ಭಾರತ ಮತ್ತು ಪಾಕಿಸ್ತಾನ 
ಕ್ರಿಕೆಟ್

ಐಸಿಸಿ ಟಿ20 ವಿಶ್ವಕಪ್ 2026: ಟೂರ್ನಿ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ 2 ಅಂಕ, ಆದ್ರೆ ಷರತ್ತು ಅನ್ವಯ!

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಗ ಬಾಂಗ್ಲಾದೇಶವನ್ನು ಎತ್ತಿಕಟ್ಟಿದ್ದ ಪಾಕಿಸ್ತಾನ ಇದೀಗ ತಾನೇ ಭಾರತದ ವಿರುದ್ಧ ಆಡುವುದಿಲ್ಲ ಎಂದು ಪಟ್ಟು ಹಿಡಿದಿದೆ.

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಸಾಕಷ್ಟು ಸುದ್ದಿಗೆ ಗ್ರಾಸವಾಗುತ್ತಿದ್ದು, ಪಾಕಿಸ್ತಾನ ಕೈಗೊಂಡ ನಿರ್ಣಯದಿಂದಾಗಿ ಭಾರತ ತಂಡಕ್ಕೆ ಟೂರ್ನಿ ಆರಂಭಕ್ಕೂ ಮುನ್ನವೇ 2 ಅಂಕ ದೊರೆಯುವ ಸಾಧ್ಯತೆ ಇದೆ.

ಹೌದು.. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಗ ಬಾಂಗ್ಲಾದೇಶವನ್ನು ಎತ್ತಿಕಟ್ಟಿದ್ದ ಪಾಕಿಸ್ತಾನ ಇದೀಗ ತಾನೇ ಭಾರತದ ವಿರುದ್ಧ ಆಡುವುದಿಲ್ಲ ಎಂದು ಪಟ್ಟು ಹಿಡಿದಿದೆ.

ಪಾಕಿಸ್ತಾನ ತಂಡದ ಈ ಹಠಮಾರಿ ವರ್ತನೆ ಅದು ಭಾರಿ ಬೆಲೆಯನ್ನೇ ತೆರುವ ಸಾಧ್ಯತೆ ಇದ್ದು, 2 ಅಂಕವನ್ನು ಪಂದ್ಯವನ್ನೇ ಆಡದೇ ಕಳೆದುಕೊಂಡಂತಾಗಿದೆ.

ಭಾರತದ ವಿರುದ್ಧ ಫೆಬ್ರವರಿ 15ರಂದು ನಡೆಯಲಿರುವ ಪಂದ್ಯ ನಿಷೇಧಿಸುವ ಮೂಲಕ ಟೀಂ ಇಂಡಿಯಾಗೆ 2 ಅಂಕ ನೀಡುವಂತಾಗಿದೆ. ಏತನ್ಮಧ್ಯೆ, ಈ ಹಿಂದೆ ವರದಿ ಮಾಡಿದಂತೆ ಬಹಿಷ್ಕಾರದ ನಿರ್ಧಾರವು ಐಸಿಸಿ ದೇಶದ ಮೇಲೆ ಕಠಿಣ ಶಿಕ್ಷೆಯನ್ನು ವಿಧಿಸಬಹುದು.

ಷರತ್ತು ಅನ್ವಯ!

ಇನ್ನು ಪಾಕಿಸ್ತಾನ ಭಾರತದ ವಿರುದ್ಧ ಪಂದ್ಯವನ್ನು ನಿಷೇಧಿಸುವ ಮೂಲಕ 2 ಅಂಕ ಕಳೆದುಕೊಂಡಿದೆಯಾದರೂ, ಭಾರತ ಈ 2 ಅಂಕಗಳನ್ನು ಗಳಿಸಲು ಷರತ್ತು ಅನ್ವಯವಾಗುತ್ತದೆ. ಅದರಂತೆ ಫೆಬ್ರವರಿ 15ರಂದು ನಡೆಯಲಿರುವ ಪಂದ್ಯಕ್ಕಾಗಿ ಭಾರತ ತಂಡ ಶ್ರೀಲಂಕಾಗೆ ಪಯಣ ಬೆಳೆಸಬೇಕಿದೆ. ಶ್ರೀಲಂಕಾಗೆ ಪ್ರಯಾಣಿಸಿದರೆ ಮಾತ್ರ ಭಾರತ ತಂಡಕ್ಕೆ ಈ 2 ಅಂಕ ಸಿಗಲಿದೆ ಎಂದು ಹೇಳಲಾಗಿದೆ.

ಅಂದಹಾಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ, ನಮೀಬಿಯಾ, ನೆದರ್‌ಲ್ಯಾಂಡ್ಸ್ ಮತ್ತು ಯುಎಸ್‌ಎ ಜೊತೆಗೆ ಪಾಕಿಸ್ತಾನ 'ಎ' ಗುಂಪಿನಲ್ಲಿದ್ದು, ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.

ಶ್ರೀಲಂಕಾ ತಂಡವು ಭಾರತದೊಂದಿಗೆ ಟೂರ್ನಿಯ ಸಹ-ಆತಿಥೇಯ ರಾಷ್ಟ್ರವೂ ಆಗಿದೆ. ಫೆಬ್ರವರಿ 7 ರಂದು ನೆದರ್‌ಲ್ಯಾಂಡ್ಸ್ ವಿರುದ್ಧ ಪಾಕಿಸ್ತಾನ ತನ್ನ ಅಭಿಯಾನವನ್ನು ಆರಂಭಿಸಲಿದೆ. ನಂತರ ಫೆಬ್ರವರಿ 10 ರಂದು ಯುಎಸ್‌ಎ ವಿರುದ್ಧ ಮತ್ತು ಫೆಬ್ರವರಿ 18 ರಂದು ನಮೀಬಿಯಾ ವಿರುದ್ಧ ಪಾಕಿಸ್ತಾನ ಸೆಣಸಲಿದೆ.

ತಿರುಗುಬಾಣವಾಯ್ತ ಪಾಕಿಗಳ ತಂತ್ರ!

ಪಿಸಿಬಿಯ ಈ ನಿರ್ಧಾರದಿಂದಾಗಿ ಪಾಕಿಸ್ತಾನ ಗುಂಪು ಹಂತದಲ್ಲಿ ಎರಡು ಅಂಕಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಯಾವುದೇ ತಂಡವು ನಿಗದಿಪಡಿಸಿದ ಪಂದ್ಯವನ್ನು ಆಡಲು ನಿರಾಕರಿಸಿದರೆ, ಎದುರಾಳಿ ತಂಡಕ್ಕೆ 2 ಅಂಕಗಳನ್ನು ನೀಡಲಾಗುತ್ತದೆ. ಇದರರ್ಥ ಟೀಂ ಇಂಡಿಯಾಕ್ಕೆ ಆಡದೆಯೇ ಎರಡು ಅಂಕಗಳು ಸಿಗಲಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ ವಿರುದ್ಧ 'ಅವಹೇಳನಕಾರಿ' ಹೇಳಿಕೆ: ವಿಧಾನ ಪರಿಷತ್‌ನಲ್ಲಿ ಕೋಲಾಹಲ, ಕಾಂಗ್ರೆಸ್ ಎಂಎಲ್‌ಸಿ ವಿರುದ್ಧ ಬಿಜೆಪಿ ಕಿಡಿ!

US ಜೊತೆಗೆ ವ್ಯಾಪಾರ ಒಪ್ಪಂದ: ಚೀನಾ, ಪಾಕಿಸ್ತಾನ, ಬಾಂಗ್ಲಾಗಿಂತಲೂ ಭಾರತಕ್ಕೆ ಹೆಚ್ಚಿನ ಲಾಭ! ರಷ್ಯಾದ ಮುಂದಿನ ನಡೆ ಏನು?

ವ್ಯಾಪಕ ಭ್ರಷ್ಟಾಚಾರ: ಶ್ರೀನಿವಾಸಪುರದ 25 ಗ್ರಾಮ ಪಂಚಾಯಿತಿಗಳ ವರದಿ ಪರಿಶೀಲಿಸಲು ಸಮಿತಿ ರಚನೆ!

'ಅಪಾರ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ': ಸುಂಕ ಕಡಿತದ ನಂತರ ಡೊನಾಲ್ಡ್ ಟ್ರಂಪ್‌ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ

'Mogambo Khush Hai': ಭಾರತ-ಯುಎಸ್ ವ್ಯಾಪಾರ ಒಪ್ಪಂದ ಕುರಿತು ಕಾಂಗ್ರೆಸ್ ವಾಗ್ದಾಳಿ!

SCROLL FOR NEXT