ಆರ್ ಅಶ್ವಿನ್ 
ಕ್ರಿಕೆಟ್

'ಭಾರತ ಪುರುಷರ ತಂಡ ಈ ರೀತಿ ಎಂದಿಗೂ ಮಾಡಿಲ್ಲ': ವಿಶ್ವಕಪ್ ಗೆಲುವಿನ ನಂತರ ಮಹಿಳಾ ತಂಡದ ನಡೆಗೆ ಬೆರಗಾದ ಆರ್ ಅಶ್ವಿನ್!

ಈ ಗೆಲುವು ಯುವತಿಯರು ಕ್ರಿಕೆಟ್ ಅನ್ನು ವೃತ್ತಿಜೀವನದ ಗಂಭೀರ ಆಯ್ಕೆಯಾಗಿ ತೆಗೆದುಕೊಳ್ಳಲು ಮತ್ತು ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಬಗೆಗಿನ ಪ್ರತಿಯೊಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಬದಲಾಯಿಸಲು ಪ್ರೇರೇಪಿಸುತ್ತದೆ ಎಂದು ಹೇಳಿದರು.

ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿ ಹರ್ಮನ್ ಪ್ರೀತ್ ನೇತೃತ್ವದ ಭಾರತೀಯ ಮಹಿಳಾ ತಂಡ ವಿಶ್ವಕಪ್ ಎತ್ತಿಹಿಡಿಯುವ ಮೂಲಕ ಇತಿಹಾಸ ಬರೆದ ನಂತರ ಭಾರತದ ಪುರುಷ ಕ್ರಿಕೆಟ್ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಕೆಲವು ಆಸಕ್ತಿದಾಯಕ ಅಭಿಪ್ರಾಯಗಳನ್ನು ನೀಡಿದರು. 2005 ಮತ್ತು 2017ರಲ್ಲಿನ ಸೋಲುಗಳ ನಂತರ, ಭಾರತ ಮಹಿಳಾ ತಂಡ ನವಿ ಮುಂಬೈನಲ್ಲಿ ನಡೆದ 2025ರ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಈ ವೇಳೆ ಭಾರತೀಯ ಮಹಿಳಾ ಕ್ರಿಕೆಟ್ ದಿಗ್ಗಜರಾದ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಮತ್ತು ಅಂಜುಮ್ ಚೋಪ್ರಾ ಅವರು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಇದ್ದರು. ಪಂದ್ಯದ ನಂತರ ಕ್ರೀಡಾಂಗಣದೊಳಗೆ ಭಾರತದ ವಿಜಯೋತ್ಸವದ ಮೆರವಣಿಗೆಯ ಸಮಯದಲ್ಲಿ, ಹರ್ಮನ್ ಪ್ರೀತ್ ಮತ್ತು ತಂಡವು ಮಿಥಾಲಿ ಮತ್ತು ಜೂಲನ್ ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸಿತು ಮತ್ತು ಅವರು ಭಾವುಕರಾದರು.

ಮಹಿಳಾ ತಂಡದ ಈ ನಡೆಯನ್ನು ಶ್ಲಾಘಿಸಿರುವ ಅಶ್ವಿನ್, 'ನಿನ್ನೆ ಕೂಡ ಭಾರತೀಯ ತಂಡ ಮಿಥಾಲಿ ರಾಜ್‌ ಅವರಿಗೆ ಟ್ರೋಫಿಯನ್ನು ನೀಡಿತು. ಇದಕ್ಕಾಗಿ ನಾನು ಮಹಿಳಾ ತಂಡಕ್ಕೆ ಹೆಚ್ಚಿನ ಗೌರವ ಸಲ್ಲಿಸುತ್ತೇನೆ. ಭಾರತೀಯ ಪುರುಷರ ತಂಡ ಎಂದಿಗೂ ಈ ರೀತಿ ಮಾಡಿಲ್ಲ. ಕೆಲವೊಮ್ಮೆ ಮಾಧ್ಯಮಗಳ ಮುಂದೆ, ನಾವು ವಿಷಯಗಳನ್ನು ಹೇಳುತ್ತೇವೆ. ಏಕೆಂದರೆ, ಅದು ಮಾಧ್ಯಮ ಪ್ರವೃತ್ತಿಯಾಗಿದೆ. ಆದರೆ, ಹಿಂದಿನ ಪೀಳಿಗೆಗೆ ನಿಜವಾದ ಕ್ರೆಡಿಟ್ ನೀಡುವುದನ್ನು ನಾನು ಹೆಚ್ಚಾಗಿ ನೋಡಿಲ್ಲ. ಸಾಮಾನ್ಯವಾಗಿ, ಇದು 'ನನ್ನ ಪೀಳಿಗೆಯ ತಂಡ ಉತ್ತಮವಾಗಿದೆ' ಮತ್ತು 'ನಿಮ್ಮ ಪೀಳಿಗೆಯ ತಂಡ ಅಷ್ಟು ಉತ್ತಮವಾಗಿರಲಿಲ್ಲ' ಎಂಬ ರೀತಿಯಲ್ಲಿಯೇ ಇರುತ್ತದೆ. ನಾನು ಅಂತಹ ಬಹಳಷ್ಟು ಚರ್ಚೆಗಳನ್ನು ನೋಡಿದ್ದೇನೆ' ಎಂದು ಹೇಳಿದರು.

'ಕ್ರೀಡಾಂಗಣದಲ್ಲಿ ಅಂಜುಮ್ ಚೋಪ್ರಾ, ಮಿಥಾಲಿ ರಾಜ್ ಇದ್ದರು. ಮಹಿಳಾ ತಂಡವು ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸುವ ಮೂಲಕ, ಅವರು ಒಂದು ಕಾಲದಲ್ಲಿ ನೆಟ್ಟ ಮತ್ತು ಪೋಷಿಸಿದ ಬೀಜಗಳು ಇಂದು ವಿಜೇತರಾಗಿ ಎತ್ತರವಾಗಿ ನಿಂತಿವೆ ಎಂಬುದನ್ನು ಸಂತೋಷದಿಂದ ನೋಡಲು ಅವಕಾಶ ಮಾಡಿಕೊಟ್ಟರು. ಅದು ಆಕರ್ಷಕವಾಗಿದೆ, ನಂಬಲಾಗದಷ್ಟು ಒಳ್ಳೆಯದು ಎಂದು ನನಗೆ ಅನ್ನಿಸಿತು. ಏಕೆಂದರೆ, ಭಾರತೀಯ ಮಹಿಳೆಯರು ಸಾಧಿಸಿದ ಈ ಗೆಲುವು - ಇಂದು ಒಮ್ಮೆಲೆ ಬಂದಿದ್ದಲ್ಲ. ಇದು 25 ವರ್ಷಗಳ ಕೆಲಸದ ಫಲಿತಾಂಶ, ಬಹುಶಃ ಎರಡು ಅಥವಾ ಮೂರು ದಶಕಗಳೂ ಸಹ' ಎಂದರು.

ಈ ಸ್ಮರಣೀಯ ಗೆಲುವಿನೊಂದಿಗೆ, ಭಾರತ ತಂಡವು ಈಗ ಪುರುಷ ಮತ್ತು ಮಹಿಳಾ ಕ್ರಿಕೆಟ್ ಎರಡರಲ್ಲೂ ಮೂರು ಏಕದಿನ ವಿಶ್ವಕಪ್ ಟ್ರೋಫಿಗಳನ್ನು ಗೆದ್ದಿದೆ. ಮೊದಲು 1983 ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡವು ಮನೆಗೆ ತಂದಿತು. ಎಂಎಸ್ ಧೋನಿ ನೇತೃತ್ವದಲ್ಲಿ ಭಾರತವು ತವರು ನೆಲದಲ್ಲಿ ಎರಡನೇ ಟ್ರೋಫಿ ಪಡೆಯಿತು. ಇದೀಗ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವು ತವರು ನೆಲದಲ್ಲಿ ಮೂರನೇ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ಭಾರತವು ಎರಡು ಟಿ20 ವಿಶ್ವಕಪ್ ಪ್ರಶಸ್ತಿಗಳನ್ನು (2007, 2024) ಮತ್ತು ಎರಡು ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗಳನ್ನು (2013, 2025) ಹೊಂದಿದೆ.

39 ವರ್ಷದ ಅಶ್ವಿನ್ ಪ್ರಕಾರ, ಈ ಪ್ರಸಿದ್ಧ ಗೆಲುವು ಯುವತಿಯರು ಕ್ರಿಕೆಟ್ ಅನ್ನು ವೃತ್ತಿಜೀವನದ ಗಂಭೀರ ಆಯ್ಕೆಯಾಗಿ ತೆಗೆದುಕೊಳ್ಳಲು ಮತ್ತು ಭಾರತದಲ್ಲಿ ಮಹಿಳಾ ಕ್ರಿಕೆಟ್‌ನೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಬದಲಾಯಿಸಲು ಪ್ರೇರೇಪಿಸುತ್ತದೆ ಎಂದು ಹೇಳಿದರು.

'ಇದು ನಾವು ಪಾಲ್ಗೊಂಡಿದ್ದ ಯಾವುದೇ ವಿಶ್ವಕಪ್ ಮತ್ತು ಗೆದ್ದಿರುವ ಯಾವುದೇ ವಿಶ್ವಕಪ್‌ಗಿಂತ ದೊಡ್ಡ ಮತ್ತು ಅಗಾಧ ಸಾಧನೆ ಎಂದು ನಾನು ಹೇಳುತ್ತೇನೆ. ಏಕೆಂದರೆ, ಇದು ಹುಡುಗಿಯರನ್ನು ಕ್ರಿಕೆಟ್ ಆಟವನ್ನು ಅಭ್ಯಾಸ ಮಾಡಲು ಮತ್ತು ಕ್ರೀಡೆಯನ್ನು ಗಂಭೀರವಾಗಿ ವೃತ್ತಿಜೀವನದ ಆಯ್ಕೆಯಾಗಿ ತೆಗೆದುಕೊಳ್ಳಲು ಕರೆತರುವ ಸಾಮರ್ಥ್ಯವನ್ನು ಹೊಂದಿದೆ. ಇದು ಭಾರತೀಯ ಮಹಿಳೆಯರು ಮತ್ತು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಸಂಬಂಧಿಸಿದ ಪ್ರತಿಯೊಬ್ಬರ ಮನಸ್ಥಿತಿ ಮತ್ತು ಕಂಡೀಷನಿಂಗ್ ಅನ್ನು ಬದಲಾಯಿಸಲಿದೆ' ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಾರತೀಯ ಸೇನೆ ಸಹ ಮೇಲ್ಜಾತಿಯವರಿಂದ ನಿಯಂತ್ರಿಸಲ್ಪಡುತ್ತದೆ': ರಾಹುಲ್ ಗಾಂಧಿಯಿಂದ ಹೊಸ ವಿವಾದ

ಏಷ್ಯಾ ಕಪ್ ವಿವಾದ: ಪಾಕ್ ಕ್ರಿಕೆಟಿಗ ಹ್ಯಾರಿಸ್ ರೌಫ್‌ಗೆ ಐಸಿಸಿ ಕಠಿಣ ಶಿಕ್ಷೆ, ಸೂರ್ಯಕುಮಾರ್ ಯಾದವ್‌ಗೆ ದಂಡ

ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ನಿರ್ಬಂಧ: ತಡೆಯಾಜ್ಞೆ ವಿರೋಧಿಸಿ ಸರ್ಕಾರದ ಮೇಲ್ಮನವಿ; 'ಆದೇಶ ಕಾಯ್ದಿರಿಸಿದ' ಹೈಕೋರ್ಟ್

Bihar Poll: ಮೊದಲ ಹಂತದ ಮತದಾನ, ಪ್ರಚಾರಕ್ಕೆ ತೆರೆ, ಪ್ರಧಾನಿ ಮೋದಿ ನಕಲಿ ಪದವಿ ಹೊಂದಿದ್ದಾರೆ- ರಾಹುಲ್ ಆರೋಪ

ಕೊನೆಗೆ ನಿಮಗೆ 'ಚಹಾ ಕಪ್' ಗತಿ: ವಿಶ್ವಕಪ್ ಗೆದ್ದ ನಂತರ Pakistan ಕಾಲೆಳೆದು ಸೇಡು ತೀರಿಸಿಕೊಂಡ ಹರ್ಮನ್‌ಪ್ರೀತ್ ಕೌರ್; Video ವೈರಲ್!

SCROLL FOR NEXT