ಇಶಾನ್ ಕಿಶನ್ 
ಕ್ರಿಕೆಟ್

Pak ಎಂದಾಕ್ಷಣ ಪುಡಿಪುಡಿ ಮಾಡಬೇಕೆನಿಸುತ್ತದೆ, ಬಿಹಾರ ನನ್ನ ರಕ್ತದಲ್ಲಿದೆ; Ishan Kishan ಹಳೆಯ Video ವೈರಲ್!

ಭಾರತ-ಪಾಕ್ ನಡುವಿನ 2026ರ ಟಿ20 ವಿಶ್ವಕಪ್ ಗ್ರೂಪ್ ಹಂತದ ಪಂದ್ಯದಲ್ಲಿ ಇಶಾನ್ ಕಿಶನ್ ಎಲ್ಲರ ಗಮನ ಸೆಳೆದರು. ಕಿಶನ್ 40 ಎಸೆತಗಳಲ್ಲಿ 77 ರನ್ ಗಳಿಸುವ ಮೂಲಕ ಭಾರತ 175 ರನ್ ಗಡಿ ಮುಟ್ಟಲು ನೆರವಾದರು.

ಕೊಲಂಬೊದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ 2026ರ ಟಿ20 ವಿಶ್ವಕಪ್ ಗ್ರೂಪ್ ಹಂತದ ಪಂದ್ಯದಲ್ಲಿ ಇಶಾನ್ ಕಿಶನ್ ಎಲ್ಲರ ಗಮನ ಸೆಳೆದರು. ಜಾರ್ಖಂಡ್ ಕ್ರಿಕೆಟಿಗ ಕೇವಲ 40 ಎಸೆತಗಳಲ್ಲಿ 77 ರನ್ ಗಳಿಸುವ ಮೂಲಕ ಭಾರತ 175 ರನ್ ಗಡಿ ಮುಟ್ಟಲು ನೆರವಾದರು. ಅಲ್ಲದೆ ಒಂದೇ ಇನ್ನಿಂಗ್ಸ್ ನಲ್ಲಿ ಹಲವಾರು ದಾಖಲೆಗಳನ್ನು ಮುರಿದರು. ಟಿ20 ವಿಶ್ವಕಪ್‌ನಲ್ಲಿ ಅವರ ಎರಡನೇ 50ಕ್ಕಿಂತ ಹೆಚ್ಚಿನ ಮೊತ್ತ ಮತ್ತು ಅವರ ಕೊನೆಯ ಏಳು ಟಿ20ಐ ಇನ್ನಿಂಗ್ಸ್‌ಗಳಲ್ಲಿ ಅವರ ಐದನೇ 50ಕ್ಕಿಂತ ಹೆಚ್ಚಿನ ರನ್ ಆಗಿದೆ.

ಇಶಾನ್ ಕಿಶನ್ ರ ಸ್ಫೋಟಕ ಬ್ಯಾಟಿಂಗ್ ನಂತರ, 27 ವರ್ಷದ ಆಟಗಾರನ ಪಾಕಿಸ್ತಾನ ವಿರುದ್ಧ ಇನ್ನಿಂಗ್ಸ್ ಆಡಿದ್ದರ ಬಗ್ಗೆ ಮಾತನಾಡಿರುವ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. ಸಂದರ್ಶನದಲ್ಲಿ ಕಿಶನ್ 2023ರ ಏಷ್ಯಾ ಕಪ್‌ನ ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 81 ಎಸೆತಗಳಲ್ಲಿ 82 ರನ್ ಗಳಿಸಿದ ಬಗ್ಗೆ ಮಾತನಾಡುತ್ತಿದ್ದರು. ಆ ಪಂದ್ಯದಲ್ಲಿ ಭಾರತದ 48 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ನಂತರ 66 ರನ್ ಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಕಿಶನ್ ಐದನೇ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಅವರೊಂದಿಗೆ 138 ರನ್ ಜೊತೆಯಾಟವಾಡಿದರು.

ಸಂದರ್ಶನದಲ್ಲಿ ಇಶಾನ್ ಕಿಶನ್ ಹೇಳಿದ್ದೇನು?

ಇಲ್ಲ, ಆದರೆ ನನ್ನನ್ನು ನೋಡಿ-ಅದು ಪಾಕಿಸ್ತಾನ ಎಂದಾಕ್ಷಣ ನನಗೆ ಒಳಗಿನಿಂದ ತುಂಬಾ ಪ್ರೇರಣೆ ಸಿಗುತ್ತದೆ. ಕೆಲವೊಮ್ಮೆ ಅದು ಯಾವಾಗಲೂ ಕ್ರಿಕೆಟ್ ಅಂತಲೇ ಅಲ್ಲ. ಆದರೆ ಕ್ರಿಕೆಟ್ ಅಂತ ಬಂದರೆ ನನ್ನೊಳಗಿನ ರೋಷಾಗ್ನಿ ಅವರನ್ನು ಪುಡಿಮಾಡಿ ಅಥವಾ ನೆಲಸಮ ಮಾಡು ಅಂತ ಹೇಳುತ್ತದೆ. ನಾನು ಅವರ ವಿರುದ್ಧ ಆಡುವಾಗ 'ಒಳ್ಳೆಯ ಹುಡುಗ'ನಾಗಲು ಸಾಧ್ಯವಿಲ್ಲ. ಜನರು ಏನು ಬಯಸುತ್ತಾರೆಂದು ಯೋಚಿಸಬಹುದು. ಆದರೆ ಏನೇ ಸಂಭವಿಸಿದರೂ ನಾನು ಅದನ್ನು ಅವರಿಗೆ ಹಿಂತಿರುಗಿಸಬೇಕು. ಆ ಆಂತರಿಕ ಬೆಂಕಿ ಬೇರೆಲ್ಲಿ ಹೊರಬರುತ್ತದೆ? ನಾನು ಕಾಯುತ್ತೇನೆ. ಸಹೋದರ, ಬಿಹಾರ ನನ್ನ ರಕ್ತದಲ್ಲಿದೆ ಎಂದು ಕಿಶನ್ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೊಪ್ಪಳ: ಇಸ್ರೇಲಿ ಮಹಿಳೆ ಅತ್ಯಾಚಾರ, ವಿದೇಶಿಗನ ಕೊಲೆ ಪ್ರಕರಣ; 3 ಅಪರಾಧಿಗಳಿಗೆ ಗಲ್ಲು ಶಿಕ್ಷೆ, 9 ತಿಂಗಳಲ್ಲೇ ಐತಿಹಾಸಿಕ ತೀರ್ಪು!

ಹಂಪಿ ಉತ್ಸವ: ನಟಿ ರಚಿತಾ ರಾಮ್ ಕಾರು ಚಾಲಕನಿಂದ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ?

ನಾಳೆ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣ ವಚನ ಸ್ವೀಕಾರ

ಮದುವೆಗೂ ಮುನ್ನ ಹೇಗೆ ಸೆಕ್ಸ್ ನಲ್ಲಿ ತೊಡಗಿಸಿಕೊಳ್ಳಲು ಸಾಧ್ಯ? ವಿವಾಹ ಪೂರ್ವ ಸಂಬಂಧದ ಬಗ್ಗೆ ಸುಪ್ರೀಂ ಗರಂ!

ಕನ್ನಡದ ಖ್ಯಾತ ಕಿರುತೆರೆ ನಟಿ 'ರಶ್ಮಿ ಲೀಲಾ' ಇನ್ನಿಲ್ಲ!

SCROLL FOR NEXT