ಮತೀಶಾ ಪತಿರಾಣ 
ಕ್ರಿಕೆಟ್

T20 World Cup 2026: ಅರ್ಧಕ್ಕೇ ಮೈದಾನದಿಂದ ಹೊರನಡೆದ ಮತೀಶಾ ಪತಿರಾಣ; IPL 2026ಕ್ಕೂ ಮುನ್ನ KKR ಗೆ ಹಿನ್ನಡೆ!

ಪಂದ್ಯದ ಮೊದಲ ಓವರ್‌ನ ನಾಲ್ಕನೇ ಎಸೆತವನ್ನು ಆಸ್ಟ್ರೇಲಿಯಾ ನಾಯಕ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಮಿಚೆಲ್ ಮಾರ್ಷ್‌ಗೆ ಎಸೆತ ನಂತರ ಪತಿರಾಣ ಮೈದಾನಕ್ಕೆ ಕುಸಿದು ಬಿದ್ದರು.

2026ರ ಟಿ20 ವಿಶ್ವಕಪ್ ಮಧ್ಯೆ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ಮತೀಶಾ ಪತಿರಾಣ ಮೂರು ವಾರಗಳ ಕಾಲ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಾಯದಿಂದಾಗಿ ವೇಗಿ ಕುಂಟುತ್ತಾ ಮೈದಾನದಿಂದ ಹೊರನಡೆದಿದ್ದಾರೆ. ಈಗ, ಗಾಯದಿಂದಾಗಿ ಮತೀಶಾ ಪತಿರಾಣ ಕನಿಷ್ಠ ಮೂರು ವಾರಗಳ ಕಾಲ ದೂರ ಉಳಿಯಲಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.

ಶ್ರೀಲಂಕಾದ ಪತ್ರಕರ್ತರೊಬ್ಬರ ಪ್ರಕಾರ, ಶ್ರೀಲಂಕಾವು ಪತಿರಾಣ ಅವರ ಸ್ಕ್ಯಾನ್ ವರದಿಗಳಿಗಾಗಿ ಕಾಯುತ್ತಿದೆ. ಆದರೆ, ವೇಗಿ ಕನಿಷ್ಠ ಮೂರು ವಾರಗಳ ಕಾಲ ಆಟದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಟಿ20 ವಿಶ್ವಕಪ್‌ಗಾಗಿ ಅವರ ಬದಲಿಗೆ ಶ್ರೀಲಂಕಾ ತಂಡದಲ್ಲಿ ಬಿನುರ ಫೆರ್ನಾಂಡೊ ಅಥವಾ ದಿಲ್ಶನ್ ಮಧುಶಂಕ ಸ್ಥಾನ ಪಡೆಯಬಹುದು ಮತ್ತು ಬುಧವಾರ ಬದಲಿ ಆಟಗಾರನನ್ನು ಘೋಷಿಸಲಾಗುವುದು ಎಂದು ವರದಿ ಹೇಳುತ್ತದೆ.

ಈ ಪ್ರಕರಣವನ್ನು ಪರಿಗಣಿಸಿದ ನಂತರ ಐಸಿಸಿ ತಾಂತ್ರಿಕ ಸಮಿತಿಯು ಶ್ರೀಲಂಕಾ ಕ್ರಿಕೆಟ್‌ನ ಕೋರಿಕೆಯನ್ನು ಅನುಮೋದಿಸಬೇಕಾಗುತ್ತದೆ. ಇತರ ಆಯ್ಕೆಗಳಲ್ಲಿ ನುವಾನ್ ತುಷಾರ ಮತ್ತು ಮಿಲನ್ ರತ್ನಾಯಕ ಸೇರಿದ್ದಾರೆ ಎಂದು ವರದಿ ಹೇಳುತ್ತದೆ.

ಪಂದ್ಯದ ಮೊದಲ ಓವರ್‌ನ ನಾಲ್ಕನೇ ಎಸೆತವನ್ನು ಆಸ್ಟ್ರೇಲಿಯಾ ನಾಯಕ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಮಿಚೆಲ್ ಮಾರ್ಷ್‌ಗೆ ಎಸೆತ ನಂತರ ಪತಿರಾಣ ಮೈದಾನಕ್ಕೆ ಕುಸಿದು ಬಿದ್ದರು. ವೇಗಿ ನೋವಿನಿಂದ ಎಡಗಾಲನ್ನು ಹಿಡಿದುಕೊಂಡರು. ಪತಿರಾನ ಅವರ ಮಂಡಿರಜ್ಜು ಗಾಯವಾಗಿರಬಹುದೆಂದು ವ್ಯಾಖ್ಯಾನಕಾರರು ಸೂಚಿಸಿದರು. ಫಿಜಿಯೋಗಳು ಅವರನ್ನು ನೋಡಿಲು ಓಡಿ ಬಂದರು. ಆದರೆ ಪತಿರಾಣ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. 3ನೇ ಓವರ್‌ನ ಉಳಿದ 2 ಎಸೆತಗಳನ್ನು ಬೌಲಿಂಗ್ ಮಾಡಲು ದಸುನ್ ಶನಕ ಬಂದರು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೂ ಹೊಡೆತ

ಪತಿರಾನಾ ಗಾಯವು ಶ್ರೀಲಂಕಾ ತಂಡಕ್ಕೆ ಮಾತ್ರವಲ್ಲದೆ ಅವರ ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೂ ಹೊಡೆತ ನೀಡಲಿದೆ. ಕೆಕೆಆರ್ ತಂಡವು ಸಿಎಸ್‌ಕೆ ಮಾಜಿ ವೇಗಿಯನ್ನು ₹18 ಕೋಟಿಗೆ ಖರೀದಿಸಿತ್ತು. ಈಗಾಗಲೇ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದ್ದು, ಹರ್ಷಿತ್ ರಾಣಾ ಕೂಡ ಐಪಿಎಲ್ 2026ರ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಈ ಬೆನ್ನಲ್ಲೇ ಶ್ರೀಲಂಕಾದ ವೇಗಿ ಕೂಡ ಗಾಯಗೊಂಡಿರುವುದು ಕೆಕೆಆರ್‌ಗೆ ಹೊಡೆತವಾಗಿದೆ. ಪತಿರಾಣ ಅವರ ಗಾಯಗಳ ಇತಿಹಾಸ ಮತ್ತು ಅವರ ಚೇತರಿಕೆಯ ಅವಧಿಯನ್ನು ಗಮನಿಸಿದರೆ, ಅವರು ಮತ್ತೆ ಆಟಕ್ಕೆ ಇಳಿಯಲು 3 ವಾರಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾರಿಗೆ ನೌಕರರ ಒತ್ತಡಕ್ಕೆ ಮಣಿದ ಸರ್ಕಾರ; 26 ತಿಂಗಳ ಅರಿಯರ್ಸ್; ವೇತನ ಪರಿಷ್ಕರಣೆಗೆ ಒಪ್ಪಿಗೆ; ರದ್ದಾಗುತ್ತಾ ಮುಷ್ಕರ?

T20 World Cup 2026: ನೆದರ್ಲೆಂಡ್ ವಿರುದ್ಧ 17 ರನ್ ಗಳಿಂದ ಗೆದ್ದು, ಟಿ-20 ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಭಾರತ!

ಬಾಂಗ್ಲಾ ಪ್ರಧಾನಿಯಾದ ಬೆನ್ನಲ್ಲೇ ದೇಶಾದ್ಯಂತ ಅಪಹಾಸ್ಯಕ್ಕೆ ಗುರಿಯಾದ Tarique Rahman; ಆಯ್ಕೆ ಮಾಡಿದ ಜನರಿಂದಲೇ ಅವಮಾನ, ಆರೋಪ?

ಪಂಜಾಬ್: ಬಟಿಂಡಾದಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ, ಅಶ್ರುವಾಯು ಪ್ರಯೋಗ!

ಭಾರತದ AI ಸಾಮರ್ಥ್ಯವನ್ನು ಹೈಲೈಟ್ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ: ಯುಎಸ್-ಭಾರತ ಸಹಯೋಗದ ಪ್ರಾಜೆಕ್ಟ್ ಘೋಷಣೆ! Video

SCROLL FOR NEXT