳಿಗೆ ತೆರೆಎಳೆದರು.

ತಂಡದಲ್ಲಿ ಇನ್ನೂ ಎರಡು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದ್ದು, ಶಾರ್ದೂಲ್ ಠಾಕೂರ್ ಬದಲಿಗೆ ನಿತೀಶ್ ರೆಡ್ಡಿ ಮತ್ತು ಜಸ್ಪ್ರೀತ್ ಬುಮ್ರಾ ಬದಲಿಗೆ ಆಕಾಶ್ ದೀಪ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಆದಾಗ್ಯೂ, ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತೆ ಬೆಂಚ್‌ನಲ್ಲಿ ಉಳಿಯುವ ಸಾಧ್ಯತೆಯಿದೆ.

'ವೇಗದ ಬೌಲರ್‌ಗಳು ಸಾಕಷ್ಟು ವಿಕೆಟ್ ಪಡೆಯುವ ಅವಕಾಶಗಳನ್ನು ಸೃಷ್ಟಿಸದಿದ್ದರೆ, ಈ ರೀತಿಯ ವಿಕೆಟ್‌ಗಳಲ್ಲಿ ಎರಡನೇ ಸ್ಪಿನ್ನರ್ ಕನಿಷ್ಠ ಎರಡನೇ ಹೊಸ ಚೆಂಡು ಬರುವವರೆಗೆ ಆಡಬಹುದು ಎಂದು ನಾವು ಭಾವಿಸುತ್ತೇವೆ. ಕಳೆದ ಪಂದ್ಯವನ್ನು ನೋಡಿದರೆ, ಕಳೆದ ಪಂದ್ಯದಂತೆಯೇ ಇಲ್ಲಿಯೂ ಇದೇ ರೀತಿಯ ವಿಕೆಟ್ ಇದ್ದರೆ, ಎರಡನೇ ಸ್ಪಿನ್ನರ್ ಕೆಟ್ಟ ಆಯ್ಕೆಯಾಗಿರುವುದಿಲ್ಲ' ಎಂದು ಭಾರತದ ನಾಯಕ ಶುಭಮನ್ ಗಿಲ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT