ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ 
ಕ್ರಿಕೆಟ್

'ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ 6 ವರ್ಷಗಳಿಂದ ಹುಚ್ಚು ಪ್ರೀತಿಯಲ್ಲಿದ್ದರು': ನಟ ನಂದೀಶ್ ಸಂಧು

'ನಾನು ಮದುವೆಗೆ ಹೋಗಿದ್ದೆ. ಆಗ ಮದುವೆ ರದ್ದಾಯಿತು. ಮತ್ತು ಮದುವೆ ಈ ಸಮಯದಲ್ಲಿ ನಡೆಯುತ್ತಿಲ್ಲ ಎಂದಷ್ಟೇ ನನಗೆ ತಿಳಿದುಬಂತು' ಎಂದು ಹೇಳಿದರು.

2025ರ ನವೆಂಬರ್‌ನಲ್ಲಿ ನಡೆಯಬೇಕಿದ್ದ ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ವಿವಾಹ ಇದ್ದಕ್ಕಿದ್ದಂತೆ ರದ್ದಾಗಿತ್ತು. ವಿವಾಹದಲ್ಲಿ ಪಾಲ್ಗೊಳ್ಳಲು ಸಾಂಗ್ಲಿಗೆ ಪ್ರಯಾಣ ಬೆಳೆಸಿದ್ದ ನಟ ನಂದೀಶ್ ಸಂಧು ಇತ್ತೀಚೆಗೆ ಮಿಸ್ ಮಾಲಿನಿಯೊಂದಿಗಿನ ಸಂದರ್ಶನದಲ್ಲಿ ಈ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.

ಪಲಾಶ್ ಮತ್ತೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪಗಳ ಬಗ್ಗೆ ಮಾತನಾಡಿದ ನಂದೀಶ್, 'ಈಗ ಅದರ ಬಗ್ಗೆ ಏನನ್ನೂ ಹೇಳದಿರುವುದು ಉತ್ತಮ. ಆ ಬಗ್ಗೆ ಪಲಾಶ್ ಅವರೇ ಮಾತನಾಡಲಿ. ತನಗೆ ತಿಳಿದ ಮಟ್ಟಿಗೆ, ಈ ಘಟನೆಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ಯಾರೊಬ್ಬರೂ ಪಲಾಶ್ ಅವರನ್ನು ಸಂಪರ್ಕಿಸಿರಲಿಲ್ಲ' ಎಂದು ಹೇಳಿದರು.

'ನಾನು ಮದುವೆಗೆ ಹೋಗಿದ್ದೆ. ಆಗ ಮದುವೆ ರದ್ದಾಯಿತು. ಮತ್ತು ಮದುವೆ ಈ ಸಮಯದಲ್ಲಿ ನಡೆಯುತ್ತಿಲ್ಲ ಎಂದಷ್ಟೇ ನನಗೆ ತಿಳಿದುಬಂತು' ಎಂದು ಹೇಳಿದರು.

ಅತಿಥಿಗಳು ಮತ್ತು ಮಾಧ್ಯಮಗಳಿಗೆ ಸ್ಮೃತಿ ಮಂಧಾನ ಅವರ ತಂದೆಯ ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಮದುವೆ ರದ್ದಾಗಿದೆ ಎಂದು ತಿಳಿಸಲಾಯಿತು.

'ಸುದ್ದಿಯಲ್ಲಿ ಬಂದ ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಲೇ ಮದುವೆಯನ್ನು ಮುಂದೂಡಲಾಗಿದೆ. ಅದನ್ನೇ ನಿಮಗೆ ತಿಳಿಸಲಾಗಿದೆ. ಎಲ್ಲರಿಗೂ ತಿಳಿಸಲಾಗಿದೆ. ಸ್ಮೃತಿಯ ತಂದೆ ಅಸ್ವಸ್ಥರಾಗಿದ್ದರು. ಅವರು ಆಸ್ಪತ್ರೆಯಲ್ಲಿದ್ದರು. ಅದಕ್ಕಾಗಿಯೇ ಎಲ್ಲವನ್ನೂ ಮುಂದೂಡಲಾಗಿದೆ' ಎಂದು ಅವರು ವಿವರಿಸಿದರು.

'ಮಾಧ್ಯಮ ವರದಿಗಳ ಮೂಲಕವೇ ವಂಚನೆ ಆರೋಪಗಳ ಬಗ್ಗೆ ತನಗೆ ಅರಿವಾಯಿತು ಮತ್ತು ನನಗೆ ಆ ಬಗ್ಗೆ ಬೇಸರವಾಗುತ್ತಿದೆ. ಕಾರಣ ಏನೇ ಇರಲಿ, ಮದುವೆ ನಡೆಯಲಿಲ್ಲ. ನಿಮಗೆ ಗೊತ್ತಾ, ನಾನು ಅವರಿಬ್ಬರ ಪ್ರೀತಿಯನ್ನು ನೋಡಿದ್ದೇನೆ. ಕಳೆದ ಐದರಿಂದ ಆರು ವರ್ಷಗಳಿಂದ ಅವರು ಎಷ್ಟು ಆಳವಾಗಿ ಪ್ರೀತಿಸುತ್ತಿದ್ದರು ಎಂಬುದನ್ನು ನಾನು ನೋಡಿದ್ದೇನೆ. ಅವರು ತುಂಬಾ ಮುದ್ದಾದ, ಒಳ್ಳೆಯ ಜೋಡಿ' ಎಂದು ಅವರು ಹೇಳಿದರು.

ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನ ವಿವಾಹ ನವೆಂಬರ್ 23, 2025 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆಯಬೇಕಿತ್ತು. ಆದರೆ, ಮದುವೆ ದಿನದಂದು, ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರನ್ನು ಆರೋಗ್ಯ ಸಮಸ್ಯೆಯಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅದಾದ ಕೆಲವು ಗಂಟೆಗಳ ನಂತರ, ಪಲಾಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬ ವರದಿಗಳು ಹೊರಬಿದ್ದವು.

ಡಿಸೆಂಬರ್ 7 ರಂದು, ಇಬ್ಬರೂ ತಮ್ಮ ಮದುವೆ ರದ್ದಾಗಿದೆ ಎಂದು ಘೋಷಿಸಿದರು. ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಪಲಾಶ್, ಎರಡೂ ಕುಟುಂಬಗಳು ತುಂಬಾ ಕಠಿಣ ಸಮಯವನ್ನು ಎದುರಿಸಿವೆ ಎಂದು ನಾನು ಭಾವಿಸುತ್ತೇನೆ ಮತ್ತು ಈ ಸಮಯದಲ್ಲಿ ನಾವು ಸಕಾರಾತ್ಮಕತೆಯನ್ನು ನಂಬಬೇಕು ಮತ್ತು ನಮಗೆ ಸಾಧ್ಯವಾದಷ್ಟು ಸಕಾರಾತ್ಮಕತೆಯನ್ನು ಹರಡಬೇಕು ಎಂದು ನಾನು ಪುನರಾವರ್ತಿಸಲು ಬಯಸುತ್ತೇನೆ ಮತ್ತು ಬಲಿಷ್ಠವಾಗಿರಿ' ಎಂದಿದ್ದರು.

ಇದಕ್ಕೂ ಮೊದಲು, ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ಎಂದು ಪರಿಚಯಿಸಿಕೊಂಡ ವಿದ್ಯಾನ್ ಮಾನೆ ಎಂಬುವವರು, ಹಿಂದೂಸ್ತಾನ್ ಟೈಮ್ಸ್ ಜೊತೆಗಿನ ಸಂಭಾಷಣೆಯಲ್ಲಿ ಪಲಾಶ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.

'ನಾನು ಮದುವೆ (ನವೆಂಬರ್ 23, 2025) ಸಂಭ್ರಮದಲ್ಲಿದ್ದೆ. ಆಗ ಅವನು (ಪಲಾಶ್) ಹಾಸಿಗೆಯಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಭಯಾನಕ ದೃಶ್ಯ, ಅವನನ್ನು ಭಾರತೀಯ ಮಹಿಳಾ ಕ್ರಿಕೆಟಿಗರು ಥಳಿಸಿದರು. ಇಡೀ ಕುಟುಂಬ ಚಿಂದಿ ಚೋರ್ ಆಯಿತು. ಅವನು ಮದುವೆಯಾಗಿ ಸಾಂಗ್ಲಿಯಲ್ಲಿ ನೆಲೆಸುತ್ತಾನೆ ಎಂದು ನಾನು ಭಾವಿಸಿದ್ದೆ. ಆದರೆ, ಅದು ಸುಳ್ಳಾಯಿತು' ಎಂದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Pariksha Pe Charcha 2026: ಅಗ್ಗದಲ್ಲಿ ಡೇಟಾ ಸಿಗುತ್ತದೆ ಎಂದು ಇಂಟರ್ನೆಟ್ ಲ್ಲಿ ಸಮಯ ಕಳೆಯಬೇಡಿ: ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ನೀಡಿದ ಸಲಹೆಗಳೇನು?-Video

'ಮೊದಲು ಇರಾನ್ ತೊರೆಯಿರಿ': ಡೊನಾಲ್ಡ್ ಟ್ರಂಪ್ ದಾಳಿ ಎಚ್ಚರಿಕೆ ಬೆನ್ನಲ್ಲೇ ಅಮೆರಿಕನ್ನರಿಗೆ ವೈಟ್ ಹೌಸ್ ಕೊನೆಯ ಎಚ್ಚರಿಕೆ!

T20 World Cup 2026: 'ನಮಗೋಸ್ಕರ ಭಾರತ ವಿರುದ್ಧ ಆಡಿ': ಆರ್ಥಿಕ ಸಂಕಷ್ಟದಲ್ಲಿರುವ 'ಆತಿಥೇಯ' ಶ್ರೀಲಂಕಾ ಪಾಕಿಸ್ತಾನಕ್ಕೆ ಮನವಿ

'ನೀನು Indian-Bollywood...ನಾವು ಕೊರಿಯನ್ನರು; ಕಿರಿಯ ತಂಗಿಯನ್ನೇ ದ್ವೇಷಿಸುತ್ತಿದ್ದ ಮೂವರು ಸೋದರಿಯರು, ಡೈರಿಯಲ್ಲಿದೆ ಬೆಚ್ಚಿಬೀಳಿಸುವ ಸಂಗತಿ..!

'ಈ ಸಲವೂ ಕಪ್ ನಮ್ದು': ಎರಡನೇ ಬಾರಿ WPL ಕಿರೀಟ ಗೆದ್ದ RCB, ಗೆಲುವಿನ ದಡ ಮುಟ್ಟಿಸಿದ ಸ್ಮೃತಿ ಮಂಧಾನಾ-ಜಾರ್ಜಿಯಾ ವೋಲ್ ಜತೆಯಾಟ-Video

SCROLL FOR NEXT