ಸುನಿಲ್ ಗವಾಸ್ಕರ್ 
ಕ್ರಿಕೆಟ್

ಏಕದಿನ ವಿಶ್ವಕಪ್‌ 2027ಕ್ಕೆ ಭಾರತದ ತಂಡ ಹೆಸರಿಸಿದ ಸುನೀಲ್ ಗವಾಸ್ಕರ್; 10ಕ್ಕೆ 9 ಅಂಕ ನೀಡಿದ ಆಕಾಶ್ ಚೋಪ್ರಾ!

ಇತ್ತೀಚೆಗೆ, ರವಿಚಂದ್ರನ್ ಅಶ್ವಿನ್ ಅವರು ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾ ತಂಡವನ್ನು ಹೆಸರಿಸಿದ್ದು, ತಮ್ಮ ತಂಡದಲ್ಲಿ ಭುವನೇಶ್ವರ್ ಕುಮಾರ್ ಅವರಿಗೆ ಅವಕಾಶ ನೀಡಿದ್ದರು.

2027ರ ಏಕದಿನ ವಿಶ್ವಕಪ್‌ಗೆ ಇನ್ನೂ 14 ತಿಂಗಳು ಬಾಕಿಯಿದೆ. ಆದರೆ, ಈ ಪ್ರಮುಖ ಟೂರ್ನಿಗೆ ಭಾರತೀಯ ತಂಡದ ಆಯ್ಕೆ ಹಾಗೂ ಸಂಯೋಜನೆಗೆ ಸಂಬಂಧಿಸಿದ ಲೆಕ್ಕಾಚಾರಗಳು ಮತ್ತು ಊಹಾಪೋಹಗಳು ಈಗಾಗಲೇ ಆರಂಭವಾಗಿವೆ. 2011ರ ಆವೃತ್ತಿಯ ನಂತರ ಭಾರತವು ಏಕದಿನ ವಿಶ್ವಕಪ್ ಅನ್ನು ಗೆದ್ದಿಲ್ಲ. 2023ರಲ್ಲಿ ನಡೆದ ಕಳೆದ ಏಕದಿನ ವಿಶ್ವಕಪ್‌ನಲ್ಲಿ ಭಾರತವು ರನ್ನರ್-ಅಪ್ ಆಗಿ ಹೊರಹೊಮ್ಮಿತ್ತು. ಸದ್ಯ ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡವಾಗಿರುವುದರಿಂದ, 2027ರಲ್ಲಿ ಶುಭಮನ್ ಗಿಲ್ ನೇತೃತ್ವದ ತಂಡದ ಮೇಲೆ ಹೆಚ್ಚಿನ ನಿರೀಕ್ಷೆಗಳಿರುತ್ತವೆ.

ಭಾರತದ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ಅವರು ಇತ್ತೀಚೆಗೆ ಭಾರತದ ದಂತಕಥೆ ಸುನೀಲ್ ಗವಾಸ್ಕರ್ ಆಯ್ಕೆ ಮಾಡಿದ ಸಂಭಾವ್ಯ ತಂಡವನ್ನು ವಿಶ್ಲೇಷಿಸಿದ್ದಾರೆ.

'ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್- ಇವರು ಅಗ್ರ ಐವರು ಆಟಗಾರರು. ಚಾಂಪಿಯನ್ಸ್ ಟ್ರೋಫಿಯಲ್ಲಿದ್ದ ಅದೇ ಅಗ್ರ ಐವರ ತಂಡವಿದು, ಅಂದರೆ ಅದನ್ನು ಹಾಗೆಯೇ ಮುಂದುವರಿಸಲಾಗಿದೆ. 15 ಸದಸ್ಯರ ತಂಡದಲ್ಲಿ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲಾಗಿದೆ. ಸದ್ಯಕ್ಕೆ ಅವರು ಉತ್ತಮವಾಗಿ ರನ್ ಗಳಿಸುತ್ತಿದ್ದಾರೆ ಮತ್ತು ಈ ಮಾದರಿಯ ಆಟಕ್ಕೆ ಸಿದ್ಧರಾಗಿದ್ದಾರೆ. ನಂತರ ಹಾರ್ದಿಕ್ ಪಾಂಡ್ಯ ಮತ್ತು ನಿತೀಶ್ ಕುಮಾರ್ ರೆಡ್ಡಿ ಇದ್ದಾರೆ; ಇವರು ಬಹುತೇಕ ಒಂದಕ್ಕೊಂದು ಪರ್ಯಾಯವೆನ್ನಬಹುದಾದ (like-for-like) ಆಟಗಾರರು. ಇದು ನನಗೆ ಇಷ್ಟವಾಯಿತು. ಬಹುಶಃ ನೀವು ಸ್ಪಿನ್-ಬೌಲಿಂಗ್ ಆಲ್‌ರೌಂಡರ್‌ಗಳನ್ನು ಆಡಿಸಲು ಸಾಧ್ಯವಾಗದಿರಬಹುದು. ಇಲ್ಲಿ ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರ ವಿಷಯ ಬರುತ್ತದೆ. ಇಬ್ಬರೂ ಎಡಗೈ ಸ್ಪಿನ್ನರ್‌ಗಳು ಮತ್ತು ಅಪಾರ ಅನುಭವ ಹೊಂದಿರುವವರು. ಇವರೂ ಕೂಡ ಪರಸ್ಪರ ಪರ್ಯಾಯ ಆಟಗಾರರು. ಸನ್ನಿ ಸರ್ ಆಯ್ಕೆ ಮಾಡಿದ ನಾಲ್ಕೂ ಆಲ್‌ರೌಂಡರ್‌ಗಳು ಒಂದಕ್ಕೊಂದು ಪರ್ಯಾಯವಾಗಿರುವಂತೆಯೇ ಇದ್ದಾರೆ. ಇದು ಅರ್ಥಪೂರ್ಣವಾಗಿದೆ' ಎಂದು ಆಕಾಶ್ ಚೋಪ್ರಾ ವಿಡಿಯೋವೊಂದರಲ್ಲಿ ಹೇಳಿದರು.

'ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಇದ್ದಾರೆ. ಹರ್ಷಿತ್ ರಾಣಾ ಅವರು ಬ್ಯಾಟಿಂಗ್ ಕೂಡ ಮಾಡಬಲ್ಲ ವೇಗದ ಬೌಲರ್ ಆಗಿದ್ದು, ತಂಡಕ್ಕೆ ಒಂದು ಹೆಚ್ಚುವರಿ ಆಯ್ಕೆಯನ್ನು ಒದಗಿಸುತ್ತಾರೆ. ಅರ್ಶದೀಪ್ ಸಿಂಗ್ ಕೂಡ ಇದ್ದಾರೆ - ಎಡಗೈ ವೇಗದ ಬೌಲರ್ ತಂಡದಲ್ಲಿರುವುದು ಒಳ್ಳೆಯ ವಿಷಯ. ಇದು 10ಕ್ಕೆ 8.5 ಅಥವಾ 9 ರಷ್ಟು ಬಲವಾದ ತಂಡವಾಗಿದೆ. ಅಂತಿಮವಾಗಿ ಆಯ್ಕೆಯಾಗಲಿರುವ ತಂಡಕ್ಕೆ ಇದು ಬಹಳ ಹತ್ತಿರದಲ್ಲಿದೆ ಎಂದು ನಾನು ಭಾವಿಸುತ್ತೇನೆ' ಎಂದರು.

ಇತ್ತೀಚೆಗೆ, ರವಿಚಂದ್ರನ್ ಅಶ್ವಿನ್ ಅವರು ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾ ತಂಡವನ್ನು ಹೆಸರಿಸಿದ್ದು, ತಮ್ಮ ತಂಡದಲ್ಲಿ ಭುವನೇಶ್ವರ್ ಕುಮಾರ್ ಅವರಿಗೆ ಅವಕಾಶ ನೀಡಿದ್ದರು. ಆದಾಗ್ಯೂ, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಅವರಂತಹ ಆಟಗಾರರ ವಿಷಯಕ್ಕೆ ಬಂದಾಗ, ನಿರ್ಧಾರವು ಯಾವುದೇ ಕಡೆಗೂ ವಾಲಬಹುದು ಎಂದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

2013ರ ಅತ್ಯಾಚಾರ ಪ್ರಕರಣ: ‘Tehelka’ ಮಾಜಿ ಸಂಪಾದಕ ತರುಣ್ ತೇಜಪಾಲ್ ದೋಷಿ; ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು..!

"ಪ್ರಧಾನಿ ಮೋದಿಗೆ ಅಷ್ಟೊಂದು ತಲೆಬಾಗಬೇಡಿ": Instagram ಖಾತೆ ನಿರ್ಬಂಧ ಬೆನ್ನಲ್ಲೇ Meta ವಿರುದ್ಧ ಕೇಜ್ರಿವಾಲ್ ಆಕ್ರೋಶ..!

ಹಾರ್ಮುಜ್ ಜಲಸಂಧಿ ಒಪ್ಪಂದ ಸನ್ನಿಹಿತ, ಆದರೆ ಯಾವುದಾದರೊಂದು ದೇಶ ತನ್ನ ನಿಲುವಿನಲ್ಲಿ ಸಡಿಲಿಕೆ ತೋರಿಸಬೇಕು: ಇರಾನ್-ಯುಎಸ್

Mojtaba Khamenei ಎಲ್ಲಿದ್ದಾರೆ? ರಹಸ್ಯ ತಾಣದಲ್ಲಿ ಪರಮೋಚ್ಛ ನಾಯಕ; ಅವರ ಉಪಸ್ಥಿತಿಯೇ ನಮ್ಮ ಧೈರ್ಯ ಎಂದ Iran ಅಧ್ಯಕ್ಷ

ಅಸಮಾಧಾನಿತ ಶಾಸಕರ ಸಮಸ್ಯೆ ಆಲಿಸಿದ್ದೇವೆ, ನಾವೆಲ್ಲಾ ಒಂದು ಕುಟುಂಬ- ಸುರ್ಜೆವಾಲ; ಸಚಿವ ಸ್ಥಾನ ಹೊರತಾಗಿ ಬೇರೆ ಏನು ಕೊಟ್ಟರೂ ಒಪ್ಪಲ್ಲ- ಎಂ ಕೃಷ್ಣಪ್ಪ