ಜಯ್ ಶಾ- ಮೊಹ್ಸಿನ್ ನಖ್ವಿ online desk
ಕ್ರಿಕೆಟ್

T20 World Cup 2026: ಭಾರತದ ಪಂದ್ಯ 'ಬಹಿಷ್ಕಾರ'ದ ನಂತರ ಬಿಗ್ ಟ್ವಿಸ್ಟ್; PCB ಜೊತೆಗೆ ICC ಮಾತುಕತೆ!

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇದು ಅನಿವಾರ್ಯ ಎಂದು ಕರೆಯುವ ಬದಲು ಸಮಸ್ಯೆಯನ್ನು ಕಡಿಮೆ ಮಾಡಲು ಅಥವಾ ತಪ್ಪಿಸಲು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ತೋರಿಸಲು ಐಸಿಸಿ ಕೇಳಿದೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಯಾವುದೇ ಆಗಿದ್ದರೂ ಅದು ಹಣದ ಹೊಳೆಯನ್ನೇ ಹರಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಪಾಕಿಸ್ತಾನವು ಭಾರತ ವಿರುದ್ಧದ ಟಿ20 ವಿಶ್ವಕಪ್ 2026ರ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದು, ಬಹುತೇಕ ಕ್ರಿಕೆಟ್ ವಲಯವೇ ಇದೀಗ ತಲ್ಲಣಕ್ಕೆ ಒಳಗಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಇದೀಗ ಭಾರತ ಮತ್ತು ಪಾಕಿಸ್ತಾನದ ಪಂದ್ಯ ನಡೆಸಲು ಕಸರತ್ತಿಗೆ ಮುಂದಾಗಿದೆ ಎನ್ನಲಾಗಿದೆ. ಭಾರತ ವಿರುದ್ಧ ಪಂದ್ಯವನ್ನು ಆಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಜೊತೆಗೆ ಐಸಿಸಿ ಮಾತುಕತೆ ಆರಂಭಿಸಿದೆ ಎಂದು ವರದಿಯಾಗಿದೆ.

ಆಟಗಾರರ ಭದ್ರತೆಯ ನೆಪವೊಡ್ಡಿ ಬಾಂಗ್ಲಾದೇಶವು ತನ್ನೆಲ್ಲ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸುವಂತೆ ಐಸಿಸಿ ಮುಂದೆ ಬೇಡಿಕೆ ಇಟ್ಟಿತ್ತು. ಇದು ನೆರವೇರದ ಹಿನ್ನೆಲೆಯಲ್ಲಿ T20 ವಿಶ್ವಕಪ್‌ನಿಂದಲೇ ಹೊರಗುಳಿದ ಬಾಂಗ್ಲಾದೇಶದೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಪ್ರಯತ್ನದಲ್ಲಿ ಪಾಕಿಸ್ತಾನವು ಫೆಬ್ರುವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸುವ ನಿರ್ಧಾರ ಪ್ರಕಟಿಸಿದೆ. ಆದಾಗ್ಯೂ, ಈ ಪಂದ್ಯವನ್ನು ಅವಲಂಬಿಸಿಯೇ ಪಂದ್ಯಾವಳಿಯ ಆರ್ಥಿಕ ಯಶಸ್ಸು ನಿರ್ಧಾರವಾಗುವುದರಿಂದ, ಪಾಕಿಸ್ತಾನವು ತನ್ನ ನಿಲುವನ್ನು ಬದಲಿಸುವಂತೆ ಮಾಡಲು ಸಾಕಷ್ಟು 'ಬ್ಯಾಕ್ ಚಾನೆಲ್' ಮಾತುಕತೆಗಳನ್ನು ನಡೆಸಲಾಗಿದೆ.

ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ವರದಿ ಪ್ರಕಾರ, ಪಾಕಿಸ್ತಾನವು ಭಾರತದ ವಿರುದ್ಧ ಪಂದ್ಯವನ್ನು ಆಡದಿದ್ದರೆ ಪಿಸಿಬಿಯಿಂದ ಪರಿಹಾರ ಅಥವಾ ದಂಡವನ್ನು ಪಡೆಯಬಹುದು ಎಂದು ಐಸಿಸಿ ಎಚ್ಚರಿಸಿದ ನಂತರ ಪಾಕಿಸ್ತಾನವು ಈ ವಿಷಯದಲ್ಲಿ ಮೃದು ನಿಲುವಿಗೆ ಬಂದಿದೆ. ಪಾಕಿಸ್ತಾನವು ಪಂದ್ಯವನ್ನು ಆಡದಿರುವುದನ್ನು ಸಮರ್ಥಿಸಿಕೊಳ್ಳಲು ಪರಿಸ್ಥಿತಿ ಅನಿವಾರ್ಯ, ಅಸಾಧಾರಣ ಸನ್ನಿವೇಶ ಎಂದು ಕರೆದಿದೆ. ಆದರೆ, ಇದನ್ನು ಒಪ್ಪದ ICC, ಈ ಪ್ರಕರಣವು ನಿಯಮಗಳ ಅಡಿಯಲ್ಲಿ ಬರುವುದಿಲ್ಲ ಎಂದು ಹೇಳಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇದು ಅನಿವಾರ್ಯ ಎಂದು ಕರೆಯುವ ಬದಲು ಸಮಸ್ಯೆಯನ್ನು ಕಡಿಮೆ ಮಾಡಲು ಅಥವಾ ತಪ್ಪಿಸಲು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ತೋರಿಸಲು ಐಸಿಸಿ ಕೇಳಿದೆ.

'ಐಸಿಸಿ ಈಗ ಸಮಸ್ಯೆಯನ್ನು ಪರಿಹರಿಸಲು ರಚನಾತ್ಮಕ ರೀತಿಯಲ್ಲಿ ತೊಡಗಿಸಿಕೊಳ್ಳುತ್ತದೆ; ಮಾತುಕತೆ ಇರುತ್ತದೆ, ಮುಖಾಮುಖಿಯಲ್ಲ. ಐಸಿಸಿಯಿಂದ ಔಪಚಾರಿಕ ಸಂವಹನದ ಸ್ವೀಕೃತಿಯ ನಂತರ, ಮುಂದಿನ ಮಾತುಕತೆ ಪ್ರಾರಂಭಿಸಲು ಪಿಸಿಬಿ ಅಂತರರಾಷ್ಟ್ರೀಯ ಸಂಸ್ಥೆಯನ್ನು ಸಂಪರ್ಕಿಸಿದೆ. ಐಸಿಸಿ ಸದ್ಯ ಸಂಭವನೀಯ ನಿರ್ಣಯಗಳನ್ನು ಅನ್ವೇಷಿಸಲು ರಚನಾತ್ಮಕ ರೀತಿಯಲ್ಲಿ ಮಂಡಳಿಯೊಂದಿಗೆ ತೊಡಗಿಸಿಕೊಂಡಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಕಳೆದ ಕೆಲವು ದಿನಗಳಲ್ಲಿ, ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಕೂಡ ಪಿಸಿಬಿಗೆ ಪತ್ರ ಬರೆದಿದ್ದು, ಮಂಡಳಿಯ ಆರ್ಥಿಕ ಆರೋಗ್ಯಕ್ಕೆ ಧಕ್ಕೆಯಾಗುವುದರಿಂದ ತಮ್ಮ ಬಹಿಷ್ಕಾರದ ನಿಲುವನ್ನು ಹಿಂತೆಗೆದುಕೊಳ್ಳುವಂತೆ ಕೇಳಿದೆ.

'ಟಿಕೆಟ್‌ಗಳ ಬೇಡಿಕೆಯಿಂದ, ನಾವು ಆರ್ಥಿಕವಾಗಿ ದೊಡ್ಡ ಉತ್ತೇಜನವನ್ನು ಪಡೆಯಲಿದ್ದೇವೆ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ, ಪಂದ್ಯಕ್ಕೆ ಬರುವ ಜನರು ಖಂಡಿತವಾಗಿಯೂ ದೇಶವನ್ನು ಅನ್ವೇಷಿಸಲು ಕೆಲವು ದಿನಗಳನ್ನು ಕಳೆಯುತ್ತಾರೆ. ಹಾಗಾಗಿ ಇದು ಎಲ್ಲರಿಗೂ ದೊಡ್ಡ ನಷ್ಟವಾಗಿದೆ. ಇದು ಕಠೋರ ಚಿತ್ರಣವಾಗಿದೆ' ಎಂದು ಶ್ರೀಲಂಕಾ ಕ್ರಿಕೆಟ್ ಕಾರ್ಯದರ್ಶಿ ಬಂಡುಲಾ ಡಿಸಾನಾಯಕೆ ಹೇಳಿದ್ದಾರೆ.

ಎಸ್‌ಎಲ್‌ಸಿಯ ಮೇಲ್‌ಗೆ ಉತ್ತರಿಸಿದ ಪಿಸಿಬಿ, ಈ ವಿಷಯದ ಬಗ್ಗೆ ಪಾಕಿಸ್ತಾನ ಸರ್ಕಾರದೊಂದಿಗೆ ಮಾತನಾಡುವುದಾಗಿ ಮತ್ತು ಸಂಭಾವ್ಯ ಯು-ಟರ್ನ್ ಆಯ್ಕೆಗಳನ್ನು ಅನ್ವೇಷಿಸುವುದಾಗಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

300ಕ್ಕೂ ಹೆಚ್ಚು ಪತ್ರಕರ್ತರ ಉದ್ಯೋಗಕ್ಕೆ ಕತ್ತರಿ: ಆಕ್ರೋಶ ಬೆನ್ನಲ್ಲೇ 'The Washington Post' CEO ವಿಲ್ ಲೂಯಿಸ್ ರಾಜೀನಾಮೆ

ಹಂಪಿ ಬಳಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಪ್ರಕರಣ: ಮೂವರು ಆರೋಪಿಗಳು ದೋಷಿ ಎಂದು ಕೋರ್ಟ್ ಮಹತ್ವದ ತೀರ್ಪು, ಫೆ.16ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ..!

ನಂಬಿಕೆಯೇ ಭಾರತದ ಬಲಿಷ್ಠ ಕರೆನ್ಸಿ: ಮಲೇಷ್ಯಾದಲ್ಲಿ ಪ್ರಧಾನಿ ಮೋದಿ

T20 ವಿಶ್ವಕಪ್ 2026: ಮಕಾಡೆ ಮಲಗಿದ USA ಬ್ಯಾಟಿಂಗ್; ಭಾರತಕ್ಕೆ ಭರ್ಜರಿ ಜಯ, ಶುಭಾರಂಭ!

T20 ವಿಶ್ವಕಪ್ 2026: USA ವಿರುದ್ಧ ಸೂರ್ಯ ಭರ್ಜರಿ ಬ್ಯಾಟಿಂಗ್; Babar Azam ದಾಖಲೆ ಧ್ವಂಸ

SCROLL FOR NEXT