ಪ್ರಾತಿನಿಧಿಕ ಚಿತ್ರ 
ಕ್ರಿಕೆಟ್

T20 World Cup 2026: ಭಾರತ vs ಪಾಕಿಸ್ತಾನ ಕಾದಾಟಕ್ಕೆ ದಿನಗಣನೆ; ಕೊಲಂಬೊಗೆ ವಿಮಾನ ಟಿಕೆಟ್‌ ದರ ಭಾರಿ ಏರಿಕೆ!

ಈ ಪಂದ್ಯದಲ್ಲಿ ಐಸಿಸಿ ಅಧ್ಯಕ್ಷ ಜಯ್ ಶಾ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ವೇದಿಕೆಯನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ.

ಚೆನ್ನೈ: ಫೆಬ್ರುವರಿ 15 ರಂದು ನಿಗದಿಯಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸುತ್ತ ಇದೀಗ ವ್ಯಾಪಕ ನಿರೀಕ್ಷೆ ಗರಿಗೆದರಿದ್ದು, ವಿಮಾನಯಾನ ವಲಯದ ಮೇಲೂ ಪ್ರಭಾವ ಬೀರಿದೆ. ವಿಮಾನಯಾನ ಸಂಸ್ಥೆಗಳು ಭಾರತದ ಹೆಚ್ಚಿನ ನಗರಗಳಿಂದ ಶ್ರೀಲಂಕಾ ರಾಜಧಾನಿ ಕೊಲಂಬೊಗೆ ತೆರಳುವ ಟಿಕೆಟ್ ದರವನ್ನು ಹೆಚ್ಚಿಸಿವೆ ಮತ್ತು ಕೆಲವು ರಿಟರ್ನ್ ಟಿಕೆಟ್‌ಗಳು ₹1 ಲಕ್ಷ ರೂ.ಗಳಿಗೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿವೆ.

ಈ ಪಂದ್ಯಕ್ಕಾಗಿ ದೆಹಲಿಯಿಂದ ಶ್ರೀಲಂಕಾ ರಾಜಧಾನಿಗೆ ನೇರ ಹಿಂತಿರುಗುವ ಟಿಕೆಟ್ ದರ ಇದೀಗ ₹1,18,961 ಆಗಿದೆ. ಸಾಮಾನ್ಯ ದಿನಗಳಲ್ಲಿ, ಟಿಕೆಟ್‌ಗಳನ್ನು ಬುಕ್ ಮಾಡಿದಾಗ ಅದು ₹30,000 ಕ್ಕಿಂತ ಕಡಿಮೆ ಇರುತ್ತದೆ.

ಸಾಮಾನ್ಯವಾಗಿ ಚೆನ್ನೈನಿಂದ ನೇರ ವಾಪಸಾತಿ ವಿಮಾನಕ್ಕೆ ಸುಮಾರು ₹16,000 ಶುಲ್ಕ ವಿಧಿಸುವ ಇಂಡಿಗೋ, ಪಂದ್ಯದ ವಾರಾಂತ್ಯದ (ಫೆಬ್ರುವರಿ 14ರಂದು ನಿರ್ಗಮನ ಮತ್ತು ಸೋಮವಾರ ವಾಪಸಾತಿ) ದರವನ್ನು ₹54,475ಕ್ಕೆ ಹೆಚ್ಚಿಸಿದೆ. ಭಾರತ-ಪಾಕಿಸ್ತಾನ ಪಂದ್ಯದ ಸಮಯದಲ್ಲಿ ಹೆಚ್ಚಿನ ಬೇಡಿಕೆಯಿಂದಾಗಿ ಟಿಕೆಟ್ ಬೆಲೆಗಳು ಮೂರರಷ್ಟು ಹೆಚ್ಚಾಗಿದೆ.

ಚೆನ್ನೈ ಕೊಲಂಬೊದಿಂದ ಕೇವಲ 80 ನಿಮಿಷಗಳ ವಿಮಾನ ಪ್ರಯಾಣ ಆಗಿರುವುದರಿಂದ, ಕೆಲವು ಅಭಿಮಾನಿಗಳು ಮೊದಲು ಚೆನ್ನೈಗೆ ವಿಮಾನದಲ್ಲಿ ಹೋಗಿ ನಂತರ ಅಲ್ಲಿಂದ ಕೊಲಂಬೊಗೆ ಪ್ರಯಾಣಿಸುವ ಮೂಲಕ ಹಣವನ್ನು ಉಳಿಸಬಹುದು. ಮುಂಬೈನಿಂದ ತೆರಳುವ ಅಭಿಮಾನಿಗಳಿಗೆ, ಕೊಲಂಬೊಗೆ ₹82,000 ವೆಚ್ಚವಾಗುತ್ತದೆ.

ಹೋಟೆಲ್ ಬೆಲೆಗಳು ಕೂಡ ಗಗನಕ್ಕೇರುತ್ತಿವೆ. ಕೆಲವು ಸ್ಟಾರ್ ಹೋಟೆಲ್‌ಗಳು ಆರರಿಂದ 10 ಪಟ್ಟು ಹೆಚ್ಚು ಶುಲ್ಕ ವಿಧಿಸುತ್ತಿವೆ. ಒಂದು ಪ್ರಸಿದ್ಧ ಸ್ಟಾರ್ ಲ್ಯಾಂಡ್‌ಮಾರ್ಕ್‌ನ ಬೆಲೆ ರಾತ್ರಿಗೆ ₹1.50 ಲಕ್ಷ (ಸಾಮಾನ್ಯ ದಿನಗಳಲ್ಲಿ ಇದು ₹10 ಸಾವಿರ).

ಈ ಪಂದ್ಯದಲ್ಲಿ ಐಸಿಸಿ ಅಧ್ಯಕ್ಷ ಜಯ್ ಶಾ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ವೇದಿಕೆಯನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!