ಕ್ರಿಕೆಟ್

Dhoni Dhoni ಸಾಕಾಯ್ತು: ಈ ವರ್ಷವೇ ಬಿಟ್ಟು ಹೋದರೆ ಒಳ್ಳೆದು... ಇನ್ನೆಷ್ಟು ವರ್ಷ ಮುಠಾಳರಾಗಬೇಕು; CSK ಫ್ಯಾನ್ಸ್ ಆಕ್ರೋಶ, Video!

ಇಷ್ಟು ದಿನ ಧೋನಿಯನ್ನು ತಲೆ ಮೇಲೆ ಕೂರಿಸಿಕೊಂಡು ಸುತ್ತುತ್ತಿದ್ದ ಅಭಿಮಾನಿಗಳು ಇದೀಗ ಧೋನಿ ತಂಡ ಬಿಟ್ಟು ಹೋದರೆ ಸಾಕಪ್ಪ ಅನ್ನುವ ಮಟ್ಟಕ್ಕೆ ಬಂದಿದ್ದಾರೆ. ಇದಕ್ಕೆ ಈ ವಿಡಿಯೋಗಳೇ ಸಾಕ್ಷಿಯಂತಿದೆ.

2025ರ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಎಂಎಸ್ ಧೋನಿಗೆ ಉತ್ತಮವಾಗಿ ಕಾಣುತ್ತಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ವಿರುದ್ಧದ ಸೋಲು ಸಿಎಸ್ ಕೆ ಅಭಿಮಾನಿಗಳು ಆಕ್ರೋಶಗೊಳ್ಳುವಂತೆ ಮಾಡಿದೆ. ಇಷ್ಟು ದಿನ ಧೋನಿಯನ್ನು ತಲೆ ಮೇಲೆ ಕೂರಿಸಿಕೊಂಡು ಸುತ್ತುತ್ತಿದ್ದ ಅಭಿಮಾನಿಗಳು ಇದೀಗ ಧೋನಿ ತಂಡ ಬಿಟ್ಟು ಹೋದರೆ ಸಾಕಪ್ಪ ಅನ್ನುವ ಮಟ್ಟಕ್ಕೆ ಬಂದಿದ್ದಾರೆ. ಇದಕ್ಕೆ ಈ ವಿಡಿಯೋಗಳೇ ಸಾಕ್ಷಿಯಂತಿದೆ.

ಹೌದು... ಸಿಎಸ್ ಕೆ ಅಭಿಮಾನಿಯೊಬ್ಬರು ಕ್ರೀಡಾಂಗಣದ ಹೊರಗೆ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲೂ ಆ ಅಭಿಮಾನಿ ನೇರವಾಗಿ ಧೋನಿಯನ್ನೇ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಧೋನಿ ದೊಡ್ಡ ಫಿನಿಶರ್ ಎಂದು ಹೇಳುತ್ತಾರೆ. ಆದರೆ ಅದಕ್ಕೆ ತದ್ವಿರುದ್ಧವಾಗಿದೆ ಧೋನಿ ಬ್ಯಾಟಿಂಗ್. ಧೋನಿ ಉತ್ತಮ ಫಿನಿಶರ್ ಆಗಬೇಕಾದರೆ ಅವರು ಪಂದ್ಯ ಇನ್ನೇನು ಕೈಬಿಟ್ಟು ಹೋಗುತ್ತಿದೆ ಅನ್ನುವ ಸಮಯದಲ್ಲಿ ಬರಬೇಕು. ಅಂದರೆ 13 ಅಥವಾ 14ನೇ ಓವರ್ ಸಮಯದಲ್ಲಿ ಆದರೆ ಧೋನಿ 8 ಅಥವಾ 9ನೇ ಕ್ರಮಾಂಕದಲ್ಲಿ ಬರುತ್ತಾರೆ. ಒಂದೆರೆಡು ಬೌಂಡರಿ.. ಸಿಕ್ಸರ್ ಬಾರಿಸಿದರೆ ಸಾಕು ಅಭಿಮಾನಿಗಳು ತಲಾ ತಲಾ ಎಂದು ಕೂಗಿ ಖುಷಿ ಪಡುತ್ತಾರೆ ಅಷ್ಟೇ. ಅದರಿಂದ ಏನು ಪ್ರಯೋಜನ ತಂಡ ನಿರಂತರವಾಗಿ ಸೋಲುತ್ತಿದೆ ಎಂದು ಅಭಿಮಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ನಿಲ್ಲದ ಅಭಿಮಾನಿಯ ಮಾತುಗಳು... ಸಾಕಪ್ಪ ಸಾಕಾಯ್ತು. ಈ ವರ್ಷವೇ ತಂಡವನ್ನು ಬಿಟ್ಟು ಹೋದರೆ ಒಳ್ಳೆಯದ್ದು ಇನ್ನೆಷ್ಟು ವರ್ಷ ನಾವು ಮುಠಾಳರಾಗಬೇಕು ಎಂದು ನೇರವಾಗಿ ಧೋನಿಗೆ ತಿವಿದಂತೆ ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆಲವರು ಧೋನಿ ಬೆನ್ನಿಗೆ ನಿಂತು ಮಾತನಾಡಿದ್ದರೆ ಕೆಲವು ಧೋನಿ ಬಿಟ್ಟು ಹೋದರೆ ಸಾಕು ಎನ್ನುವ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಐಪಿಎಲ್ 2025ರಲ್ಲಿ ಮೂರು ಪಂದ್ಯಗಳನ್ನು ಆಡುವ ಚೆನ್ನೈ ತಂಡ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಆದರೆ ನಂತರದ ಆರ್ ಸಿಬಿ ವಿರುದ್ಧ 50 ರನ್ ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧ 6 ರನ್ ಗಳಿಗೆ ಸೋಲು ಕಂಡಿದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT