ಮೊಹಮ್ಮದ್ ಶಮಿ 
ಕ್ರಿಕೆಟ್

ಭಾರತ ಏಕದಿನ ತಂಡಕ್ಕೆ ಮೊಹಮ್ಮದ್ ಶಮಿ ಆಯ್ಕೆ ಬಗ್ಗೆ ಅಜಿತ್ ಅಗರ್ಕರ್-ಶುಭಮನ್ ಗಿಲ್ ನಡುವೆ ಚರ್ಚೆಯೇ ಆಗಿಲ್ಲ!

ಆಯ್ಕೆ ಪ್ರಕ್ರಿಯೆಯ ಬಗ್ಗೆ ತಿಳಿದಿರುವ ಜನರು ಹೇಳುವಂತೆ, ಇದೀಗ, ಮೊಹಮ್ಮದ್ ಶಮಿ ಅವರನ್ನು ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ ಅಥವಾ ಪ್ರಸಿದ್ಧ್ ಕೃಷ್ಣ ಅವರಿಗಿಂತ ಉತ್ತಮ ಬೌಲರ್ ಎಂದು ಪರಿಗಣಿಸಲಾಗುವುದಿಲ್ಲ.

ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತದ ಆಯ್ಕೆ ಸಮಿತಿಯು ಮೊಹಮ್ಮದ್ ಶಮಿ ಅವರನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ರೆವ್‌ಸ್ಪೋರ್ಟ್ಸ್ ಪ್ರಕಾರ, ಅನುಭವಿ ವೇಗಿ ಹೆಸರು ಆಯ್ಕೆ ಸಮಿತಿ ಸಭೆಯಲ್ಲಿಯೂ ಪ್ರಸ್ತಾಪವಾಗಿಲ್ಲ. ಜನವರಿ 11 ರಂದು ಪ್ರಾರಂಭವಾಗುವ ಏಕದಿನ ಪಂದ್ಯಗಳಿಗೆ ಅವರನ್ನು ಪರಿಗಣಿಸಬಹುದು ಎಂದು ಅನೇರ ವರದಿಗಳು ಸೂಚಿಸಿದ್ದವು, ಆದರೆ, ಅವರ ಅಂತರರಾಷ್ಟ್ರೀಯ ಮರಳುವಿಕೆ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಇದು ಅಂತ್ಯ ಹಾಡಿದೆ.

ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಶನಿವಾರ ಜೈಪುರದಲ್ಲಿ ಮುಂಬೈ ಮತ್ತು ಮಹಾರಾಷ್ಟ್ರ ನಡುವಿನ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಅವರ ಜೊತೆಗೆ ಸಹ ಆಯ್ಕೆದಾರ ಆರ್‌ಪಿ ಸಿಂಗ್ ಕೂಡ ಇದ್ದರು. ತಂಡದ ಸಭೆ ಆನ್‌ಲೈನ್‌ನಲ್ಲಿ ನಡೆಯಿತು ಮತ್ತು ಇದು ಸಾಮಾನ್ಯ ಪ್ರಕ್ರಿಯೆಯಾಗಿತ್ತು. ಆದರೆ, ಸಭೆಯಲ್ಲಿ ಶಮಿ ವಿಚಾರ ಚರ್ಚೆಗೆ ಬಾರಲೇ ಇಲ್ಲ. ವಿಷಾಹಾರ ಸೇವನೆಯಿಂದಾಗಿ ಸಿಕ್ಕಿಂ ವಿರುದ್ಧದ ಪಂಜಾಬ್ ವಿಜಯ್ ಹಜಾರೆ ಟ್ರೋಫಿ (ವಿಎಚ್‌ಟಿ) ಪಂದ್ಯವನ್ನು ತಪ್ಪಿಸಿಕೊಂಡ ನಂತರ ನಾಯಕ ಶುಭಮನ್ ಗಿಲ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, 34 ವರ್ಷ ವಯಸ್ಸಿನ ಶಮಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಗತ್ಯವಾದ ಫಿಟ್‌ನೆಸ್ ಮಟ್ಟವನ್ನು ಮರಳಿ ಪಡೆದಿದ್ದಾರೆ ಎಂದು ಆಯ್ಕೆದಾರರು ಮತ್ತು ತಂಡದ ಆಡಳಿತ ಮಂಡಳಿಗೆ ಮನವರಿಕೆಯಾಗಿಲ್ಲ.

2023ರ ಏಕದಿನ ವಿಶ್ವಕಪ್ ಫೈನಲ್ ನಂತರ ಉಂಟಾದ ಗಾಯದಿಂದ ಚೇತರಿಸಿಕೊಂಡ ನಂತರ ಮೊಹಮ್ಮದ್ ಶಮಿ ಆಟಕ್ಕೆ ಮರಳಿದಾಗಿನಿಂದಲೂ, ಅವರು ಉತ್ತಮ ಲಯದಲ್ಲಿ ಕಾಣುತ್ತಿಲ್ಲ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರು ಬಹಳಷ್ಟು ವಿಕೆಟ್‌ಗಳನ್ನು ಪಡೆದಿದ್ದರೂ, ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮೂಡಿ ಬರಲಿಲ್ಲ.

ಆಯ್ಕೆ ಪ್ರಕ್ರಿಯೆಯ ಬಗ್ಗೆ ತಿಳಿದಿರುವ ಜನರು ಹೇಳುವಂತೆ, ಇದೀಗ, ಮೊಹಮ್ಮದ್ ಶಮಿ ಅವರನ್ನು ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ ಅಥವಾ ಪ್ರಸಿದ್ಧ್ ಕೃಷ್ಣ ಅವರಿಗಿಂತ ಉತ್ತಮ ಬೌಲರ್ ಎಂದು ಪರಿಗಣಿಸಲಾಗುವುದಿಲ್ಲ. ಈ ಬೌಲರ್‌ಗಳಿಗಿಂತ ಅವರು ಸದ್ಯ ಸುಧಾರಿಸಿದಂತೆ ಕಾಣದ ಕಾರಣ, ದೇಶೀಯ ಕ್ರಿಕೆಟ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಸಹ, ಆಯ್ಕೆದಾರರು ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೀರ್ಘಾವಧಿ ಆಯ್ತು, ಈಗ ಪೂರ್ಣಾವಧಿ ಆಸೆ ಬಿಚ್ಚಿಟ್ಟ ಸಿದ್ದರಾಮಯ್ಯ; ಹೈಕಮಾಂಡ್ ಮೇಲೆ ಪೂರ್ಣ ವಿಶ್ವಾಸ ಎಂದ CM; Video

ಪಾಕ್-ಚೀನಾಗೆ ಶಾಕ್! ಭಾರತೀಯ ಸೇನೆ ಕೈ ಸೇರಲಿದೆ ಸ್ವದೇಶಿ ನಿರ್ಮಿತ 'ಮಾರಕಾಸ್ತ್ರ'; ಜಗತ್ತಿನಲ್ಲೇ ಮೊದಲು!

ಕರೂರ್ ಕಾಲ್ತುಳಿತ ಪ್ರಕರಣ: ದಳಪತಿ ವಿಜಯ್ ಗೆ CBI ಶಾಕ್, ಸಮನ್ಸ್ ಜಾರಿ!

ತಿರುಪಾರಂಕುಂದ್ರಂ ಬೆಟ್ಟ ವಿವಾದ: ದೀಪ ಬೆಳಗಲು ಹಿಂದೂಗಳಿಗೆ ಅನುಮತಿ, ತೀರ್ಪು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ದೆಹಲಿ: ಯುವಕನಿಗೆ ಒದ್ದು, ಹೊಡೆದು ಕೊಂದ ಆರು ಬಾಲಕರು!

SCROLL FOR NEXT