ಟೀಂ ಇಂಡಿಯಾ ಬ್ಯಾಟರ್ಗಳು 
ಕ್ರಿಕೆಟ್

ಟೆಸ್ಟ್‌ನಲ್ಲಿ ಮತ್ತೆ ಮುಗ್ಗರಿಸಿದ ಭಾರತ: ಯುವ ಬ್ಯಾಟರ್‌ಗಳ ಪೆವಿಲಿಯನ್ ಪರೇಡ್; 201 ರನ್‌ ಆಲೌಟ್, ಆಫ್ರಿಕಾ 288 ರನ್ ಮುನ್ನಡೆ!

ಗುವಾಹಟಿ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 201 ರನ್‌ಗಳಿಗೆ ಆಲೌಟ್ ಆಗಿದ್ದು, ದಕ್ಷಿಣ ಆಫ್ರಿಕಾ 288 ರನ್‌ಗಳ ಮುನ್ನಡೆ ಸಾಧಿಸಿದೆ. ದಕ್ಷಿಣ ಆಫ್ರಿಕಾ ವೇಗಿ ಮಾರ್ಕೊ ಜಾನ್ಸೆನ್ 6 ವಿಕೆಟ್‌ಗಳನ್ನು ಕಬಳಿಸಿದರು.

ಗುವಾಹಟಿ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 201 ರನ್‌ಗಳಿಗೆ ಆಲೌಟ್ ಆಗಿದ್ದು, ದಕ್ಷಿಣ ಆಫ್ರಿಕಾ 288 ರನ್‌ಗಳ ಮುನ್ನಡೆ ಸಾಧಿಸಿದೆ. ದಕ್ಷಿಣ ಆಫ್ರಿಕಾ ವೇಗಿ ಮಾರ್ಕೊ ಜಾನ್ಸೆನ್ 6 ವಿಕೆಟ್‌ಗಳನ್ನು ಕಬಳಿಸಿದ್ದು ಭಾರತೀಯ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಯಶಸ್ವಿ ಜೈಸ್ವಾಲ್ 58 ರನ್ ಹಾಗೂ ವಾಷಿಂಗ್ಟನ್ ಸುಂದರ್ 48 ರನ್ ಗಳಿಸಿದ್ದು ಬಿಟ್ಟರೆ ಮತ್ಯಾರು ರನ್ ಕಲೆಹಾಕಲು ಸಾಧ್ಯವಾಗಿಲ್ಲ.

ಸೋಮವಾರ ಪಂದ್ಯದ ಮೂರನೇ ದಿನದಂದು ಭಾರತ 9/0ಕ್ಕೆ ಆಟ ಪುನರಾರಂಭಿಸಿತು. ತಂಡವು 95 ರನ್ ಗಳಿಗೆ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಆರಂಭಿಕರು ಔಟಾದ ನಂತರ ತಂಡ 122 ರನ್ ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸುಂದರ್ ಮತ್ತು ಕುಲದೀಪ್ ಯಾದವ್ ಭಾರತವನ್ನು 200ಕ್ಕೆ ಕೊಂಡೊಯ್ದರು.

ಭಾರತ 27 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭವನ್ನು ನೀಡಿತ್ತು. ತಂಡವು 95 ರನ್‌ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು. ಆದರೆ, ನಂತರ ಕೇವಲ 27 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಯಶಸ್ವಿ ತಂಡ 95 ರನ್‌ ಗಳಿಸಿದ್ದಾಗ ಯಶಸ್ವಿ ಜೈಸ್ವಾಲ್ ಔಟಾಗಿದ್ದು ನಂತರ ಸುದರ್ಶನ್ ಸಹ ಔಟಾದರು. ಜುರೆಲ್ 102 ರನ್‌ ಇದ್ದಾಗ ಪಂತ್ 105 ರನ್‌, ನಿತೀಶ್ 119 ರನ್‌ ಮತ್ತು ಜಡೇಜಾ 122 ರನ್‌ ಇದ್ದಾಗ ಔಟಾದರು.

ಬರ್ಸಪರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಂದ್ಯದ ಎರಡನೇ ದಿನವಾದ ಭಾನುವಾರ, ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 489 ರನ್‌ಗಳಿಗೆ ಆಲೌಟ್ ಆಗಿತ್ತು. ಇದೀಗ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದೆ. ಮೊದಲ ಓವರ್ ನಲ್ಲೇ ತಂಡ 9 ರನ್ ಗಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಟ ಧರ್ಮೇಂದ್ರ, ಬಾಲಿವುಡ್ ನ 'ಹೀ-ಮ್ಯಾನ್' ಇನ್ನಿಲ್ಲ

ಭಾರತದ ಮೇಲೆ ಫಾಲೋ-ಆನ್ ಹೇರದೇ ಇದ್ದಿದ್ದೇಕೆ? ಕೈ-ಸನ್ನೆ ಮೂಲಕ Team India ಗೆ ಬವುಮಾ ಕೊಟ್ಟ ಸಂದೇಶ ಏನು?

ಆಪ್ತ ಸ್ನೇಹಿತ ಅಂಬರೀಶ್ ಪುಣ್ಯಸ್ಮರಣೆ ದಿನದಂದೇ Bollywood ನಟ ಧರ್ಮೇಂದ್ರ ನಿಧನ: ಸುಮಲತಾ ಸಂತಾಪ!

Bengaluru ATM Van Robbery: ದರೋಡೆ ಮಾಡಿದ್ದು 7.11 ಕೋಟಿ, ಖರ್ಚಾಗಿದ್ದು ಕೇವಲ 1 ಲಕ್ಷ! ಕಳ್ಳರ ಜರ್ನಿ ಹೇಗಿತ್ತು?

'ಭಯ್ಯಾ ಅನ್ನಬೇಡಿ, ಆ್ಯಟಿಟ್ಯೂಡ್ ನಿಮ್ಮ ಜೇಬಲ್ಲಿಡಿ': ಪ್ರಯಾಣಿಕರಿಗೆ ಬೆಂಗಳೂರು ಕ್ಯಾಬ್ ಚಾಲಕನ 6 ರೂಲ್ಸ್; ಪೋಸ್ಟ್ ವೈರಲ್!

SCROLL FOR NEXT