ಆರ್ ಸಿಬಿ ನಾಯಕ ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್ ಮತ್ತಿತರರು 
ಕ್ರಿಕೆಟ್

IPL 2026: ಇಲ್ಲಿಯವರೆಗೂ ನೋಡಿರದ RCBಯ funniest moment; ವಿಡಿಯೋ ವೈರಲ್

ಪಂದ್ಯದ ಟೆನ್ಷನ್ ಹೆಚ್ಚಾಗಿದ್ದಾಗ ಡ್ರಿಂಕ್ ಬ್ರೇಕ್ ನಲ್ಲಿ ಇದು ನಡೆದಿದೆ. ದಿನೇಶ್ ಕಾರ್ತಿಕ್, RCB ಅಂಪೈರ್ ಗಳು ಹಾಗೂ ಅಧಿಕಾರಿಗಳು ನಡುವಿನ ಕಾಮಿಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಬೆಂಗಳೂರು: ನಗರದ M.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ RCB vs CSK ಪಂದ್ಯ ಒಂದೊಳ್ಳೆ ಹಾಸ್ಯದ ಕ್ಷಣಕ್ಕೆ ಸಾಕ್ಷಿಯಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಡ್ರಿಂಕ್ ಬ್ರೇಕ್ ವೇಳೆ ದಿನೇಶ್ ಕಾರ್ತಿಕ್, RCB ಅಂಪೈರ್ ಗಳು ಹಾಗೂ ಅಧಿಕಾರಿಗಳು ನಡುವಿನ ಕಾಮಿಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹಿರಿಯ ಮೆಂಟರ್ ಆಗಿರುವ ದಿನೇಶ್ ಕಾರ್ತಿಕ್, "ಡ್ರಿಂಕ್ಸ್ ಮ್ಯಾನ್" ಆಗಿ ಕಾರ್ಯನಿರ್ವಹಿಸಿದ್ದು, ಬ್ಯಾಟರ್ ಗಳಾದ ರಜತ್ ಪಾಟಿದಾರ್ ಮತ್ತು ದೇವದತ್ ಪಡಿಕ್ಕಲ್ ಅವರಿಗೆ ನೀರನ್ನು ನೀಡಲು ಪಿಚ್‌ಗೆ ಓಡಿದಾಗ ಈ ಕಾಮಿಡಿ ನಡೆದಿದೆ.

ಆಗ ಪಾಟಿದಾರ್ ಅಥವಾ ಪಡಿಕ್ಕಲ್ ಬಾಟಲ್ ಪಡೆಯುವ ಮುನ್ನಾ ಅಧಿಕಾರಿ ಬಾಟಲಿ ಕಿತ್ತುಕೊಂಡು ನೀರು ಕುಡಿದು ಬಿಟ್ಟಿದ್ದಾರೆ. ಇದರಿಂದ ಕೊಂಚ ಬೇಸರಗೊಂಡಂತೆ ಕಂಡುಬಂದ ರಜತ್ ಪಾಟಿದಾರ್, ನೀರಿನ ಬಾಟಲಿ ಇಲ್ಲದಿರುವುದಕ್ಕೆ ಅಂಪೈರ್ ಜೊತೆಗೆ ಮಾತನಾಡಿದ್ದಾರೆ.

ಏನಾಗುತ್ತಿದೆ ಎಂದು ಆಟಗಾರರು ಪಾಟಿದಾರ್ ಸುತ್ತ ನೆರೆದಿದ್ದಾರೆ. ಬಳಿಕ ಕೂಡಲೇ ಅಂಪೈರ್ ನೀರಿನ ಬಾಟಲ್ ಕೊಟ್ಟಿದ್ದಾರೆ. ಆದರೆ, ಅಷ್ಟರಾಗಲೇ ಎಲ್ಲ ಡ್ಯಾಮೇಜ್ ನಡೆದಿತ್ತು.

ಪಿಚ್ ನಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದರಿಂದ ಆರ್ ಸಿಬಿ ಮುಖ್ಯ ತರಬೇತುದಾರ ಆ್ಯಂಡಿ ಪ್ಲವರ್ ಕೂಡಾ ಕಾಣಿಸಿಕೊಂಡಿದ್ದಾರೆ. ಆದರೆ ಏನು ಮಾತನಾಡಿದರು ಎಂಬುದು ಸ್ಪಷ್ಟವಾಗಿ ಕೇಳುತ್ತಿಲ್ಲ. ಆದರೆ ಪಾಟಿದಾರ್ ಬಾಡಿ ಲಾಂಗ್ವೆಂಜ್ ಎಲ್ಲಾವನ್ನೂ ಹೇಳುತ್ತಿದೆ.

ಅಂಪೈರ್ ಕಡೆಗೆ ಬರುವ ಪಾಟಿದಾರ್ ("hydration) ಕಳುವಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುವುದು ಕಂಡುಬಂದಿದೆ.

ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, IPL 2026 ರಲ್ಲಿ ಇಲ್ಲಿಯವರೆಗೂ ನೋಡಿರದ ಅತ್ಯಂತ ಕಾಮಿಡಿ ದೃಶ್ಯ ಎಂದು ಫ್ಯಾನ್ಸ್ ಎಂಜಾಯ್ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!