ರಿಷಭ್ ಪಂತ್ 
ಕ್ರಿಕೆಟ್

England-India test: ಗೌತಮ್ ಗಂಭೀರ್- ಶುಭಮನ್ ಗಿಲ್ ಸಂದೇಶದಿಂದ ರಿಷಭ್ ಪಂತ್ ಔಟ್?; ದಿನೇಶ್ ಕಾರ್ತಿಕ್ ಹೇಳಿದ್ದೇನು?

ಪಂತ್ ಅವರಂತಹ ವ್ಯಕ್ತಿ ತನ್ನದೇ ಆದ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ನೀವು ಅವರ ಪ್ರವೃತ್ತಿಗೆ ವಿರುದ್ಧವಾಗಿ ಆಡುವಂತೆ ಹೇಳಿದಾಗ ಅದು ವಿಪತ್ತಿಗೆ ಕಾರಣವಾಗಬಹುದು.

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಸರಣಿಯ ಮೊದಲನೇ ಟೆಸ್ಟ್ ಪಂದ್ಯದ ಎರಡನೇ ದಿನ ಶುಭಮನ್ ಗಿಲ್ ಮತ್ತು ಕರುಣ್ ನಾಯರ್ ಹಿಂದೆಯೇ ಔಟ್ ಆದರೂ ಕೂಡ ರಿಷಭ್ ಪಂತ್ ನಿರಾಳವಾಗಿ ಕಾಣುತ್ತಿದ್ದರು. ಭಾರತದ ಉಪನಾಯಕ ಆಕ್ರಮಣಕಾರಿ ಕ್ರಿಕೆಟ್ ಆಡುತ್ತಾ ಮುಂದುವರೆದರು. ನಂತರ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡಲು ಬಂದರು. ಎಲ್ಲವೂ ಭಾರತದ ನಿಯಂತ್ರಣದಲ್ಲಿದೆ ಎಂದು ತೋರುತ್ತಿತ್ತು.

ಊಟದ ಸಮಯ ಸಮೀಪಿಸುತ್ತಿದ್ದಂತೆ, ನಾಯಕ ಶುಭಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಡ್ರೆಸ್ಸಿಂಗ್ ಕೊಠಡಿಯಿಂದ ಪಂತ್ ಮತ್ತು ಜಡೇಜಾ ಅವರಿಗೆ ಸಂದೇಶವೊಂದನ್ನು ಕಳುಹಿಸಿದರು. ಅದಾದ ಸ್ವಲ್ಪ ಸಮಯದ ನಂತರವೇ, ಪಂತ್ ಔಟಾದರು. ನಂತರ ಬಂದ ಶಾರ್ದೂಲ್ ಠಾಕೂರ್ ಕೂಡ ಊಟಕ್ಕೂ ಮುನ್ನ ಕೊನೆಯ ಓವರ್‌ನಲ್ಲಿ ಔಟಾದರು.

ಪಂತ್ ಅವರ ಔಟ್‌ಗೆ ಆ ಸಂದೇಶವು ಒಂದು ಕಾರಣವಾಗಿರಬಹುದು ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಊಹಿಸಿದ್ದಾರೆ. ಪಂತ್ ಅವರಂತಹ ವ್ಯಕ್ತಿ ತನ್ನದೇ ಆದ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ನೀವು ಅವರ ಪ್ರವೃತ್ತಿಗೆ ವಿರುದ್ಧವಾಗಿ ಆಡುವಂತೆ ಹೇಳಿದಾಗ ಅದು ವಿಪತ್ತಿಗೆ ಕಾರಣವಾಗಬಹುದು ಎಂದಿದ್ದಾರೆ.

'ಇದಲ್ಲದೆ ತುಂಬಾ ಆಸಕ್ತಿದಾಯಕ ಸಂಗತಿಯೆಂದರೆ, ರಿಷಭ್ ಪಂತ್‌ಗೆ ಸಂದೇಶ ಕಳುಹಿಸಿದಾಗ, ಅದು ಅವರ ಆಟದ ಶೈಲಿಯನ್ನು ನಿಯಂತ್ರಿಸಿತು. ಪಂತ್ ಯಾವಾಗಲೂ ಫಿಯರ್‌ಲೆಸ್ ಆಟವನ್ನು ಆಡುತ್ತಾರೆ. ಆದಕ್ಕಾಗಿಯೇ ಅವರಿಗೆ ಸಂದೇಶ ಕಳುಹಿಸಲಾಗಿದೆ ಎಂದು ನನಗೆ ಅನಿಸುತ್ತದೆ. ಅದು ಕೆಲವು ಆಟಗಾರರಿಗೆ ಕೆಲಸ ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಕಾರ್ತಿಕ್ ಕಾಮೆಂಟ್ ಮಾಡುವಾಗ ಹೇಳಿದರು.

ಗಿಲ್ ಮತ್ತು ಗಂಭೀರ್ ವಿಕೆಟ್ ಕಳೆದುಕೊಳ್ಳಬಾರದು ಎಂದು ಬಯಸುವುದು ಸಮಂಜಸವೇ, ಆದರೆ ಪಂತ್‌ನಂತಹ ಆಟಗಾರರಿಗೆ, ನೀವು ಏನನ್ನೂ ಹೇಳುವ ಅಗತ್ಯವಿಲ್ಲ. ಅವರನ್ನು ಹಾಗೆಯೇ ಬಿಡಬೇಕು. ಅವರು ತಮ್ಮದೇ ಆದ ಶೈಲಿಯಿಂದಲೇ 134 ರನ್ ಗಳಿಸಿದರು ಮತ್ತು ಅವರನ್ನು ದೂರವಿಡುವುದು ಉತ್ತಮ ತಂತ್ರವಲ್ಲ ಎಂದರು.

'ಒಬ್ಬ ತರಬೇತುದಾರನಾಗಿ, ನೀವು ಬ್ಯಾಟ್ಸ್‌ಮನ್‌ಗೆ ಸಂದೇಶವನ್ನು ತಲುಪಿಸಲು ಬಯಸುವುದು ಅದು ಸಂಪೂರ್ಣ ಅರ್ಥವಾಗಿರುತ್ತದೆ. ಆದರೆ, ಕಾಲಾನಂತರದಲ್ಲಿ, ಕೆಲವು ಆಟಗಾರರಿಗೆ, ನೀವು ಆ ಸಂದೇಶವನ್ನು ಹೇಗೆ ಕಳುಹಿಸುತ್ತೀರಿ ಎಂಬುದು ಬಹಳ ಮುಖ್ಯವಾಗುತ್ತದೆ. ಸ್ವರ ಯಾವುದು? ಬ್ಯಾಟ್ಸ್‌ಮನ್‌ನಿಂದ ಉತ್ತಮವಾದದ್ದನ್ನು ಪಡೆಯಲು ಬಳಸುವ ಭಾಷೆ ಯಾವುದು? ಬಹುಶಃ ರಿಷಭ್ ಪಂತ್ ವಿಷಯದಲ್ಲಿ, ನೀವು ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಅದು ವಿಭಿನ್ನವಾದ ಮಾರ್ಗವಾಗಿರಬೇಕು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT