ರವೀಂದ್ರ ಜಡೇಜಾ 
ಕ್ರಿಕೆಟ್

'ಕಿರಿಯ ಆಟಗಾರರನ್ನು ಟೀಕಿಸುವುದು ನ್ಯಾಯವಲ್ಲ': ಇಂಗ್ಲೆಂಡ್ ವಿರುದ್ಧ ರವೀಂದ್ರ ಜಡೇಜಾ ವೈಫಲ್ಯಕ್ಕೆ ಸಂಜಯ್ ಮಂಜ್ರೇಕರ್ ಕಿಡಿ

ಈ ಹಿಂದೆಯೂ ಜಡೇಜಾ ಅವರ ಪ್ರದರ್ಶನವನ್ನು ಟೀಕಿಸಿದ್ದ ಅವರು, 5ನೇ ದಿನದ ಪಿಚ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದ ಕಾರಣ ಸ್ಪಿನ್ನರ್ ಮೇಲೆ ಕಿಡಿಕಾರಿದ್ದಾರೆ.

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡವು 5 ವಿಕೆಟ್‌ಗಳ ಸೋಲನ್ನು ಅನುಭವಿಸಿದ್ದು, ಇಂಗ್ಲೆಂಡ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಇಡೀ ಪಂದ್ಯದಲ್ಲಿ, ಭಾರತದ ಏಕೈಕ ಸ್ಪಿನ್ನರ್ ರವೀಂದ್ರ ಜಡೇಜಾ ಎರಡನೇ ಇನಿಂಗ್ಸ್‌ನಲ್ಲಿ ಮಾತ್ರ ಒಂದು ವಿಕೆಟ್ ಪಡೆಯಲು ಸಾಧ್ಯವಾಯಿತು. ಇದು ಇಂಗ್ಲಿಷ್ ಪರಿಸ್ಥಿತಿಗಳಲ್ಲಿ ಅವರ ದಕ್ಷತೆಯ ಬಗ್ಗೆ ಚರ್ಚೆಗೆ ಕಾರಣವಾಯಿತು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಶಾರ್ದೂಲ್ ಠಾಕೂರ್ ಅವರಂತಹ ಆಟಗಾರರು ಪಂದ್ಯದಲ್ಲಿ ತಂಡದ ಹಿರಿಯ ಬೌಲರ್‌ಗಿಂತ ಉತ್ತಮ ಅಂಕಿಅಂಶಗಳೊಂದಿಗೆ ಮರಳಿದರು.

ಈ ಹಿಂದೆಯೂ ಜಡೇಜಾ ಅವರ ಪ್ರದರ್ಶನವನ್ನು ಟೀಕಿಸಿದ್ದ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, 5ನೇ ದಿನದ ಪಿಚ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾದ ಕಾರಣ ಸ್ಪಿನ್ನರ್ ಮೇಲೆ ಕಿಡಿಕಾರಿದ್ದಾರೆ.

'ತಮಾಷೆಯೆಂದರೆ, ಪಿಚ್ ಭಾರತದ ಸೀಮ್ ಬೌಲರ್‌ಗಳಿಗೆ ಯಾವುದೇ ಪಾರ್ಶ್ವ ಚಲನೆಯನ್ನು ನೀಡಲಿಲ್ಲ. ಬುಮ್ರಾ ಕೂಡ ಪಿಚ್‌ನಿಂದ ಏನನ್ನೂ ಪಡೆಯಲು ಸಾಧ್ಯವಾಗಲಿಲ್ಲ. ಜೊತೆಗೆ, ಬೆನ್ ಡಕೆಟ್ ಬುಮ್ರಾ ವಿರುದ್ಧ ಅದ್ಭುತವಾಗಿ ಆಡಿರುವುದರ ಜೊತೆಗೆ ದಾಖಳೆ ಹೊಂದಿದ್ದಾರೆ ಮತ್ತು ಜಡೇಜಾ ವಿರುದ್ಧವೂ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಈವರೆಗೂ ಅವರು ಜಡೇಜಾ ಅವರಿಗೆ ಔಟ್ ಆಗಿಯೇ ಇಲ್ಲ ಎಂದು ನಾನು ಭಾವಿಸುತ್ತೇನೆ ಮತ್ತು ತವರಿನಲ್ಲೂ ಕೂಡ ಅವರು ಜಡೇಜಾ ವಿರುದ್ಧ ಆಡಿದ್ದಾರೆ. ಆದ್ದರಿಂದ ನಿಮ್ಮ ಇಬ್ಬರು ಮುಂಚೂಣಿಯ ಬೌಲರ್‌ಗಳ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಇಂಗ್ಲಿಷ್ ಬ್ಯಾಟ್ಸ್‌ಮನ್ ಇದ್ದಾಗ, ನೀವು ಗೆಲುವನ್ನು ಬಿಟ್ಟುಕೊಡಲು ಸಿದ್ಧರಾಗಿರುತ್ತೀರಿ' ಎಂದು ಅವರು ಮಂಗಳವಾರ ಪಂದ್ಯದ ಅಂತ್ಯದ ನಂತರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡುತ್ತಾ ಹೇಳಿದರು.

