ರೋಹಿತ್ ಶರ್ಮಾ - ವಿರಾಟ್ ಕೊಹ್ಲಿ 
ಕ್ರಿಕೆಟ್

'ರೋ-ಕೊ' ಇಲ್ಲದೆ ಭಾರತ 2027ರ ವಿಶ್ವಕಪ್ ಆಡಲು ಸಾಧ್ಯವಿಲ್ಲ, ವಯಸ್ಸನ್ನು ಮಧ್ಯೆ ತರಬೇಡಿ; ಆಯ್ಕೆದಾರರಿಗೆ ಎಚ್ಚರಿಕೆ

ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 8 ರನ್‌ಗಳಿಗೆ ಔಟಾದ ನಂತರ, ರೋಹಿತ್ ಶರ್ಮಾ ಅಡಿಲೇಡ್‌ನಲ್ಲಿ ನಡೆದ ಮುಂದಿನ ಪಂದ್ಯದಲ್ಲಿ 73 ರನ್‌ ಗಳಿಸಿದರು. ಸಿಡ್ನಿಯಲ್ಲಿ ಅದ್ಭುತ ಶತಕ ಗಳಿಸಿದರು.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದೆ ಭಾರತ ತಂಡವು 2027ರ ಏಕದಿನ ವಿಶ್ವಕಪ್ ಆಡಲು ಸಾಧ್ಯವಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಆಯ್ಕೆದಾರ ಕೆ ಶ್ರೀಕಾಂತ್ ಹೇಳಿದ್ದಾರೆ. ಭಾರತ vs ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯದಲ್ಲಿ ಹಿಟ್‌ಮ್ಯಾನ್ ಭರ್ಜರಿ ಶತಕ ಮತ್ತು ವಿರಾಟ್ ಕೊಹ್ಲಿ ಅಜೇಯ 74 ರನ್ ಗಳಿಸಿದ ನಂತರ ಅವರ ಹೇಳಿಕೆಗಳು ಬಂದಿವೆ. 2027ರ ವಿಶ್ವಕಪ್‌ಗೆ ಭಾರತ ತಂಡದಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಹೊರಗಿಡುವ ಯೋಜನೆಗಳ ಬಗ್ಗೆ ಆಯ್ಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವೊಂದರಲ್ಲಿ ಶ್ರೀಕಾಂತ್, ರೋಹಿತ್ ಅವರ ಫಿಟ್‌ನೆಸ್‌ ಅನ್ನು ಹೊಗಳಿದರು. ರೋಹಿತ್ ಮತ್ತು ಕೊಹ್ಲಿ ಇಬ್ಬರೂ ವಿಶ್ವಕಪ್ ಟೂರ್ನಮೆಂಟ್ ಸಮಯಕ್ಕೆ 40 ವರ್ಷದ ಆಸುಪಾಸಿನಲ್ಲಿರುತ್ತಾರೆ ಎಂಬ ವಯಸ್ಸಿನ ಅಂಶವನ್ನು ತರಬೇಡಿ. ಅವರು ಸ್ಲಿಪ್‌ನಲ್ಲಿ ಚೆನ್ನಾಗಿ ಕ್ಯಾಚ್ ಹಿಡಿಯುತ್ತಿದ್ದರು ಮತ್ತು ಸಾಕಷ್ಟು ಫಿಟ್ ಆಗಿದ್ದರು ಎಂದರು.

'ರೋಹಿತ್ 2027ರ ವಿಶ್ವಕಪ್‌ ಆಡುವುದು ಖಚಿತ. ರೋಹಿತ್ ಮತ್ತು ವಿರಾಟ್ ಕೊಹ್ಲಿ ಇಲ್ಲದೆ ನಾವು ಆಡಲು ಸಾಧ್ಯವಿಲ್ಲ. ರೋಹಿತ್ ಶರ್ಮಾ 11 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಮತ್ತು ಸೂಪರ್ ಫಿಟ್ ಆಗಿ ಕಾಣುತ್ತಿದ್ದಾರೆ. ಟಚ್ ಗೇಮ್‌ನೊಂದಿಗೆ ಅದು ಹಳೆಯ ರೋಹಿತ್ ಶರ್ಮಾ ಆಗಿತ್ತು. ಅವರು (ರೋಹಿತ್) 40 ವರ್ಷಗಳನ್ನು ತಲುಪುತ್ತಿದ್ದಾರೆ ಎಂಬ ವಯಸ್ಸಿನ ಸಮಸ್ಯೆಯನ್ನು ತರಬೇಡಿ. ಅವರು ಫಿಟ್ ಆಗಿದ್ದಾರೆ, ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಾರೆ ಮತ್ತು ಸ್ಲಿಪ್‌ಗಳಲ್ಲಿ ಅದ್ಭುತ ಕ್ಯಾಚ್ ಹಿಡಿಯುತ್ತಾರೆ. ನಿಮಗೆ ಇನ್ನೇನು ಬೇಕು?' ಎಂದು ಶ್ರೀಕಾಂತ್ ಹೇಳಿದರು.

ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 8 ರನ್‌ಗಳಿಗೆ ಔಟಾದ ನಂತರ, ರೋಹಿತ್ ಶರ್ಮಾ ಅಡಿಲೇಡ್‌ನಲ್ಲಿ ನಡೆದ ಮುಂದಿನ ಪಂದ್ಯದಲ್ಲಿ 73 ರನ್‌ಗಳೊಂದಿಗೆ ಭರವಸೆಯ ಚಿಹ್ನೆಗಳನ್ನು ತೋರಿಸಿದರು. ನಂತರ ಅವರು ಸಿಡ್ನಿಯಲ್ಲಿ ಅದ್ಭುತ ಶತಕ ಗಳಿಸಿದರು ಮತ್ತು ಭಾರತವನ್ನು ಪಂದ್ಯದುದ್ದಕ್ಕೂ ಮುನ್ನಡೆಸಿದರು. ಈಮಧ್ಯೆ, ಮೊದಲೆರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ಕೊಹ್ಲಿ ಸಿಡ್ನಿಯಲ್ಲಿ ಅಜೇಯ 74 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾದರು.

'ನಾನು ಆಯ್ಕೆ ಸಮಿತಿಯ ಅಧ್ಯಕ್ಷನಾಗಿದ್ದರೆ, ಇವತ್ತು ಅವರ ಬಳಿಗೆ ಹೋಗಿ, '2027ರ ವಿಶ್ವಕಪ್‌ಗೆ ಫಿಟ್ ಆಗಿ ಮತ್ತು ನಮಗೆ ಟ್ರೋಫಿಯನ್ನು ಗೆದ್ದುಕೊಡಿ' ಎಂದು ಹೇಳುತ್ತಿದ್ದೆ' ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸ್ಫೋಟ ಪ್ರಕರಣದಲ್ಲಿ ಮೊದಲ ಬಂಧನ: i20 ಕಾರಿನ ಮಾಲೀಕ ಆಮಿರ್ Arrest; ಡಾ. ಉಮರ್ ಜೊತೆ ಸೇರಿ ದಾಳಿಗೆ ಸಂಚು!

ಬಾಗಲಕೋಟೆ: ರೈತರ ಟ್ರ್ಯಾಕ್ಟರ್​ಗಳಿಗೆ ಬೆಂಕಿ ಹಚ್ಚುತ್ತಿರುವ Video ವೈರಲ್; ಮೂರು FIR ದಾಖಲು

ಪಶ್ಚಿಮ ಬಂಗಾಳದ ರಾಜಭವನದಲ್ಲಿ ಶಸ್ತ್ರಾಸ್ತ್ರ ದಾಸ್ತಾನಿದೆ: ಟಿಎಂಸಿ ಸಂಸದನ ಆರೋಪಕ್ಕೆ ರಾಜ್ಯಪಾಲರ ಎಚ್ಚರಿಕೆ

1st test: ಭಾರತದ ಸೋಲಿಗೆ ಆ 'ಇಬ್ಬರೇ ಕಾರಣ': ಉಪ ನಾಯಕ ರಿಷಬ್ ಪಂತ್ ಹೇಳಿಕೆ

ದೆಹಲಿ ಸ್ಫೋಟಕ್ಕೆ 'Mother of Satan' ಬಾಂಬ್ ಬಳಕೆ ಸಾಧ್ಯತೆ: ಇದು ಎಷ್ಟು 'ವಿನಾಶಕಾರಿ' ತನಿಖಾಧಿಕಾರಿಗಳು ಹೇಳಿದ್ದೇನು?

SCROLL FOR NEXT