ವೈಭವ್ ಸೂರ್ಯವಂಶಿ 
ಕ್ರಿಕೆಟ್

'ನಿಜವಾದ ಶ್ರೇಷ್ಠತೆ ಟೆಸ್ಟ್ ಕ್ರಿಕೆಟ್ ಮೂಲಕ ಬರುತ್ತದೆ': 'Boss Baby' ವೈಭವ್ ಸೂರ್ಯವಂಶಿ ಬಗ್ಗೆ ಯೋಗರಾಜ್ ಸಿಂಗ್

ಕೇವಲ 13ನೇ ವಯಸ್ಸಿನಲ್ಲಿ ಎಲ್ಲರನ್ನೂ ಬೆರಗುಗೊಳಿಸಿದ್ದ ಸದ್ಯ 14 ವರ್ಷದ ವೈಭವ್ ಸೂರ್ಯವಂಶಿ, ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಐಪಿಎಲ್ 2025ರ ಪಂದ್ಯಾವಳಿಯಲ್ಲಿ ಎಲ್ಲರ ಗಮನಸೆಳೆದರು.

ಭಾರತದ ಮಾಜಿ ವೇಗಿ ಮತ್ತು ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್, ವೈಭವ್ ಸೂರ್ಯವಂಶಿ ಅವರಂತಹ ಯುವ ಪ್ರತಿಭೆಗಳನ್ನು ಹೊಗಳಿದರು. ಆದರೆ, ನಿಜವಾದ ಶ್ರೇಷ್ಠತೆ ಟೆಸ್ಟ್ ಕ್ರಿಕೆಟ್ ಮೂಲಕ ಬರುತ್ತದೆ ಎಂದು ತಿಳಿಸಿದ್ದಾರೆ.

ಕೇವಲ 13ನೇ ವಯಸ್ಸಿನಲ್ಲಿ ಎಲ್ಲರನ್ನೂ ಬೆರಗುಗೊಳಿಸಿದ್ದ ಸದ್ಯ 14 ವರ್ಷದ ವೈಭವ್ ಸೂರ್ಯವಂಶಿ, ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಐಪಿಎಲ್ 2025ರ ಪಂದ್ಯಾವಳಿಯಲ್ಲಿ ಎಲ್ಲರ ಗಮನಸೆಳೆದರು. ಬಿಹಾರದಲ್ಲಿ ಜನಿಸಿದ ಈ ಪ್ರತಿಭೆ ಕೇವಲ ಎರಡು ವರ್ಷಗಳಲ್ಲಿ ಅವರು ಭಾರತವನ್ನು ಪ್ರತಿನಿಧಿಸಬಹುದು.

ಇನ್‌ಸೈಡ್‌ಸ್ಪೋರ್ಟ್‌ ಜೊತೆ ಪ್ರತ್ಯೇಕವಾಗಿ ಮಾತನಾಡಿದ ಯೋಗರಾಜ್ ಸಿಂಗ್, ತ್ತಾ, 'ನನ್ನ ದೃಷ್ಟಿ ಟೆಸ್ಟ್ ಕ್ರಿಕೆಟ್. ನೀವು ಐದು ದಿನ ಯಶಸ್ವಿಯಾಗಲು ಸಾಧ್ಯವೇ? ಅದುವೇ ನಿಜವಾದ ಪರೀಕ್ಷೆ. 50 ಓವರ್‌ಗಳು ಅಥವಾ 20 ಓವರ್‌ಗಳು ನ್ಯಾಯತುವಾಗಿದ್ದರೂ, ನಾನು ಈ ಮಾದರಿಗಳನ್ನು ಅನುಸರಿಸುವುದಿಲ್ಲ. ಆದರೆ, ನೀವು ಮೂರು ಸ್ವರೂಪಗಳನ್ನು ಆಡಲು ಸಾಕಷ್ಟು ಫಿಟ್ ಆಗಿರಬೇಕು. ಟೆಸ್ಟ್ ಕ್ರಿಕೆಟ್‌ನಲ್ಲಿ ನೀವು ಕಷ್ಟಪಡುತ್ತಿರುವುದು ಏಕೆಂದರೆ ನೀವು ಟಿ20, ಐಪಿಎಲ್ ಮತ್ತು 50 ಓವರ್‌ಗಳ ಮೇಲೆ ಮಾತ್ರ ಗಮನಹರಿಸುತ್ತಿದ್ದೀರಿ. ಇಂದು, ನಾವು 50 ಓವರ್‌ಗಳನ್ನು ಸಹ ಆಡಲು ಸಾಧ್ಯವಿಲ್ಲ. ನಾವು ಆ ರೀತಿ ಆಗಿದ್ದೇವೆ' ಎಂದರು.

ಐಪಿಎಲ್ ಹೊರತಾಗಿಯೂ ಯುವ ಕ್ರಿಕೆಟಿಗರು ಮೂರು ಮಾದರಿಗಳಲ್ಲಿಯೂ ಪ್ರಾಬಲ್ಯ ಸಾಧಿಸುವ ಮೂಲಕ ತಮ್ಮನ್ನು ತಾವು ಸುಸಜ್ಜಿತ ಕ್ರಿಕೆಟಿಗರನ್ನಾಗಿ ಮಾಡಿಕೊಳ್ಳಲು ಎದುರು ನೋಡಬೇಕು. ವಿರಾಟ್ ಕೊಹ್ಲಿ ಅವರಂತಹ ಆಟಗಾರರು ಐಪಿಎಲ್ ಗೆಲ್ಲುವ ಬಗ್ಗೆ ಅಪಾರ ಉತ್ಸಾಹ ಹೊಂದಿದ್ದರೂ, ಅವರಿನ್ನೂ ಟೆಸ್ಟ್ ಕ್ರಿಕೆಟ್ ಅನ್ನು ಉನ್ನತ ಮತ್ತು ಹೆಚ್ಚು ಅರ್ಥಪೂರ್ಣ ರೂಪವೆಂದು ನೋಡುತ್ತಾರೆ ಎಂದು ಯೋಗರಾಜ್ ಸಿಂಗ್ ತಿಳಿಸಿದರು.

'AC' ರೂಂನಲ್ಲಿ ಕುಳಿತು ಕೆಲಸ ಮಾಡುವ ಮತ್ತು ಕ್ರಿಕೆಟ್‌ನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೆಲವು ತರಬೇತುದಾರರು ಮತ್ತು ಆಡಳಿತ ಮಂಡಳಿಯ ಸದಸ್ಯರನ್ನು ಯೋಗರಾಜ್ ಟೀಕಿಸಿದರು.

'ಎಲ್ಲ ತರಬೇತುದಾರರು ಮತ್ತು ಎಲ್ಲ ಆಯ್ಕೆದಾರರು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕೆಲಸಗಳನ್ನು ಮಾಡಲು ಬಯಸುತ್ತಾರೆ. ಇಲ್ಲಿ, ನಾನು 48 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿದ್ದೇನೆ, ಯುವರಾಜ್ ಸಿಂಗ್‌ರಂತಹ ಹೆಚ್ಚು ಪ್ರತಿಭಾನ್ವಿತ ಕ್ರಿಕೆಟಿಗರನ್ನು ಉತ್ಪಾದಿಸುವ ಉತ್ಸಾಹವನ್ನು ಹೊಂದಿದ್ದೇನೆ' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT