ವಿರಾಟ್ ಕೊಹ್ಲಿ, ಶುಭ್ ಮನ್ ಗಿಲ್ 
ಕ್ರಿಕೆಟ್

IPL 2026, RCB vs GT: ಮೊದಲ ಎಸೆತದಲ್ಲೇ ಜೀವದಾನ ಪಡೆದ ಕೊಹ್ಲಿ; ಶುಭ್ ಮನ್ ಗಿಲ್ ಮಹತ್ವದ ಹೇಳಿಕೆ!

ಇನ್ನೂ ಮೊದಲ ಎಸೆತದಲ್ಲೇ ಜೀವದಾನ ಪಡೆದ ಕೊಹ್ಲಿ ಕುರಿತು ಮಾತನಾಡಿದ ಶುಭ್ ಮನ್ ಗಿಲ್, ಅದರಿಂದಲೇ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಲು ಅವಕಾಶವಾಯಿತು ಎಂದು ಶುಭ್ ಮನ್ ಗಿಲ್ ಹೇಳಿದರು.

ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (2026) ನ 34 ನೇ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಐದು ವಿಕೆಟ್‌ಗಳ ಸೋಲಿನ ನಂತರ ಗುಜರಾತ್ ಟೈಟಾನ್ಸ್ ಮುಗ್ಗರಿಸಲು ಕಾರಣವೇನು ಎಂಬುದನ್ನು ಹೇಳುವುದರಲ್ಲಿ ಶುಭ್ ಮನ್ ಗಿಲ್ ಹಿಂಜರಿಯಲಿಲ್ಲ.

ಪಂದ್ಯದ ನಂತರ ಮಾತನಾಡಿದ ಶುಭ್ ಮನ್ ಗಿಲ್, 16 ರಿಂದ 19 ನೇ ಓವರ್‌ಗಳವರೆಗೆ, ಆ ಮೂರು ಓವರ್‌ಗಳಲ್ಲಿ ನಮಗೆ ಯಾವುದೇ ಬೌಂಡರಿ ಪಡೆಯಲು ಸಾಧ್ಯವಾಗಲಿಲ್ಲ. ಆ ಓವರ್‌ಗಳು ನಮಗೆ ನಿರ್ಣಾಯಕವಾಗಿದ್ದವು. ಪವರ್‌ಪ್ಲೇ ಕೊನೆಯಲ್ಲಿ ನಾವು ಉತ್ತಮ ಸ್ಥಿತಿಯಲ್ಲಿದ್ದೆವು. ಆಗ ವಿಕೆಟ್‌ಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂದು ಅವರು ಹೇಳಿದರು.

ಒಬ್ಬ ಬ್ಯಾಟ್ಸ್‌ಮನ್ ಶೂನ್ಯಕ್ಕೆ ಓಟಾದಾಗ ಅದು ಯಾವಾಗಲೂ ಫೀಲ್ಡರ್‌ಗೆ ಕಠಿಣವಾಗಿರುತ್ತದೆ. ಅದು ನೀವು ಆಟಕ್ಕೆ ಹೇಗೆ ಹಿಂತಿರುಗುತ್ತೀರಿ ಎಂಬುದಾಗಿರುತ್ತದೆ. ನಮಗೆ ನಮ್ಮದೇ ಆದ ಕ್ಷಣಗಳು ಇದ್ದವು. ಆದರೆ ನಾವು ಸ್ಥಿರವಾಗಿ ಸರಿಯಾಗಿ ರನ್ ಹೊಡೆಯಲು ಸಾಧ್ಯವಾಗಲಿಲ್ಲ, ಅದು ಮುಖ್ಯವಾಗಿತ್ತು. ಆದರೆ ಅವರು ಮಧ್ಯಮ ಓವರ್‌ಗಳಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದರು ಎಂದು ತಿಳಿಸಿದರು.

ಇನ್ನೂ ಮೊದಲ ಎಸೆತದಲ್ಲೇ ಜೀವದಾನ ಪಡೆದ ಕೊಹ್ಲಿ ಕುರಿತು ಮಾತನಾಡಿದ ಶುಭ್ ಮನ್ ಗಿಲ್, ಅದರಿಂದಲೇ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಲು ಅವಕಾಶವಾಯಿತು. ಅನುಭವಿ ಆಟಗಾರ 44 ಎಸೆತಗಳಲ್ಲಿ 81 ರನ್ ಗಳಿಸುವ ಮೂಲಕ ಗುಜರಾತ್ ಟೈಟಾನ್ಸ್ ಸೋಲಿಗೆ ಕಾರಣವಾದರು.

ಅವರೊಂದಿಗೆ ದೇವದತ್ತ್ ಪಡಿಕ್ಕಲ್ 27 ಎಸೆತಗಳಲ್ಲಿ 55 ರನ್ ಸಿಡಿಸುವ ಮೂಲಕ ಮಧ್ಯಮ ಓವರ್ ಗಳಲ್ಲಿ ಆಕ್ರಮಣಕಾರಿ ಪ್ರದರ್ಶನ ನೀಡಿದರು. ಗುಜರಾತ್ ಬೌಲರ್ ಗಳು ನಿಯಂತ್ರಣ ಮಾಡಲು ಯತ್ನಿಸಿದರಾದರೂ ಅವರಿಬ್ಬರ ಶತಕದ ಜೊತೆಯಾಟ ಆರ್ ಸಿಬಿ ಗೆಲ್ಲುವಂತೆ ಮಾಡಿತು ಎಂದು ಹೇಳಿದರು.

ಪಿಚ್ ಕೂಡಾ ಆರ್ ಸಿಬಿ ಗೆಲ್ಲುವಲ್ಲಿ ನೆರವಾಗಿದೆ. ನಿರ್ದಿಷ್ಟವಾಗಿ ಕೃಣಾಲ್ ಪಾಂಡ್ಯ ಬೌಲಿಂಗ್ ಮಾಡುವಾಗ ಅದು ಸ್ವಲ್ಪ ಹಿಡಿತ ಸಾಧಿಸುತ್ತಿತ್ತು. ಕೆಲವು ವಿಕೆಟ್ ಪಡೆದಿದ್ದರೆ ಗೆಲುವು ನಮ್ಮದಾಗಿರುತಿತ್ತು ಎಂದು ಶುಭ್ ಮನ್ ಗಿಲ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BJP ಸೇರಿದ 7 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಉಪರಾಷ್ಟ್ರಪತಿಗೆ AAP ಪತ್ರ: ಸಂಜಯ್ ಸಿಂಗ್

ಸುಧಾಕರ್ ಗಂಭೀರ: 'ಪ್ರಜ್ಞೆ ಇಲ್ಲ ಅಂದ್ರೆ ಕಸಿ ಮಾಡಲ್ಲ': ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ, ಹೇಳಿದ್ದೇನು?

ರಹಸ್ಯ 'ಮಾನವ ಸರಪಳಿ' ಮೂಲಕ ಇರಾನ್ ಆಡಳಿತ ನಡೆಸುತ್ತಿದ್ದಾರೆ ಮೊಜ್ತಬಾ ಖಮೇನಿ!

'ರಾಷ್ಟ್ರೀಯ ಶರಣಾಗತಿ ಸಂಘ'; ಬಿಜೆಪಿ ನಾಯಕ ರಾಮ್ ಮಾಧವ್ ರಿಂದ RSS ನಿಜವಾದ ಬಣ್ಣ ಬಯಲು

ಒಳ್ಳೆಯವರ್ಯಾರೂ Arvind Kejriwal ಜೊತೆ ಕೆಲಸ ಮಾಡಲು ಸಾಧ್ಯವೇ ಇಲ್ಲ: ರಾಘವ್ ಚಡ್ಡಾ BJP ಸೇರ್ಪಡೆ ಕುರಿತು Swati Maliwal

SCROLL FOR NEXT