ಎರಡೂ ಇನಿಂಗ್ಸ್‌ಗಳಲ್ಲಿ, ಯುವ ವೇಗಿ ಪ್ರಸಿದ್ಧ್ ಕೃಷ್ಣ 6ಕ್ಕಿಂತ ಹೆಚ್ಚು ಎಕಾನಮಿ ದರದಲ್ಲಿ ರನ್‌ಗಳನ್ನು ಸೋರಿಕೆ ಮಾಡಿದರು. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಲು ಅವರ ಅಸಮರ್ಥತೆಯು ಚರ್ಚೆಯ ವಿಷಯವಾಯಿತು. ಆದರೆ, ಭಾರತಕ್ಕಾಗಿ ಬಿಳಿಯರ ತಂಡದಲ್ಲಿ ಅವರಿಗೆ ಇನ್ನೂ ಆರಂಭಿಕ ದಿನಗಳಾಗಿರುವುದರಿಂದ, ಮಂಜ್ರೇಕರ್ ವೇಗಿಗಳನ್ನು ಟೀಕಿಸಲು ಉತ್ಸುಕರಾಗಿರಲಿಲ್ಲ.

'ನೋಡಿ, ಪ್ರಸಿದ್ಧ್ ಕೃಷ್ಣ ಅವರಂತಹ ಕಿರಿಯ ಆಟಗಾರರನ್ನು ಟೀಕಿಸುವುದು ನ್ಯಾಯಯುತವಲ್ಲ. ಸುಧಾರಣೆಯ ಕ್ಷೇತ್ರಗಳು ಸ್ಪಷ್ಟವಾಗಿವೆ. ಆದರೆ, ನಾನು ಜಡೇಜಾ ಅವರನ್ನು ಟೀಕಿಸಲಿದ್ದೇನೆ. ಏಕೆಂದರೆ, ಇದು ಫೈನಲ್ ದಿನದ ಪಿಚ್ ಆಗಿದೆ. ಅವರಿಗೆ ಕಠಿಣ ಪರಿಸ್ಥಿತಿ ಎದುರಾಗಿತ್ತು. ಮತ್ತು ಕೊನೆಯಲ್ಲಿ, ಅಲ್ಲಿ ಒಂದೆರಡು ಅವಕಾಶಗಳಿವೆ ಎಂದು ನನಗೆ ತಿಳಿದಿದೆ. ಆದರೆ, ನಾವು ಜಡೇಜಾ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಬೇಕು. ಪಿಚ್ ಬೌಲರ್‌ಗಳಿಗೆ ಸ್ವಲ್ಪ ಸಹಾಯ ಮಾಡಿದೆ. ಕೆಲವು ಇಂಗ್ಲಿಷ್ ಪಿಚ್‌ಗಳಂತೆ ಇರಲಿಲ್ಲ. ಬೆನ್ ಸ್ಟೋಕ್ಸ್‌ಗೆ ಬೌಲಿಂಗ್ ಮಾಡುವಾಗ ಪಿಚ್‌ನಲ್ಲಿನ ಅನಿರೀಕ್ಷಿತ ಬೌನ್ಸ್ ಅಥವಾ ಸ್ಪಿನ್‌ಗೆ ಕಾರಣವಾಗುವ ಪ್ರದೇಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿಲ್ಲ. ಬೆನ್ ಡಕೆಟ್ ವಿರುದ್ಧ ಇದನ್ನು ಮಾಡಿದರು. ಆದರೆ, ಅಷ್ಟೊತ್ತಿಗಾಗಲೇ ಅದು ತುಂಬಾ ತಡವಾಗಿತ್ತು. ಅನುಭವಿ ಬೌಲರ್‌ಗಳಿಂದ, ಅನುಭವಿ ಬ್ಯಾಟ್ಸ್‌ಮನ್‌ಗಳಿಂದ, ನೀವು ಹೆಚ್ಚಿನದನ್ನು ನಿರೀಕ್ಷಿಸುತ್ತೀರಿ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT