ವಿರಾಟ್ ಕೊಹ್ಲಿ 
ಕ್ರಿಕೆಟ್

'ಒಂಟಿಯಾಗಿ ಕುಳಿತು ದುಃಖಿಸಲು ಆಗಲ್ಲ': ಬಿಸಿಸಿಐ ರೂಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಕಿಡಿ!

ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೆಣಸಲಿದೆ.

ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ತಂಡದ ವಿದೇಶಿ ಪ್ರವಾಸಗಳ ಸಮಯದಲ್ಲಿ ಕುಟುಂಬ ಸದಸ್ಯರು ಉಪಸ್ಥಿತಿ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ವಿಶೇಷವಾಗಿ ಆಟಗಾರರು ಕಠಿಣ ಪರಿಸ್ಥಿತಿಯನ್ನು ಎದುರಿಸುವಾಗ, ಅವರ ಸುತ್ತಲೂ ಕುಟುಂಬಸ್ಥರು ಇದ್ದಾರೆ ಎನ್ನುವುದು ಅವರಿಗೆ ಸಮತೋಲನ ಮತ್ತು ಸಾಮಾನ್ಯತೆಯನ್ನು ತರುತ್ತದೆ ಎಂದು ಹೇಳಿರುವುದಾಗಿ ESPNCricinfo ವರದಿ ಮಾಡಿದೆ.

ಜನವರಿಯಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 3-1 ಅಂತರದಲ್ಲಿ ಸೋತ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರವಾಸದಲ್ಲಿ ಆಟಗಾರರ ಪತ್ನಿ ಹಾಗೂ ಕುಟುಂಬ ಸದಸ್ಯರ ಜೊತೆಗಿರುವಿಕೆಯ ಕಾಲಮಿತಿಯನ್ನು ಕಡಿತಗೊಳಿಸಿ ನಿರ್ದೇಶನ ನೀಡಿದೆ. 45 ದಿನಗಳಿಗಿಂತ ಹೆಚ್ಚಿನ ಪ್ರವಾಸದ ಮೊದಲ ಎರಡು ವಾರ ಮಾತ್ರ ಆಟಗಾರರ ಕುಟುಂಬದವರಿಗೆ ಅವರೊಂದಿಗೆ ಇರಲು ಅವಕಾಶವಿದೆ. ಕಡಿಮೆ ಪ್ರವಾಸಗಳಲ್ಲಿ, ಆಟಗಾರರು ತಮ್ಮ ಕುಟುಂಬಗಳೊಂದಿಗೆ ಒಂದು ವಾರದವರೆಗೆ ಇರಬಹುದಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಆವೃತ್ತಿಗೂ ಮುನ್ನ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಸಮಿಟ್‌ನಲ್ಲಿ ಮಾತನಾಡಿದ ವಿರಾಟ್, ಇಎಸ್‌ಪಿಎನ್ ಕ್ರಿಕ್‌ಇನ್ಫೋ ಉಲ್ಲೇಖಿಸಿ, 'ಹೊರಗಿನ ಪ್ರಪಂಚದಲ್ಲಿ ತೀವ್ರವಾದ ಅಥವಾ ಸವಾಲಿನ ಅನುಭವಗಳನ್ನು ಎದುರಿಸಿದ ನಂತರ ಕುಟುಂಬದಿಂದ ಸಿಗುವ ಸಾಂತ್ವನ ಮತ್ತು ಭಾವನಾತ್ಮಕ ಬೆಂಬಲವು ಎಷ್ಟು ಮುಖ್ಯವಾಗಿರುತ್ತದೆ ಎಂಬುದನ್ನು ಜನರಿಗೆ ವಿವರಿಸುವುದು ಕಷ್ಟ. ಕಠಿಣ ಸಮಯದಲ್ಲಿ ಪ್ರೀತಿಪಾತ್ರರ ಜೊತೆ ಇರುವುದು ಆಧಾರ, ಧೈರ್ಯ ಮತ್ತು ಸ್ಥಿರಗೊಳಿಸುವ ಪರಿಣಾಮವನ್ನು ನೀಡುತ್ತದೆ' ಎಂದರು.

'ಪ್ರೀತಿಪಾತ್ರರ ಜೊತೆಗೆ ಇರುವುದರಿಂದ ಆಟಗಾರರಿಗೆ ಎಷ್ಟು ದೊಡ್ಡ ಪ್ರಮಾಣದ ಉಪಯೋಗವಾಗುತ್ತದೆ ಎಂಬುದರ ಬಗ್ಗೆ ಜನರಿಗೆ ತಿಳಿವಳಿಕೆ ಇದೆ ಎಂದು ನಾನು ಭಾವಿಸುವುದಿಲ್ಲ. ಮತ್ತು ಅದರ ಬಗ್ಗೆ ನನಗೆ ಸಾಕಷ್ಟು ನಿರಾಶೆಯಾಗಿದೆ. ಏಕೆಂದರೆ, ಏನು ನಡೆಯುತ್ತಿದೆ ಎಂಬುದರ ಅರಿವಿಲ್ಲದೆಯೇ ಜನರು ಮಾತನಾಡುತ್ತಾರೆ ಮತ್ತು 'ಓಹ್, ಬಹುಶಃ ಅವರನ್ನು ದೂರವಿಡಬೇಕಾಗಬಹುದು' ಎಂದು ಅವರು ಹೇಳಿದರು.

ಪ್ರವಾಸದ ಸಮಯದಲ್ಲಿ ಕಳಪೆ ಪ್ರದರ್ಶನ ಮೂಡಿಬಂದರೆ ನಂತರ ಯಾವುದೇ ಆಟಗಾರನು 'ಒಂಟಿಯಾಗಿ ಕುಳಿತು ದುಃಖಿಸಲು' ಬಯಸುವುದಿಲ್ಲ. ವೃತ್ತಿಪರ ಕ್ರೀಡಾಪಟುವಾಗಿರುವುದರ ಒತ್ತಡಗಳ ಹೊರತಾಗಿಯೂ ನಾನು ಸಾಮಾನ್ಯನಾಗಿರಲು ಬಯಸುತ್ತೇನೆ. ನೀವು ನಿಮ್ಮ ಆಟವನ್ನು ನಿಜವಾಗಿಯೂ ಒಂದು ಜವಾಬ್ದಾರಿ ಎಂದು ಪರಿಗಣಿಸಬಹುದು. ನೀವು ಆ ಜವಾಬ್ದಾರಿಯನ್ನು ಮುಗಿಸುತ್ತೀರಿ ಮತ್ತು ಮತ್ತೆ ಜೀವನಕ್ಕೆ ಬರುತ್ತೀರಿ ಎಂದು ವಿರಾಟ್ ಹೇಳಿದರು.

'ಅದೇ ರೀತಿ ನಿಮ್ಮ ಜೀವನದಲ್ಲಿ ವಿಭಿನ್ನ ಸನ್ನಿವೇಶಗಳು ಸಂಭವಿಸಬಹುದು. ಅದು ನಿಮ್ಮನ್ನು ಸಂಪೂರ್ಣವಾಗಿ ಸಾಮಾನ್ಯರನ್ನಾಗಿ ಮಾಡಲು ಅನುವು ಮಾಡಿಕೊಡುತ್ತದೆ. ನೀವು ನಿಮ್ಮ ಬದ್ಧತೆ, ನಿಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಿದ ನಂತರ ನೀವು ನಿಜವಾಗಿಯೂ ಸಾಮಾನ್ಯರೇ ಆಗಿರುತ್ತೀರಿ ಮತ್ತು ನಿಮ್ಮ ಮನೆಗೆ ಹಿಂತಿರುಗುತ್ತೀರಿ, ಕುಟುಂಬದೊಂದಿಗೆ ಇರುತ್ತೀರಿ ಮತ್ತು ನಿಮ್ಮ ಮನೆಯಲ್ಲಿ ಸಂಪೂರ್ಣವಾಗಿ ಸಾಮಾನ್ಯತೆ ಇರುತ್ತದೆ ಮತ್ತು ಸಾಮಾನ್ಯ ಕುಟುಂಬ ಜೀವನವು ಮುಂದುವರಿಯುತ್ತದೆ. ಆದ್ದರಿಂದ, ನನಗೆ, ಅದುವೇ ಅಪಾರ ಸಂತೋಷದ ದಿನವಾಗಿರುತ್ತದೆ. ಸಾಧ್ಯವಾದಾಗಲೆಲ್ಲಾ ನನ್ನ ಕುಟುಂಬದೊಂದಿಗೆ ಸಮಯ ಕಳೆಯುವ ಯಾವುದೇ ಅವಕಾಶಗಳನ್ನು ನಾನು ಕಳೆದುಕೊಳ್ಳುವುದಿಲ್ಲ' ಎಂದು ಅವರು ಹೇಳಿದರು.

ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೆಣಸಲಿದೆ. ವಿರಾಟ್ ಕೊಹ್ಲಿ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ಸಹ ಹೊಂದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, 252 ಪಂದ್ಯಗಳಲ್ಲಿ 38.66 ಸರಾಸರಿಯಲ್ಲಿ 8,004 ರನ್‌ಗಳನ್ನು ಪೂರೈಸಿಸಿದ್ದಾರೆ. ಇದರಲ್ಲಿ ಎಂಟು ಶತಕಗಳು ಮತ್ತು 55 ಅರ್ಧಶತಕ ಸೇರಿವೆ. ಕಳೆದ ವರ್ಷ, ಆರೆಂಜ್ ಕ್ಯಾಪ್‌ ಪಡೆದಿದ್ದ ಕೊಹ್ಲಿ, ಒಂದು ಶತಕ ಮತ್ತು ಐದು ಅರ್ಧಶತಕ ಸೇರಿದಂತೆ 741 ರನ್‌ ಗಳಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

SCROLL FOR NEXT