ಯಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ 
ಕ್ರಿಕೆಟ್

Yuzvendra Chahal-Dhanashree Verma ವಿಚ್ಛೇದನ; ಜೀವನಾಂಶ 60 ಕೋಟಿ ರೂ ಅಲ್ಲ.. ಮತ್ತೆಷ್ಟು?

ಮೊದಲ ಬಾರಿಗೆ ಚಹಲ್ ಮತ್ತು ಧನಶ್ರೀ ವರ್ಮಾ ವಿಚ್ಚೇದನ ವಿಚಾರ ಬಹಿರಂಗಗೊಂಡಾಗ ಧನಶ್ರೀ ವರ್ಮಾ ಸುಮಾರು 60 ಕೋಟಿ ರೂಗಳಷ್ಟು ಜೀವನಾಂಶ ಕೇಳಿದ್ದಾರೆ ಎಂದು ವರದಿಯಾಗಿತ್ತು.

ಮುಂಬೈ: ಕ್ರಿಕೆಟಿಗ ಯಜುವೇಂದ್ರ ಚಹಲ್, ಧನಶ್ರೀ ವರ್ಮಾ ವಿಚ್ಚೇದನ ವಿಚಾರ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು ಪ್ರಮುಖವಾಗಿ ಧನಶ್ರೀ ವರ್ಮಾಗೆ ನೀಡಬೇಕಾದ ಜೀವನಾಂಶದ ಕುರಿತು ಅಚ್ಚರಿ ಮಾಹಿತಿ ಹೊರಬಿದ್ದಿದೆ.

ಈ ಹಿಂದೆ ಮೊದಲ ಬಾರಿಗೆ ಚಹಲ್ ಮತ್ತು ಧನಶ್ರೀ ವರ್ಮಾ ವಿಚ್ಚೇದನ ವಿಚಾರ ಬಹಿರಂಗಗೊಂಡಾಗ ಧನಶ್ರೀ ವರ್ಮಾ ಸುಮಾರು 60 ಕೋಟಿ ರೂಗಳಷ್ಟು ಜೀವನಾಂಶ ಕೇಳಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಈ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಲೇ ವದಂತಿಗಳಿಗೆಲ್ಲಾ ಸರತಿ ಸಾಲಲ್ಲಿ ತೆರೆ ಬೀಳುತ್ತಿದೆ.

ಅಂದಹಾಗೆ ವಿಚ್ಚೇದನ ವಿಚಾರವಾಗಿ ಧನಶ್ರೀ ವರ್ಮಾ ಎಷ್ಟು ಮೊತ್ತ ಕೇಳಿದ್ದರು ಎಂಬುದು ಎಲ್ಲಿಯೂ ಬಹಿರಂಗವಾಗಿಲ್ಲವಾದರೂ ಯಜುವೇಂದ್ರ ಚಹಲ್, ಧನಶ್ರೀ ವರ್ಮಾ ದಂಪತಿ ಪರಸ್ಪರ ಒಪ್ಪಿಕೊಂಡ ಮೊತ್ತದ ಪ್ರಮಾಣ ಇದೀಗ ಬಹಿರಂಗವಾಗಿದೆ. ಮೂಲಗಳ ಪ್ರಕಾರ ಚಾಹಲ್ ತನ್ನ ಪರಿತ್ಯಕ್ತ ಪತ್ನಿ ಧನಶ್ರೀ ವರ್ಮಾಗೆ 4 ಕೋಟಿ 75 ಲಕ್ಷ ರೂ.ಗಳ ಶಾಶ್ವತ ಜೀವನಾಂಶವನ್ನು ನೀಡಲು ಒಪ್ಪಿಕೊಂಡಿದ್ದರು ಎನ್ನಲಾಗಿದೆ.

ಈ ಪೈಕಿ ಕ್ರಿಕೆಟಿಗ ಚಹಲ್ ಇಲ್ಲಿಯವರೆಗೆ 2 ಕೋಟಿ 37 ಲಕ್ಷ 55 ಸಾವಿರ ರೂ.ಗಳನ್ನು ಮಾತ್ರ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಉಳಿದ ಮೊತ್ತವನ್ನು ಪಾವತಿಸದಿರುವುದನ್ನು ನ್ಯಾಯಾಲಯವು 'ಪಾಲಿಸದಿರುವ ವಿಷಯ'ವೆಂದು ಪರಿಗಣಿಸಿದೆ.

ಇದೇ ಕಾರಣಕ್ಕೆ ಈ ಹಿಂದೆ ಕೌಟುಂಬಿಕ ನ್ಯಾಯಾಲಯ ಕೂಲಿಂಗ್-ಆಫ್ ಅರ್ಜಿಯನ್ನು ತಿರಸ್ಕರಿಸಿತು. 'ಪಾಲಿಸದಿರುವ ವಿಷಯ'ವನ್ನು ಎತ್ತಿ ತೋರಿಸಿದ ಕುಟುಂಬ ಸಲಹೆಗಾರರ ​ವರದಿಯನ್ನು ಪರಿಶೀಲಿಸಿದ ನಂತರ ಕೌಟುಂಬಿಕ ನ್ಯಾಯಾಲಯವು ಈ ನಿರ್ಧಾರಕ್ಕೆ ಬಂದಿತು ಎಂದು ಹೇಳಲಾಗಿದೆ.

ಬುಧವಾರ, ಬಾಂಬೆ ಹೈಕೋರ್ಟ್ ಚಹಲ್ ಮತ್ತು ಧನಶ್ರೀ ವರ್ಮಾ ದಂಪತಿಗಳು ಈಗಾಗಲೇ ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಅಂತರವನ್ನು ಕಳೆದಿದ್ದಾರೆ ಎಂದು ಗಮನಿಸಿದ್ದು, ಜೀವನಾಂಶದ ಉಳಿದ ಮೊತ್ತವನ್ನು ಪಾವತಿಸಲು ಅವಕಾಶ ನೀಡಿದ್ದರಿಂದ ಒಪ್ಪಿಗೆಯ ನಿಯಮಗಳ ಅನುಸರಣೆಯ ಪರವಾಗಿ ತೀರ್ಪು ನೀಡಿದೆ.

ಇದೇ ಮಾರ್ಚ್ 25ರಂದು ಯಜುವೇಂದ್ರ ಚಹಲ್ ಅವರು ಈ ಬಾರಿಯ ಐಪಿಎಲ್‌ ಹಣಾಹಣಿಯಲ್ಲಿ ಮೊದಲ ಪಂದ್ಯ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಎಲ್‌ಗೂ ಮೊದಲೇ ಧನುಶ್ರೀ ಅವರಿಗೆ ಡಿವೋರ್ಸ್ ಕೊಟ್ಟು ಐಪಿಎಲ್‌ ಕಡೆ ಸಂಪೂರ್ಣವಾಗಿ ಗಮನ ಹರಿಸಲು ಮುಂದಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಮ್ಮ ಯೋಧರಿಗೆ ಇರುವುದು ಸೈನ್ಯ ಧರ್ಮ ಮಾತ್ರ: ಸೇನೆಯನ್ನು ಎಳೆದು ತರುತ್ತಿರುವುದು ರಾಜಕೀಯ ಕುತಂತ್ರ; ರಾಹುಲ್ ಗೆ ರಾಜನಾಥ್ ಸಿಂಗ್ ತಿರುಗೇಟು

3ನೇ ಮಹಾಯುದ್ಧದ ಸಾಧ್ಯತೆ ದೂರವಿಲ್ಲ: ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್

Devi Awards 2025: ಇಂದು ಸಂಜೆ ಬೆಂಗಳೂರಿನಲ್ಲಿ 11 ಮಹಿಳಾ ಸಾಧಕಿಯರಿಗೆ ಸನ್ಮಾನ

ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರು ಶಿಕ್ಷಣಕ್ಕೆ ಒತ್ತು ನೀಡಿದ್ದರಿಂದ ದೇಶದಲ್ಲಿ ಶಿಕ್ಷಣ ಕ್ರಾಂತಿ: ಜಿ. ಪರಮೇಶ್ವರ್

ಕಬ್ಬಿನ ಬೆಲೆ ಏರಿಕೆ: ರೈತರ ಹೋರಾಟಕ್ಕೆ ಸಂದ ಜಯ; ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಸ್ವಾಗತ

SCROLL FOR NEXT