ಟೀಂ ಇಂಡಿಯಾ ಬೌಲರ್ ಮೊಹಮ್ಮದ್​ ಶಮಿ online desk
ಕ್ರಿಕೆಟ್

India vs New Zealand CT 2025 : ಶಮಿ, ಶರ್ಮಾ ಅನುಪಸ್ಥಿತಿ? ಭಾರತಕ್ಕೆ ಭಾರಿ ಸವಾಲು!

ಭಾನುವಾರ ನ್ಯೂಜಿಲೆಂಡ್ ವಿರುದ್ಧ ಭಾರತದ ನಿರ್ಣಾಯಕ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಗ್ರೂಪ್ ಎ ಪಂದ್ಯಕ್ಕೂ ಮುನ್ನ, ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ರೋಹಿತ್ ಶರ್ಮಾ ಬಗ್ಗೆಯೂ ಅಪ್ಡೇಟ್ ನೀಡಿದ್ದಾರೆ.

ದುಬೈ: ದುಬೈ ನಲ್ಲಿ ಮಾ.02 ರಂದು ನ್ಯೂಜಿಲ್ಯಾಂಡ್- ಭಾರತ ನಡುವೆ ಪಂದ್ಯ ನಡೆಯಲಿದ್ದು, ಭಾರತ ತಂಡದಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆ ಇದೆ.

ಮೊಹಮ್ಮದ್ ಶಮಿ ಅಲಭ್ಯತೆ ಎದುರಾದಲ್ಲಿ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಅವರನ್ನು ಆಡಿಸುವಂತೆ ಭಾರತೀಯ ತಂಡದ ಆಡಳಿತ ಮಂಡಳಿ (ಬಿಸಿಸಿಐ) ಸಲಹೆ ನೀಡಲಿದೆ.

ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರ ಮಾರ್ಗದರ್ಶನದಲ್ಲಿ ಅರ್ಶ್‌ದೀಪ್ ತರಬೇತಿ ಪಡೆದಿದ್ದಾರೆ. ಫೆಬ್ರವರಿ 23 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದ ಸಮಯದಲ್ಲಿ, ಶಮಿ ಇನ್ನಿಂಗ್ಸ್‌ನ ಮೂರನೇ ಓವರ್ ಎಸೆದ ನಂತರ ಫಿಸಿಯೋಗಳಿಂದ ಬಲಗಾಲಿಗೆ ಚಿಕಿತ್ಸೆ ಪಡೆದಿದ್ದರು.

ಶುಕ್ರವಾರದ ತರಬೇತಿ ಅವಧಿಯಲ್ಲಿ ನಡೆದ ಪರಿಶೀಲನೆಯಲ್ಲಿ, ಶಮಿ ಅವರ ಸ್ಥಿತಿ ಭಾರತ ಸೆಮಿಫೈನಲ್‌ಗೆ ಮೊದಲು ಅಗತ್ಯವಾದ ವಿರಾಮ ನೀಡುವ ಅಗತ್ಯತೆಯನ್ನು ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಕೆಎಲ್ ರಾಹುಲ್ ಮಾಧ್ಯಮಗಳೊಂದಿಗಿನ ತಮ್ಮ ಸಂವಾದದಲ್ಲಿ ಸಹಾಯಕ ಕೋಚ್ ರಯಾನ್ ಡೋಸ್ಚೇಟ್ ಬೌಲಿಂಗ್ ಲೈನ್ ಅಪ್ ಅನ್ನು ಸ್ವಲ್ಪ ಬದಲಾಯಿಸಬಹುದು ಎಂದು ಸುಳಿವು ನೀಡಿದರು.

ಭಾನುವಾರ ನ್ಯೂಜಿಲೆಂಡ್ ವಿರುದ್ಧ ಭಾರತದ ನಿರ್ಣಾಯಕ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಗ್ರೂಪ್ ಎ ಪಂದ್ಯಕ್ಕೂ ಮುನ್ನ, ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ರೋಹಿತ್ ಶರ್ಮಾ ಬಗ್ಗೆಯೂ ಅಪ್ಡೇಟ್ ನೀಡಿದ್ದಾರೆ. ದುಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟೆನ್ ಡೋಸ್ಚೇಟ್, ರೋಹಿತ್ ತಮ್ಮ ಗಾಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

"ಅವರು ಚೆನ್ನಾಗಿದ್ದಾರೆ. ಇದು ಅವರಿಗೆ ಮೊದಲೇ ಇದ್ದ ಗಾಯ, ಆದ್ದರಿಂದ ಅದನ್ನು ನಿಜವಾಗಿಯೂ ಚೆನ್ನಾಗಿ ಹೇಗೆ ನಿರ್ವಹಿಸಬೇಕೆಂದು ಅವರಿಗೆ ತಿಳಿದಿದೆ ಮತ್ತು ಅವರು ಅದರ ಮೇಲೆ ಹಿಡಿತ ಸಾಧಿಸಿದ್ದಾರೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT